AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರ: ದುಪ್ಪಟ್ಟು ಹಣದ ಆಸೆಗೆ ಬಿದ್ದು ಕಷ್ಟಪಟ್ಟು ಕೂಡಿಟಿದ್ದ 58 ಲಕ್ಷ ರೂ. ಕಳೆದುಕೊಂಡ ಯುವಕರು

ಕೊಟ್ಟ ಹಣಕ್ಕೆ ಎರಡು ಪಟ್ಟು ಹೆಚ್ಚು ಹಣ ಬರುತ್ತೆ ಎಂಬ ಆಸೆಗೆ ಬಿದ್ದ ಇಬ್ಬರು ಯುವಕರು 58 ಲಕ್ಷ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಇಬ್ವರು ಮೋಸ ಹೋಗಿದ್ದು ಒಂದೆ ಕಂಪನಿಯನ್ನು ನಂಬಿ. ಸುಮಾರು 1 ಕೋಟಿ 40 ಲಕ್ಷ ರೂಪಾಯಿ ಹಣ ಬರುತ್ತಿದ್ದಂತೆ. ಕಂಪನಿ ಕ್ಲೋಸ್ ಮಾಡಿ ಆರೋಪಿಗಳು ಪರಾರಿ ಆಗಿದ್ದಾರೆ.

ಕಾರವಾರ: ದುಪ್ಪಟ್ಟು ಹಣದ ಆಸೆಗೆ ಬಿದ್ದು ಕಷ್ಟಪಟ್ಟು ಕೂಡಿಟಿದ್ದ 58 ಲಕ್ಷ ರೂ. ಕಳೆದುಕೊಂಡ ಯುವಕರು
ಚಂದ್ರಕಾಂತ ಹಾಗೂ ಸಂಜಯ್
ಸೂರಜ್​, ಮಹಾವೀರ್​ ಉತ್ತರೆ
| Edited By: ಆಯೇಷಾ ಬಾನು|

Updated on: Dec 19, 2023 | 2:48 PM

Share

ಕಾರವಾರ, ಡಿ.19: ನೀವು ಕೊಟ್ಟ ಹಣಕ್ಕೆ ಎರಡು ಪಟ್ಟು ಹಣ ಹೆಚ್ಚು ಮಾಡಿ ಕೊಡ್ತೀವಿ, ಮೂರು ಪಟ್ಟು ಹಣ ಮಾಡಿ ಕೊಡ್ತೀವಿ. ಪ್ಯೂರ್ ಗೊಲ್ಡ್ ಕೊಡ್ತೀವಿ ಅಂತಾ ವಂಚನೆ (Cheat) ಮಾಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಆದರೆ ಮೋಸಗಾರರ ಮಾತಿಗೆ ಮಾರು ಹೋಗಿ ಅಮಾಯಕರು ಮಾತ್ರ ಮೊಸ ಹೋಗುತ್ತೆಲೇ ಇದ್ದಾರೆ (Money Double). ಉತ್ತರ ಕನ್ನಡ ಜಿಲ್ಲೆಯ ಹಳಿಯಾಲ ತಾಲೂಕಿನ ಚಂದ್ರಕಾಂತ ಹಾಗೂ ಸಂಜಯ್ ಎಂಬ ಇಬ್ಬರು ಅಮಾಯಕರು ಬರೋಬ್ಬರಿ 58 ಲಕ್ಷ ಕಳೆದುಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಹಣ ಡಬಲ್ ಆಗುತ್ತೆ. ಹೆಚ್ಚಿನ ಹಣ ಸಿಗುತ್ತೆ ಎಂಬ ಆಸೆಗೆ ಬಿದ್ದು ತಾವು ಕಷ್ಟಪಟ್ಟು ಕೂಡಿಟ್ಟಿದ್ದ 58 ಲಕ್ಷ ರೂ ಕಳೆದುಕೊಂಡಿದ್ದಾರೆ.

