AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rain: ಕರಾವಳಿಯಲ್ಲಿ ಕಡಿಮೆಯಾಯ್ತು ಮಳೆ; ಪರಿಹಾರ ಕಾರ್ಯ ಚುರುಕು, ಇದು ತಾತ್ಕಾಲಿಕ ಎಂದ ಹವಾಮಾನ ಇಲಾಖೆ

ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 127 ಕೋಟಿ ನಷ್ಟವಾಗಿದ್ದು, 1068ಮಿ.ಮೀ ವಾಡಿಕೆ ಮಳೆಯಾಗಿದೆ. ಜಿಲ್ಲೆಯಲ್ಲಿ 1186 ಮಿಲಿ ಮೀಟರ್ ಮಳೆ ಸುರಿದಿದ್ದು, ಶೇ .11ಮಿ.ಮಿ ಮಳೆ ಹೆಚ್ಚಾಗಿದೆ.

Karnataka Rain: ಕರಾವಳಿಯಲ್ಲಿ ಕಡಿಮೆಯಾಯ್ತು ಮಳೆ; ಪರಿಹಾರ ಕಾರ್ಯ ಚುರುಕು, ಇದು ತಾತ್ಕಾಲಿಕ ಎಂದ ಹವಾಮಾನ ಇಲಾಖೆ
TV9 Web
| Edited By: |

Updated on: Jul 13, 2022 | 7:28 AM

Share

ಉಡುಪಿ: ಕಳೆದೊಂದು ವಾರದಿಂದ ಸುರಿಯುತ್ತಿರುವ ವಿಪರೀತ ಮಳೆ (Heavy Rain) ಯೂ ಮಂಗಳವಾರ ಕೊಂಚ ವಿರಾಮ ನೀಡಿದ್ದು, ಬಿಸಿಲು ಕಾಣಿಸಿಕೊಂಡಿತು. ಆದರೇ ಹವಾಮಾನ ಇಲಾಖೆ ಇನ್ನೂ ಕೆಲದಿನ ಮಳೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಮಂಗಳವಾರ ಮಧ್ಯಾಹ್ನದ ನಂತರ ಒಂದೆರಡು ಬಾರಿ ಸಣ್ಣ ಪ್ರಮಾಣದ ಮಳೆಯಾಗಿದೆ. ಸೋಮವಾರ ಧಾರಾಕಾರ ಮಳೆಯಾಗಿದ್ದರೂ, ರಾತ್ರಿಯ ಮಳೆ ಕಡಿಮೆಯಾಗಿತ್ತು. ಜಿಲ್ಲೆಯಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಒಂದು ವಾರ ಕಾಲ ರಜೆ ನೀಡಲಾಗಿದ್ದು, ಮಂಗಳವಾರ ಮತ್ತೇ ಶಾಲೆಗಳು ಆರಂಭವಾಗಿವೆ. ಸೋಮವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ 4 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಒಟ್ಟು 31 ಮನೆಗಳಿಗೆ 25,27,000 ರೂ ನಷ್ಟ ಅಂದಾಜಿಸಲಾಗಿದೆ. ಕುಂದಾಪುರ ತಾಲೂಕಿನಲ್ಲಿ 14 ಮನೆಗಳಿಗೆ 10.02 ಲಕ್ಷ ರೂ, ಕಾರ್ಕಳ ತಾಲೂಕಿನ 3 ಮನೆಗಳಿಗೆ 8.30 ಲಕ್ಷ ರೂ. ಬೈಂದೂರು 6 ಮನೆಗಳಿಗೆ 3 ಲಕ್ಷ ರೂ. ಉಡುಪಿ 5 ಮನೆಗಳಿಗೆ 2.75 ಲಕ್ಷ ರೂ. ಮತ್ತು ಬ್ರಹ್ಮಾವರದ 3 ಮನೆಗಳಿಗೆ 1 ಲಕ್ಷ ರೂ. ನಷ್ಟ ಉಂಟಾಗಿದೆ.

