AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಕಿ ಮುಬಿನಾ ಮಗುವನ್ನು ಹಾಸ್ಟೆಲ್ ವಿದ್ಯಾರ್ಥಿನಿಯರು ಆರೈಕೆ ಮಾಡಬೇಕಂತೆ; ಇಲ್ಲದಿದ್ದರೆ ಆಂತರಿಕ ಅಂಕ ಕಟ್ ಮಾಡ್ತಾರಂತೆ!

ಶಿಕ್ಷಕಿ ಮುಬಿನಾ ಅವರ ಮಗುವನ್ನು ಆರೈಕೆ ಮಾಡೋದು, ಪಾತ್ರೆ ತೊಳೆಯೋದು, ನೆಲ ಒರೆಸುವ ಕೆಲಸ ಮಾಡಬೇಕಂತೆ ವಸತಿ ಶಾಲೆಯ ವಿದ್ಯಾರ್ಥಿನಿಯರು. ಮನೆ ಕೆಲಸ ಮಾಡಿಕೊಡದೇ ಇರುವ ವಿದ್ಯಾರ್ಥಿನಿಯರ ಆಂತರಿಕ ಅಂಕ ಕಟ್ ಮಾಡ್ತಾರೆ ಶಿಕ್ಷಕಿ ಮುಬಿನಾ

ಶಿಕ್ಷಕಿ ಮುಬಿನಾ ಮಗುವನ್ನು ಹಾಸ್ಟೆಲ್ ವಿದ್ಯಾರ್ಥಿನಿಯರು ಆರೈಕೆ ಮಾಡಬೇಕಂತೆ; ಇಲ್ಲದಿದ್ದರೆ ಆಂತರಿಕ ಅಂಕ ಕಟ್ ಮಾಡ್ತಾರಂತೆ!
ಶಿಕ್ಷಕಿ ಮುಬಿನಾ ಮಗುವನ್ನು ಹಾಸ್ಟೆಲ್ ವಿದ್ಯಾರ್ಥಿನಿಯರು ಆರೈಕೆ ಮಾಡಬೇಕಂತೆ; ಇಲ್ಲದಿದ್ದರೆ ಆಂತರಿಕ ಅಂಕ ಕಟ್ ಮಾಡ್ತಾರಂತೆ!
TV9 Web
| Updated By: ಸಾಧು ಶ್ರೀನಾಥ್​|

Updated on:Aug 23, 2022 | 2:41 PM

Share

ತುಮಕೂರು: ವಸತಿ ಶಾಲೆಯಲ್ಲಿರುವ ವಿದ್ಯಾರ್ಥಿನಿಯರನ್ನು ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕನ್ನಡ ಶಿಕ್ಷಕಿ ಮುಬಿನಾ ವಿರುದ್ಧ ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ (girl students allegation ). ತುಮಕೂರು ತಾಲೂಕು ಹೆಬ್ಬೂರಿನ ನರಸಾಪುರದ ಮೊರಾರ್ಜಿ ವಸತಿ ಶಾಲೆಯಲ್ಲಿ (Tumkur Morarji Desai Modal Residential School) ಈ ಪ್ರಕರಣ ನಡೆದಿದೆ. ಶಿಕ್ಷಕಿ ಮುಬಿನಾ ಅವರ ಮಗುವನ್ನು ಆರೈಕೆ ಮಾಡೋದು, ಪಾತ್ರೆ ತೊಳೆಯೋದು, ನೆಲ ಒರೆಸುವ ಕೆಲಸ ಮಾಡಬೇಕಂತೆ ವಸತಿ ಶಾಲೆಯ ವಿದ್ಯಾರ್ಥಿನಿಯರು. ಮನೆ ಕೆಲಸ ಮಾಡಿಕೊಡದೇ ಇರುವ ವಿದ್ಯಾರ್ಥಿನಿಯರ ಆಂತರಿಕ ಅಂಕ ಕಟ್ ಮಾಡ್ತಾರೆ ಶಿಕ್ಷಕಿ ಮುಬಿನಾ (teacher mubina).

