ಜೈಲಿಂದ ಹೊರ ಬರುವ ಆಸೆಯಲ್ಲಿದ್ದ ಕಮಲಾಕರ ಭಟ್​​ಗೆ ನಿರಾಸೆ: ಇನ್ನೊಂದು ಕೇಸ್ ದಾಖಲು

ವಸಂತ್ ನಾಯ್ಕ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಜ್ಯೋತಿಷಿ ಕಮಲಾಕರ್‌ ಭಟ್,​ ಇನ್ನೇನು ಜೈಲಿನಿಂದ ಹೊರ ಬರುತ್ತೇನೆ ಎಂಬ ಆಸೆ ಇದೀಗ ಮಣ್ಣುಪಾಲಾಗಿದೆ. ಏಕೆಂದರೆ ಕಮಲಾಕರ್‌ ಭಟ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಫೋಕ್ಸೊ ಕೇಸ್ ದಾಖಲಾಗಿದೆ.

ಜೈಲಿಂದ ಹೊರ ಬರುವ ಆಸೆಯಲ್ಲಿದ್ದ ಕಮಲಾಕರ ಭಟ್​​ಗೆ ನಿರಾಸೆ: ಇನ್ನೊಂದು ಕೇಸ್ ದಾಖಲು
ಕಮಲಾಕರ ಭಟ್
Image Credit source: oneindia
Edited By:

Updated on: Feb 21, 2026 | 7:25 PM

ಕಾರವಾರ, ಫೆಬ್ರವರಿ 21: ಜ್ಯೋತಿಷಿಯಾಗಿ ಪ್ರಸಿದ್ಧಿ ಪಡೆದಿದ್ದ ಕಮಲಾಕರ ಭಟ್ (Kamalakar Bhat)​​, ಹಣ, ಆಸ್ತಿ, ರಾಜಕೀಯ ನಾಯಕರ ಬೆಂಬಲ ಸಂಪಾದಿಸಿದ್ಧ. ಆದರೆ ಸುಚಿತ್ರಾಳ ಸಹವಾಸ ಮಾಡಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲು ಕಂಬಿ ಎಣಿಸುವಂತಾಗಿದೆ. ಹೀಗಿರುವಾಗಲೇ ಇದೀಗ ಕಮಲಾಕರ ಭಟ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ (POCSO Case) ದಾಖಲಾಗಿದೆ. ಹೀಗಾಗಿ ಸದ್ಯ ಜೈಲಿನಿಂದ ಹೊರಬರುವುದು ಭಾರೀ ಕಷ್ಟವಾಗಿದೆ.

ವಸಂತ್ ನಾಯ್ಕ ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್‌ ಸದ್ಯ ಜೈಲು ಸೇರಿದ್ದಾರೆ. ಈ ಮಧ್ಯೆ ಅವರ ವಿರುದ್ಧ ಇನ್ನೊಂದು ಕೇಸ್ ದಾಖಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಆರೋಪದಡಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ತುಂಗಾನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಜ್ಯೋತಿಷ್ಯ ಹೇಳ್ತಿದ್ದವನ ಭವಿಷ್ಯವೇ ತಲೆಕೆಳಗಾಯ್ತು: ಕಮಲಾಕರ್ ಭಟ್‌-ಸುಚಿತ್ರಾಳ ಮತ್ತಷ್ಟು ಶೋಕಿ ಪುರಾಣ ಬಯಲು

ಕಳೆದ ಕೆಲ ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಕಮಲಾಕರ ಭಟ್, ಕೊಲೆಯ ವಿಚಾರವಾಗಿ ಪೊಲೀಸ್‌ ಹತ್ತಾರು ಪ್ರಶ್ನೆಗಳನ್ನ ಕೇಳಿದ್ದಾರೆ. ಈ ವೇಳೆ ಕೊಲೆಯಾದ ಸ್ಥಳದಲ್ಲಿ ತಾನು ಇರಲಿಲ್ಲ, ಕೊಲೆ ಆದ ಸಂದರ್ಭದಲ್ಲಿ ನಾನು ಬೇರೆ ಕಡೆ ಇದ್ದೆ. ಬೇಕಾದರೆ ನನ್ನ ಮೊಬೈಲ್ ಲೊಕೇಶನ್ ಚೆಕ್ ಮಾಡಿ ಎಂದಿದ್ದರು.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ: ದೂರು ನೀಡಿದ್ದಕ್ಕೆ ಹಲ್ಲೆ; ಓರ್ವ ಸಾವು

ಲೊಕೇಶನ್ ಚೆಕ್ ಮಾಡಿದಾಗ ಕೊಲೆಯಾದ ಸಂದರ್ಭದಲ್ಲಿ ಅಲ್ಲಿ ಇರಲಿಲ್ಲ. ಸಿದ್ದಾಪುರದಲ್ಲಿ ಇದ್ದರು, ಆದರೆ ಅವರಗುಪ್ಪಗೆ ಹೊಗಿರಲಿಲ್ಲ. ಪೊಲೀಸ್ ತನಿಖೆ ವೇಳೆ ಅವರಗುಪ್ಪಗೆ ಹೊಗದೆ ಇರುವುದು ಕಂಡುಬಂದಿತ್ತು. ಸದ್ಯ ಇನ್ನೇನು ಜೈಲಿನಿಂದ ಹೊರ ಬರುತ್ತೇನೆ ಎಂಬ ಆಶಯದಲ್ಲಿದ್ದ ಕಮಲಾಕರ ಭಟ್​​ಗೆ ಇದೀಗ ಈ ಪೋಕ್ಸೋ ಕೇಸ್ ದಾಖಲಾಗಿರುವುದು ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.