Tumakuru: ಮಸೀದಿ ಪಕ್ಕದಲ್ಲಿರುವ ಕರಗಲಮ್ಮ ದೇವಿ ಪೂಜೆಗೆ ಮುಸ್ಲಿಮರ ವಿರೋಧ: ಗ್ರಾಮದಲ್ಲಿ ಬಿಗುವಿನ ವಾತಾವರಣ

ಮಸೀದಿ ಪಕ್ಕದಲ್ಲಿರುವ ಹಿಂದೂ ದೇವರ ಪೂಜೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು, ಇದಕ್ಕೆ ಹಿಂದೂ ಸಮುದಾಯ ಆಕ್ರೋಶಗೊಂಡಿದೆ.

Tumakuru: ಮಸೀದಿ ಪಕ್ಕದಲ್ಲಿರುವ ಕರಗಲಮ್ಮ ದೇವಿ ಪೂಜೆಗೆ ಮುಸ್ಲಿಮರ ವಿರೋಧ: ಗ್ರಾಮದಲ್ಲಿ ಬಿಗುವಿನ ವಾತಾವರಣ
Edited By:

Updated on: Jul 04, 2023 | 2:30 PM

ಮುಖ್ಯಾಂಶಗಳು

  • ಮಸೀದಿ ಬಳಿಯ ಕರಗಲಮ್ಮ ದೇಗುಲದ ಕಲ್ಲಿಗೆ ಪೂಜೆಗೆ ವಿರೋಧ
  • ಪೂಜೆ ಮಾಡದಂತೆ ಮುಸ್ಲಿಂ ಸಮುದಾಯದಿಂದ ತಡೆಯಾಜ್ಞೆ
  • ತುಮಕೂರು ಬಳಿಯ ಕೆಸರುಮಡು ಗ್ರಾಮದಲ್ಲಿ ನಡೆದ ಘಟನೆ

ತುಮಕೂರು: ಮಸೀದಿ(mosque) ಬಳಿ ಇರುವ ಕರಗಲಮ್ಮ ದೇಗುಲದ(Temple) ಮೂರ್ತಿಗೆ ಪೂಜೆ ಮಾಡಲು ಮುಸ್ಲಿಮರು (muslim) ವಿರೋಧ ವ್ಯಕ್ತಪಡಿಸಿರುವ ಘಟನೆ ತುಮಕೂರು(Tumakuru) ಬಳಿಯ ಕೆಸರುಮಡು ಗ್ರಾಮದಲ್ಲಿ ನಡೆದಿದೆ. ಮಸೀದಿ ಪಕ್ಕದಲ್ಲಿರುವ ಕರಗಲಮ್ಮಗೆ ಯಾವುದೆ ಕಾರಣಕ್ಕೂ ಪೂಜೆ ಮಾಡದಂತೆ ಮುಸ್ಲಿಮರು ಅಡ್ಡಿಪಡಿಸಿದ್ದಾರೆ. ಇದರಿಂದ ಆಕ್ರೊಶಗೊಂಡ ಗ್ರಾಮಸ್ಥರು ಪದ್ದತಿಯಂತೆ ಮುಂದುವರಿಕೆಗೆ ಪಟ್ಟು ಹಿಡಿದಿದ್ದಾರೆ. ಇದರಿಂದ ಗ್ರಾಂದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಹಾಸನದ ಬಳಿಕ ರಾಯಚೂರಿನ ಶಾಲೆಯೊಂದರಲ್ಲಿ ನಮಾಜ್ ಮಾಡಿಸಿದ ಆರೋಪ; ಹಿಂದೂ ಸಂಘಟನೆಗಳ ಆಕ್ರೋಶ

ಗ್ರಾಮದೇವತೆ ಮಾರಮ್ಮ ಜಾತ್ರೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು, ಇದಕ್ಕೂ ಮುನ್ನ ಉಪ್ಪಾರ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ. ಪೂಜೆ ಮಾಡಿ ಮೊಸರನ್ನ ಹೆಡೆ ಇಡಬೇಕಿತ್ತು. ಆದರೆ ಇದಕ್ಕೆ ಮಸೀದಿ ಪಕ್ಕ ಇರುವ ಕಾರಣ ಮುಸ್ಲಿಂ ಸಮುದಾಯ ವಿರೋದ ವ್ಯಕ್ತಪಡಿಸಿದೆ. ಇದರಿಂದ ಗ್ರಾಮಸ್ಥರು ತೀವ್ರ ಆಕ್ರೊಶಗೊಂಡಿದ್ದು, ಪದ್ದತಿಯಂತೆ ಪೂಜೆ ಮಾಡುತ್ತೇವೆಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬಿಗ್​ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿದೆ.

ಕಟ್ಟಿದ್ದ ಮನೆಯನ್ನು ಕೆಡವಿದ ಗ್ರಾಮಸ್ಥರು

ಚಿಕ್ಕಮಗಳೂರು: ಮನೆ ಜಾಗ ದೇವಾಲಯದ್ದು ಎಂದು ಕಟ್ಟಿದ್ದ ಮನೆಯನ್ನು ಗ್ರಾಮಸ್ಥರು ಕೆಡವಿದ ಘಟನೆ ತರೀಕೆರೆ ತಾಲೂಕಿನ ಎರೆಹಳ್ಳಿ ತಾಂಡ್ಯಾದಲ್ಲಿ ನಡೆದಿದೆ. ಎರೆಹಳ್ಳಿ ತಾಂಡ್ಯದ ರಾಮಭೋವಿ ಎಂಬುವರು ಕಟ್ಟಿದ್ದ ಮನೆಯನ್ನು ತೆರವುಗೊಳಿಸಿದ್ದಾರೆ. ಸರ್ಕಾರಿ ದಾಖಲೆಯಲ್ಲಿ ದೇವಸ್ಥಾನದ ಜಾಗ ಎಂದು ಇದೆ. ಈ ಜಾಗ ದೇವಸ್ಥಾನದ್ದು, ಇಲ್ಲಿ ಯಾಕೆ ಮನೆ ಕಟ್ಟಿದ್ದೀಯಾ ಎಂದು ಪ್ರಶ್ನಿಸಿದ್ದು, ಅಧಿಕೃತವಾಗಿ ಜಾಗ ಮಂಜೂರಾಗಿಲ್ಲ ಎಂದು ಊರಿನ ಜನರೆಲ್ಲ ಸೇರಿ ಮನೆಯ ಹೆಂಚು ತೆಗೆದಿದ್ದಾರೆ. ಇನ್ನು ಅದೇ ಗ್ರಾಮದ ಮತ್ತೊಂದು ಸಮುದಾಯದವರಿಂದ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು, ಬಡ ಕುಟುಂಬದ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:25 pm, Tue, 4 July 23

Follow Us