AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಇಬ್ಬರು ಯುವಕರಿಂದ ಮನೆಮನೆಗೆ ತೆರಳಿ ಸೇವೆ

ಇದನ್ನರಿತ ಮಹದೇವ ಮತ್ತು ಸಿದ್ಧರಾಜು ದಲಿತರಿಗೆ ಕ್ಷೌರ ಸೇವೆ ನೀಡಲು ಮುಂದಾದರು. ಕಳೆದ 8 ವರ್ಷಗಳಿಂದ ದಲಿತರಿಗೆ ಎಂದೇ ಕ್ಷೌರ ಮಾಡುತ್ತಿದ್ದು, ಸರ್ಕಾರ ಆರ್ಥಿಕ ಸಹಾಯ ನೀಡಿದರೆ ಸ್ವಂತ ಸಲೂನ್ ತೆರೆಯುತ್ತೇವೆ ಎಂದು ಮಹದೇವ ಹೇಳುತ್ತಾರೆ.

ಮೈಸೂರಿನಲ್ಲಿ ಇಬ್ಬರು ಯುವಕರಿಂದ ಮನೆಮನೆಗೆ ತೆರಳಿ ಸೇವೆ
ಪ್ರಾತಿನಿಧಿಕ ಚಿತ್ರ
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 19, 2021 | 9:49 PM

ಮೈಸೂರು: ದಲಿತ ಸಮುದಾಯದ ಕುಟುಂಬಗಳಿಗೆ ಕ್ಷೌರ ಸೇವೆ ಒದಗಿಸುವ ಮೂಲಕ ಮೈಸೂರಿನ ಇಬ್ಬರು ಯುವಕರು ಸಾಮಾಜಿಕ ಸಾಮರಸ್ಯ ಮೆರೆದಿದ್ದಾರೆ. ಮೈಸೂರಿನ ಕಪ್ಪಸೋಗೆ, ಕುರುಹುಂಡಿ, ಗೌಡರಹುಂಡಿ ಮತ್ತು ಮಾದನಹಳ್ಳಿಯಲ್ಲಿ ವಾಸವಿದ್ದ ದಲಿತ ಕುಟುಂಬಗಳು ಸ್ಥಳೀಯ ಕ್ಷೌರದಂಗಡಿಗಳಲ್ಲಿ ಸೇವೆ ಪಡೆಯುತ್ತಿರಲಿಲ್ಲ. ಇದನ್ನರಿತ ಕೆ. ಪಿ ಮಹಾದೇವ ಮತ್ತು ಅವರ ಸಹೋದರ ಕೆ.ಪಿ ಸಿದ್ಧರಾಜು ದಲಿತ ಕುಟುಂಬಗಳ ಸದಸ್ಯರಿಗೆ ಕ್ಷೌರ ಸೇವೆ ನೀಡುತ್ತಿದ್ದಾರೆ.

ದಲಿತ ಸಮುದಾಯದ ಜನರಿಗೆ ಕ್ಷೌರ ಮಾಡಿದರೆ ಮೇಲ್ವರ್ಗದ ಜನರು ತಮ್ಮ ಅಂಗಡಿಗೆ ಬರುವುದಿಲ್ಲ. ವ್ಯವಹಾರಕ್ಕೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ದಲಿತರು ಕ್ಷೌರದ ಅಂಗಡಿಗಳಿಗೆ ಹೋಗುತ್ತಿರಲಿಲ್ಲ. ಇದನ್ನರಿತ ಮಹದೇವ ಮತ್ತು ಸಿದ್ಧರಾಜು ದಲಿತರಿಗೆ ಕ್ಷೌರ ಸೇವೆ ನೀಡಲು ಮುಂದಾದರು. ಕಳೆದ 8 ವರ್ಷಗಳಿಂದ ದಲಿತರಿಗೆ ಎಂದೇ ಕ್ಷೌರ ಮಾಡುತ್ತಿದ್ದು, ಸರ್ಕಾರ ಆರ್ಥಿಕ ಸಹಾಯ ನೀಡಿದರೆ ಸ್ವಂತ ಸಲೂನ್ ತೆರೆಯುತ್ತೇವೆ ಎಂದು ಮಹದೇವ ಹೇಳುತ್ತಾರೆ.