ಇದನ್ನೂ ಓದಿ: Karnataka Dams Water Level: ಕೆಆರ್​ಎಸ್ ಶೇ.94ರಷ್ಟು ಭರ್ತಿ, ರಾಜ್ಯದ ಉಳಿದ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿದೆ

ನಿಟ್ಟೆ ಗ್ರಾಮದ ವಾರಿಜ ಪೂಜಾರಿ ಅವರ ಮನೆ ಗೋಡೆಗಾಳಿ ಮಳೆಗೆ ಕುಸಿದು 5,00,000 ರೂ. ಕುಂದಾಪುರ ತಾಲೂಕಿನ ಬೆಳ್ಳಾಳ ಗ್ರಾಮದ ಜಾನಕಿ ಆಚಾರಿ ಅವರ ಮನೆಗೆ ಸಂಪೂರ್ಣ ಹಾನಿಯಾಗಿ 5,00,000 ರೂ. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಜಗದೀಶ್ ಶಿವರಾಮ ಶೆಟ್ಟಿ ಮನೆಯ ಗೋಡೆಗಳು ಸಂಪೂರ್ಣ ಕುಸಿದಿದ್ದು 3,00,000 ರೂ. ಮತ್ತು ಉಡುಪಿ ತಾಲೂಕಿನ ಬೊಮ್ಮಾರಬೆಟ್ಟು ಗ್ರಾಮದ ವಿಶ್ವನಾಥ ದೇವಾಡಿಗ ಅವರ ಮನೆಗೆ ಗಾಳಿಮಳೆಯಿಂದ ಸಂಪೂರ್ಣ ಹಾನಿಯಾಗಿ 1,00,000 ರೂ. ನಷ್ಟ ಉಂಟಾಗಿದೆ. ಕುಂದಾಪುರ ತಾಲೂಕಿನ ಬೆಳ್ಳಾಳ ಗ್ರಾಮದ ಮಂಜುನಾಥ ಬಳೆಗಾರ ಎಂಬವರ ತೋಟಕ್ಕೆ ಭಾಗಶ: ಹಾನಿಯಾಗಿದ್ದು 25,000 ರೂ. ನಷ್ಟವಾಗಿದೆ.

ಇದನ್ನೂ ಓದಿ: ಆಂಜನೇಯ ಜನ್ಮಸ್ಥಳ ವಿವಾದದ ನಡುವೆ ಮತ್ತೊಂದು ವಿವಾದ ಉದ್ಭವ; ಪಂಪಾ ಸರೋವರ ಕುರಿತು ಗುಜರಾತ್ ಪ್ರವಾಸೋದ್ಯಮ ವಿವಾದಾತ್ಮಕ ಟ್ವೀಟ್

ಸೋಮವಾರ ಮುಂಜಾನೆಯಿಂದ ಮಂಗಳವಾರ ಮುಂಜಾನವರೆಗೆ ಜಿಲ್ಲೆಯಲ್ಲಿ ಸರಾಸರಿ 69 ಮಿ.ಮೀಟರ್ ಮಳೆ ದಾಖಲಾಗಿದೆ. ತಾಲೂಕುವಾರು ಉಡುಪಿ 65.90, ಬ್ರಹ್ಮಾವರ 46.30, ಕಾಪು 25, ಕುಂದಾಪುರ 61.90, ಬೈಂದೂರು 121.60, ಕಾರ್ಕಳ 60.90, ಹೆಬ್ರಿ 72.10 ಮಿ.ಮೀ. ಮಳೆಯಾಗಿದೆ. ರಾಜ್ಯದಲ್ಲಿಯೇ ಗರಿಷ್ಟ ಮಳೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿ ಹೊಳೆ ಗ್ರಾಮದಲ್ಲಿ 180.50 ಮಿ.ಮೀ. ದಾಖಲಾಗಿದೆ. ದಕ್ಷೀಣ ಕನ್ನಡದಲ್ಲಿ 20161 ಒಟ್ಟಾರೆ ಮಳೆಯ ಪ್ರಮಾಣವಾಗಿದ್ದು, 1646 ಮೀ.ಮಿ ವಾಡಿಕೆ ಮಳೆಯಾಗಿದೆ. 5 ಜೀವ ಹಾನಿ ಸಂಭವಿಸಿದೆ.