ಹಳಿಯಾಳ ಪಟ್ಟಣದ ಪ್ರಸಾದ ಪರಶುರಾಮ ಶೊಂಕೆ ಎಂಬ ವ್ಯಕ್ತಿ ಸಂಜಯ್ ಎಂಬುವವನಿಗೆ ಹಣ ದುಪ್ಟಟ್ಟು ಮಾಡಿ ಕೊಡುವುದಾಗಿ ನಂಬಿಸಿ. ಮೊದಲು 24 ಲಕ್ಷ ರೂಪಾಯಿ ಪಡೆದು ಬಾಂಡ್ ಪೆಪರ್ ಕೊಟ್ಟಿದ್ದಾನೆ. ಬಳಿಕ ಮತ್ತೆ 27 ಲಕ್ಷ ರೂಪಾಯಿ ಪಡೆದು ಯಾವುದೇ ಬಾಂಡ್ ಪೆಪರ್ ಕೊಡದೆ ಪರಾರಿ ಆಗಿದ್ದಾನೆ. ಎರಡನೆ ಬಾರಿಗೆ ಪಡೆದ ಹಣಕ್ಕೆ ಯಾವುದೇ ಪೆಪರ್ ಕೊಟ್ಟಿಲ್ಲ. ಇನ್ನೂ ಮಹಾರಾಷ್ಟ್ರದ ಗಡಿಂಗ್ಲಜ ಮೂಲದ ಸವಿತಾ ದಂಡಿ ಮತ್ತು ವಿದ್ಯಾಶ್ರೀ ಶಿಡಬಣ್ಣವರ ಎಂಬುವವರು, ಹಲಿಯಾಳ ತಾಲೂಕಿನ ತೆರಗಾಂವ ಗ್ರಾಮದ ಚಂದ್ರಕಾಂತ ಎಂಬ ವ್ಯಕ್ತಿಯಿಂದ 7 ಲಕ್ಷ ರೂಪಾಯಿ ಪಡೆದು ವಿದ್ಯಾಶ್ರೀ ಹಾಗೂ ಸವಿತಾ ಪರಾರಿ ಆಗಿದ್ದಾರೆ. ಕೂಲಿ ಕಾರ್ಮಿಕನಾಗಿದ್ದ ಚಂದ್ರಕಾಂತ ಜಮೀನು ಮಾರಿ ಬ್ಯಾಂಕ್ ನಲ್ಲಿಟ್ಟಿದ್ದ ಹಣವನ್ನ ವಂಚಕರಿಗೆ ಕೊಟ್ಟು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಕಲಬುರಗಿ: 10 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಬಾಲಕರಿಂದ ಅತ್ಯಾಚಾರ, ಪ್ರಕರಣ ದಾಖಲು

ಇನ್ನೂ ಈ ಇಬ್ವರು ಮೋಸ ಹೋಗಿದ್ದು ಒಂದೆ ಕಂಪನಿಯನ್ನು ನಂಬಿ. ಸ್ವಪ್ನೀಲ್ ಮಾತಾಡೆ, ಸೋನಿಯಾ ಇಬ್ಬರು ಸೇರಿ ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಫೊರೆಕ್ಸ್ ಹೆಲ್ತ್ ಸೊಲ್ಯುಶನ್ ಎಂಬ ಹೆಸರಿನ ಕಂಪನಿ ಆರಂಭ ಮಾಡಿದ್ರು. ಕಂಪನಿಗೆ ಮೂರು-ನಾಲ್ಕು ಏಜೆಂಟ್​ಗಳನ್ನು ನೇಮಿಸಿದ್ದರು. ಸುಮಾರು 1 ಕೋಟಿ 40 ಲಕ್ಷ ರೂಪಾಯಿ ಹಣ ಬರುತ್ತಿದ್ದಂತೆ. ಕಂಪನಿ ಕ್ಲೋಸ್ ಮಾಡಿ ಆರೋಪಿಗಳು ಪರಾರಿ ಆಗಿದ್ದಾರೆ.

ಸುಲಭವಾಗಿ ಶ್ರೀಮಂತರಾಗಬಹುದು ಎಂಬ ದುರಾಸೆಗೆ ಬಿದ್ದು ತಮ್ಮ ಬಳಿ ಇದ್ದ ಹಣವನ್ನೆಲ್ಲ ಕಳೆದುಕೊಂಡು ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚಕರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
Suraj Mahaveer Utture
Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