ಇನ್ನು ಶಿಕ್ಷಕಿ ಮುಬಿನಾ ಕಾರ್ತಮಂತ್ರ ಹೇಗಿದೆಯೆಂದರೆ ವಿದ್ಯಾರ್ಥಿನಿಯರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಶಿಕ್ಷಕಿಗಾಗಿ ವಿದ್ಯಾರ್ಥಿನಿಯರ ಆ ಎರಡು ಗುಂಪಿನ ನಡುವೆ ಗಲಾಟೆ, ವಿದ್ಯಾರ್ಥಿನಿಯರ ನಡುವೆ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳುವುದನ್ನು ವಾಡಿಕೆ ಮಾಡಿಕೊಂಡಿದ್ದಾರೆ. ಮಾಧ್ಯಮಗಳ ಕ್ಯಾಮರಾ ಮುಂದೆಯೂ ವಿದ್ಯಾರ್ಥಿನಿಯರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ.

ಮೊರಾರ್ಜಿ ಶಾಲಾ ಆವರಣದಲ್ಲಿ ಹೈ ಡ್ರಾಮಾ:

ಜೊತೆಗೆ ವಿದ್ಯಾರ್ಥಿನಿಯರು ಪುರುಷ ಟೀಚರ್ ಜೊತೆ ಮಾತನಾಡಿದ್ರೆ ಶಿಕ್ಷಕಿ ಮುಬೀನಾ ಅವಾಚ್ಯ ಹಾಗೂ ಅಶ್ಲೀಲ ಶಬ್ದಗಳಿಂದ ನಿಂದಿಸುತ್ತಾರಂತೆ. ಒಂದು ವರ್ಷದ ಗಂಡು ಮಗು ಜೊತೆಗೆ ಕುಟುಂಬ ಸಮೇತ ಕ್ವಾಟ್ರಸ್ ನಲ್ಲಿ ಮುಬೀನಾ ಕುಟುಂಬ ಠಿಕಾಣಿ ಹೂಡಿದೆ. ಶಿಕ್ಷಕಿ ವಿರುದ್ಧ ಎಸ್ ಎಸ್ ಎಲ್ ಸಿಯ ಹಲವು ವಿದ್ಯಾರ್ಥಿನಿಯರಿಂದ ಈ ಗಂಭೀರ ಆರೋಪ ಕೇಳಿಬಂದಿದೆ. ಶಿಕ್ಷಕಿ ವಿದ್ಯಾರ್ಥಿನಿಯರನ್ನ ಬಳಸಿಕೊಳ್ಳುವ ಬಗ್ಗೆ ತುಮಕೂರು ಸಮಾಜ ಕಲ್ಯಾಣ ಜಂಟಿ ನಿರ್ದೇಶಕರಿಗೂ ದೂರು ಸಲ್ಲಿಸಲಾಗಿದೆ. ಆದರೆ ದೂರು ನೀಡಿದರೂ ಜಿಲ್ಲಾ ಸಮಾಜ‌ ಕಲ್ಯಾಣ ಅಧಿಕಾರಿ ಪ್ರೇಮಾ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಕೊರಟಗೆರೆ ಕ್ಯಾತಗಾನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗಲಿ ರೈತ ಸಾವು

ಕೊರಟಗೆರೆ: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾತಗಾನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗಲಿ ರೈತ ಸಾವಿಗೀಡಾದ ಘಟನೆ ನಡೆದಿದೆ. ಗ್ರಾಮದ ಮಹೇಶ್ (32) ತಮ್ಮ ಹೊಲದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟ ದುರ್ದೈವಿ. ಘಟನೆಯ ಬಳಿಕ ಕೆಇಬಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೋಟದಲ್ಲಿ ವಿದ್ಯುತ್ ತಂತಿ ಹಾದುಹೋಗಿದ್ದು, ವಿದ್ಯುತ್ ಲೈನ್ ಸರಿಪಡಿಸುವಂತೆ ಮಹೇಶ್ ಈ ಹಿಂದೆ ಮನವಿ ಮಾಡಿದ್ದರು. ಆದರೂ ಕೆಇಬಿ ಸಿಬ್ಬಂದಿ ತಲೆಕೆಡಿಸಿಕೊಂಡಿರಲಿಲ್ಲ ಎಂದು ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸೂಕ್ತ ಪರಿಹಾರ ನೀಡುವಂತೆಯೂ ಒತ್ತಾಯ ಮಾಡಿದ್ದಾರೆ. ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 2:34 pm, Tue, 23 August 22

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!