ಒಂದೇ ವಾರದಲ್ಲಿ ಎರಡೆರೆಡು ಕೊಲೆ: ಬೆಂಗಳೂರಿನ ನಟೋರಿಯಸ್ ಕೊಲೆಗಾರನ ಹಿನ್ನೆಲೆ ಭಯಾನಕ

ಬೆಂಗಳೂರಿನಲ್ಲಿ ನಟೋರಿಯಸ್ ಕೊಲೆಗಾರನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ವಾರದಲ್ಲಿ ಎರಡು ಕೊಲೆ ಮಾಡಿದ್ದಾನೆ. ವೃತ್ತಿ ಪರ ಕ್ರಿಮಿನಲ್ ಹಿನ್ನಲೆ ಹೊಂದಿದ್ದಾನೆ. ಈ ಹಿಂದೆ ಲೈಂಗಿಕ ದೌರ್ಜನ್ಯ, ದರೋಡೆ ಸಂಚು ಸೇರಿದಂತೆ ಆತನ ವಿರುದ್ಧ ಸುಬ್ರಮಣ್ಯಪುರ, ಬನಶಂಕರಿ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಸದ್ಯ ವಿಚಾರಣೆ ಮಾಡಿದ ಪೊಲೀಸರು ದಂಗಾಗಿದ್ದಾರೆ.

ಒಂದೇ ವಾರದಲ್ಲಿ ಎರಡೆರೆಡು ಕೊಲೆ: ಬೆಂಗಳೂರಿನ ನಟೋರಿಯಸ್ ಕೊಲೆಗಾರನ ಹಿನ್ನೆಲೆ ಭಯಾನಕ
ಒಂದೇ ವಾರದಲ್ಲಿ ಎರಡೆರೆಡು ಕೊಲೆ: ಬೆಂಗಳೂರಿನ ನಟೋರಿಯಸ್ ಕೊಲೆಗಾರನ ಹಿನ್ನೆಲೆ ಭಯಾನಕ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: May 27, 2024 | 3:07 PM

ಬೆಂಗಳೂರು, ಮೇ 27: ಮೇ 12ರಂದು ಕುಡಿದ ಮತ್ತಿನಲ್ಲಿ ಜಯನಗರದ 7ನೇ ಬಡಾವಣೆ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ (murder) ಮಾಡಿದ್ದ ಆರೋಪಿ ಗಿರೀಶ್​ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಆತನನ್ನು ವಿಚಾರಣೆ ಮಾಡಿದ ಪೊಲೀಸರೇ ಇದೀಗ ಒಂದು ಕ್ಷಣ ದಂಗಾಗಿದ್ದಾರೆ. ಏಕೆಂದರೆ ಆತನ ಹಿನ್ನೆಲೆಯೇ ಭಯಾನಕವಾಗಿದೆ. ವೃತ್ತಿ ಪರ ಕ್ರಿಮಿನಲ್ ಹಿನ್ನಲೆ ಹೊಂದಿರುವ ಬಂಧಿತ ಆರೋಪಿ ಗಿರೀಶ್​ ಒಂದೇ ವಾರದಲ್ಲಿ ಎರಡೆರೆಡು ಕೊಲೆ ಮಾಡಿದ್ದಾನೆ.

ಈ ಹಿಂದೆ ಲೈಂಗಿಕ ದೌರ್ಜನ್ಯ, ದರೋಡೆ ಸಂಚು ಸೇರಿದಂತೆ ನಾಲ್ಕು ಪ್ರಕರಣಗಳು ಸುಬ್ರಮಣ್ಯಪುರ, ಬನಶಂಕರಿ ಠಾಣೆಗಳಲ್ಲಿ ಈತನ ವಿರುದ್ಧ ದಾಖಲಾಗಿತ್ತು. ಜೈಲು ವಾಸ ಅನುಭವಿಸಿ ಬಂದಿದ್ದ ಬಂಧಿತ ಆರೋಪಿ ಗಿರೀಶ್​​, 2020ರಲ್ಲಿ 10 ತಿಂಗಳ ಜೈಲು ವಾಸ ಅನುಭವಿಸಿದ್ದ. ಆ ಬಳಿಕ ಹೋಟೆಲ್​​​ನಲ್ಲಿ ಸಹಾಯಕನಾಗಿ ಮತ್ತು ಜೊತೆಗೆ ಗಾರೆ ಕೆಲಸ ಕೂಡ ಮಾಡಿಕೊಂಡಿದ್ದ.