‘ನಮಗೆ 30 ಗುಂಟೆ ಒಣಭೂಮಿಯಿದೆ. ಅದರಲ್ಲಿ ಅಲ್ಪಸ್ವಲ್ಪ ಕೃಷಿ ಮಾಡುವ ಹಂಬಲ ಹೊಂದಿದ್ದೇವೆ, ಇತರರ ಕೃಷಿ ಭೂಮಿಯಲ್ಲೂ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತೇವೆ. ಕೆಲಸ ಇಲ್ಲದ ದಿನಗಳಲ್ಲಿ ಎಲೆಕ್ಟ್ರಿಶಿಯನ್ ಆಗಿಯೂ ಕೆಲಸ ಮಾಡುತ್ತೇವೆ’ ಎಂದು ಮಹದೇವ್ ಹೇಳುತ್ತಾರೆ. ಕೊರೊನಾ ಪಿಡುಗು ವ್ಯಾಪಕವಾಗಿ ಆವರಿಸಿದ ದಿನಗಳಲ್ಲೂ ದಲಿತ ಸಮುದಾಯದ ಜನರಿಗೆ ಕ್ಷೌರ ಸೇವೆ ಒದಗಿಸಿದ್ದೇವೆ. ಕ್ಷೌರಕ್ಕೆ ₹40 ಮತ್ತು ಶೇವಿಂಗ್​ಗೆ ₹20ನ್ನು ಅವರು ಪಡೆಯುತ್ತಾರೆ. ಅಲ್ಲದೇ ಅಗತ್ಯ ಇರುವವರಿಗೆ ಮನೆಮನೆಗೆ ತೆರಳಿ ಸೇವೆಯನ್ನೂ ನೀಡುತ್ತೇವೆ’ ಎಂದು ಮಹದೇವ್ ವಿವರಿಸುತ್ತಾರೆ.

ಹೀಗೆ ಮೈಸೂರು ಭಾಗದ ದಲಿತ ಸಂಕಥನಗಳು ಒಂದೊಂದಾಗಿಯೇ ತೆರೆದುಕೊಳ್ಳುತ್ತದೆ. ಕೆಲವರಾದರೂ ಈ ಗೋಡೆಗಳನ್ನು ಮುರಿಯುತ್ತಿರುವುದು ಕೊಂಚ ಸಮಾಧಾನಕರ ವಿಷಯವಾಗಿದೆ. ದಲಿತರಿಗೆ ನಿರಾಕರಿಸಲಾದ ಸೇವೆಯನ್ನು ಅವಕಾಶವೆಂದೇ ತಿಳಿದು ಹೊಸ ಬಗೆಯಲ್ಲಿ ಸಾಮಾಜಿಕ ಸೌಹಾರ್ದತೆಯನ್ನು ಸೃಷ್ಟಿಸುತ್ತಿದ್ದಾರೆ. ಮೈಸೂರಿನ ಕೆ ಪಿ ಮಹಾದೇವ ಮತ್ತು ಅವರ ಸಹೋದರ ಕೆ ಪಿ ಸಿದ್ಧರಾಜು ಅವರ ಸೇವೆ ಇನ್ನಷ್ಟು ಮುನ್ನೆಲೆಗೆ ಬರಬೇಕಿದೆ.

ಇದನ್ನೂ ಓದಿ: ಒಂದೇ ಬೆಡ್​ನಲ್ಲಿ ಇಬ್ಬರಿಗೆ ಚಿಕಿತ್ಸೆ, ಆಸ್ಪತ್ರೆ ಹೊರಗೆ ಹೆಣಗಳು; ಕೊರೊನಾದಿಂದ ಪರಿಸ್ಥಿತಿ ಭೀಕರ

ಭೀಮಾ-ಕೋರೆಗಾಂವ್ ಕದನಕ್ಕೆ 203 ವರ್ಷ; ಭಾರತದ ದಲಿತ ಕಥನದಲ್ಲಿ ಈ ಯುದ್ಧಕ್ಕೆ ಏಕಿಷ್ಟು ಪ್ರಾಮುಖ್ಯ?

(Two Dalit brothers offer doorstep haircut social harmony)

Published On - 3:44 pm, Fri, 16 April 21

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