ಕಾರವಾರ: ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 127 ಕೋಟಿ ನಷ್ಟವಾಗಿದ್ದು, 1068ಮಿ.ಮೀ ವಾಡಿಕೆ ಮಳೆಯಾಗಿದೆ. ಜಿಲ್ಲೆಯಲ್ಲಿ 1186 ಮಿಲಿ ಮೀಟರ್ ಮಳೆ ಸುರಿದಿದ್ದು, ಶೇ .11ಮಿ.ಮಿ ಮಳೆ ಹೆಚ್ಚಾಗಿದೆ. ಇನ್ನೂ ಮಳೆ ಹಾನಿಯಿಂದ 13 ಗ್ರಾಮಗಳು ಬಾಧಿತವಾಗಿವೆ. ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ, ಜೋಯಿಡಾ ಮಳೆಯಿಂದ ಬಾಧಿತ ತಾಲೂಕುಗಳಾಗಿವೆ. ಮಳೆಯಿಂದ 698 ಜನ ಬಾದಿತಗೊಂಡಿದ್ದು, ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರ ಸಂಖ್ಯೆ- 209. ತೆರೆದ ಕಾಳಜಿ ಕೇಂದ್ರ- 7. ಜಿಲ್ಲೆಯಲ್ಲಿ ಜೀವ ಹಾನಿ- 3(ಪರಿಹಾರ ವಿತರಿಸಿದೆ) ಜಾನುವಾರು ಸಾವು- 2( ಪರಿಹಾರ ನೀಡಿದೆ).

ಮನೆ ಹಾನಿ ವಿವರ: ಜಿಲ್ಲೆಯಲ್ಲಿ ಒಟ್ಟು ಹಾನಿಯಾದ ಮನೆಗಳ ಸಂಖ್ಯೆ- 273 ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕುಸಿದ ಮನೆ-12 ಜಿಲ್ಲೆಯಲ್ಲಿ ತೀವ್ರ ಹಾನಿ ಯಾದ ಮನೆ-26 ಜಿಲ್ಲೆಯಲ್ಲಿ ಭಾಗಶ: ಹಾನಿಯಾದ ಮನೆಗಳು- 235 (ಎಲ್ಲ ಮನೆಗಳಿಗೆ ಪರಿಹಾರ ನೀಡಲಾಗಿದೆ.)

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಹಾನಿ ವಿವರ: ಶಾಲೆ ಹಾನಿ- 124 – ಮೊತ್ತ- 426.0₹ ಅಂಗನವಾಟಿ-147- ಮೊತ್ತ- 302.2₹ ಇತರ ಕಟ್ಟಡಗಳು- 20 ಮೊತ್ತ-92.5₹

ಜಿಲ್ಲೆಯ ಒಟ್ಟು 499.51km ರಸ್ತೆಗಳು ಹಾನಿಯಾಗಿದ್ದು, 71 ಸೇತುವೆ ಹಾನಿಯಾಗಿದೆ. ಗ್ರಾಮೀಣ ರಸ್ತೆ- 265.5 km -ಮೊತ್ತ -2733.8₹ ರಾಜ್ಯ ಹೆದ್ದಾರಿ-76.96 km ಮೊತ್ತ -1497.4₹ PWD ಮುಖ್ಯ ರಸ್ತೆಗಳು- 157.15km ಮೊತ್ತ- 2528.95 ಸೇತುವೆಗಳು- 71 ಮೊತ್ತ- 2684.5₹

ಜಿಲ್ಲೆಯಲ್ಲಿ ಹೆಸ್ಕಾಂ ಹಾನಿ ವಿವರ: ಲೈನ್ ಕಂಬಗಳು- 1779 ಮೊತ್ತ- 202.96, ಲೈನುಗಳು- 18.51 ಮೊತ್ತ- 8.42₹, ಟ್ರಾನ್ಫಾರ್ಮಗಳು – 77 ಮೊತ್ತ -46.8₹, ಬೆಳೆಹಾನಿ – 0.42 ಹೆ(ತೋಟಗಾರಿಕೆ ಬೆಳೆ), ಕೃಷಿ – ಯಾವುದೇ ಹಾನಿಯಾಗಿಲ್ಲ.

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