ಇದನ್ನೂ ಓದಿ: ಕುಡಿದು ಬಂದು ರಸ್ತೆ ಬದಿ ಮಲಗಿದ್ದವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸುತ್ತಿದ್ದ ಕಿಲ್ಲರ್‌ ಅಂದರ್‌!

ಈ ನಡುವೆ ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಕಳ್ಳತನ ಶುರು ಮಾಡಿದ್ದ. ಗೆಳೆಯ ಸುರೇಶ್ ಎಂಬಾತನ ಜೊತೆಗೂಡಿ ಕಳ್ಳತನಕ್ಕೆ ಇಳಿದಿದ್ದರು. ರಾತ್ರಿ ವೇಳೆ ರಸ್ತೆಯಲ್ಲಿ ಮಲಗುವವರೇ ಇವರ ಟಾರ್ಗೆಟ್​. ರಸ್ತೆಯಲ್ಲಿ ಮಲಗಿದ್ದವರ ವಸ್ತುಗಳನ್ನು ಇಬ್ಬರು ಕಳ್ಳತನ ಮಾಡುತ್ತಿದ್ದರು. ಸಿಟಿ ಮಾರ್ಕೆಟ್ ಹಾಗೂ ಮೆಜೆಸ್ಟಿಕ್ ಸುತ್ತಮುತ್ತ ಒಂಟಿಯಾಗಿದ್ದವರನ್ನು ಬೆದರಿಸಿ ಸುಲಿಗೆ ಮಾಡುತಿದ್ದರು.

ಇದನ್ನೂ ಓದಿ: ಭಜನಾ ಮಂಡಳಿಗೆ ಸೇರಿಸಿಕೊಳ್ಳದಿದ್ದಕ್ಕೆ ಆಕ್ರೋಶ: ಚಾಕುವಿನಿಂದ ಇರಿದು ಹಲ್ಲೆ, ಆರೋಪಿ ವಶಕ್ಕೆ

ಕದ್ದ ಮೊಬೈಲ್​ ವಿಚಾರವಾಗಿ ಮೇ.18ರಂದು ಸಿಟಿ ಮಾರ್ಕೆಟ್​​ನಲ್ಲಿ ಇಬ್ಬರು ಜಗಳ ಮಾಡಿದ್ದಾರೆ. ಈ ವೇಳೆ ಸುರೇಶ್​ನ ಮೇಲೆ ಗಿರೀಶ್​ನಿಂದ ಹಲ್ಲೆ ಮಾಡಲಾಗಿದೆ. ಬಳಿಕ ತಲೆ ಮೇಲೆ ಕಲ್ಲು ಹಾಕಿ ಹತ್ಯೆಗೈದಿದ್ದಾನೆ. ಇದಕ್ಕೂ ಕೆಲ ದಿನಗಳ ಹಿಂದೆ ಗಿರೀಶ್​ ಮತ್ತೊಂದು ಕೊಲೆ ಮಾಡಿದ್ದ. ಸಿಗರೇಟ್ ಕೊಡದೇ ಇದ್ದ ಕಾರಣಕ್ಕೆ ಕೊಲೆ ಮಾಡಿದ್ದ. ಮೇ 12ರಂದು ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಸದ್ಯ ಈ ಸಂಬಂಧ ಬನಶಂಕರಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.