AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರ: ದುಪ್ಪಟ್ಟು ಹಣದ ಆಸೆಗೆ ಬಿದ್ದು ಕಷ್ಟಪಟ್ಟು ಕೂಡಿಟಿದ್ದ 58 ಲಕ್ಷ ರೂ. ಕಳೆದುಕೊಂಡ ಯುವಕರು

ಕೊಟ್ಟ ಹಣಕ್ಕೆ ಎರಡು ಪಟ್ಟು ಹೆಚ್ಚು ಹಣ ಬರುತ್ತೆ ಎಂಬ ಆಸೆಗೆ ಬಿದ್ದ ಇಬ್ಬರು ಯುವಕರು 58 ಲಕ್ಷ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಇಬ್ವರು ಮೋಸ ಹೋಗಿದ್ದು ಒಂದೆ ಕಂಪನಿಯನ್ನು ನಂಬಿ. ಸುಮಾರು 1 ಕೋಟಿ 40 ಲಕ್ಷ ರೂಪಾಯಿ ಹಣ ಬರುತ್ತಿದ್ದಂತೆ. ಕಂಪನಿ ಕ್ಲೋಸ್ ಮಾಡಿ ಆರೋಪಿಗಳು ಪರಾರಿ ಆಗಿದ್ದಾರೆ.

ಕಾರವಾರ: ದುಪ್ಪಟ್ಟು ಹಣದ ಆಸೆಗೆ ಬಿದ್ದು ಕಷ್ಟಪಟ್ಟು ಕೂಡಿಟಿದ್ದ 58 ಲಕ್ಷ ರೂ. ಕಳೆದುಕೊಂಡ ಯುವಕರು
ಚಂದ್ರಕಾಂತ ಹಾಗೂ ಸಂಜಯ್
ಸೂರಜ್​, ಮಹಾವೀರ್​ ಉತ್ತುರೆ
| Edited By: ಆಯೇಷಾ ಬಾನು|

Updated on: Dec 19, 2023 | 2:48 PM

Share

ಕಾರವಾರ, ಡಿ.19: ನೀವು ಕೊಟ್ಟ ಹಣಕ್ಕೆ ಎರಡು ಪಟ್ಟು ಹಣ ಹೆಚ್ಚು ಮಾಡಿ ಕೊಡ್ತೀವಿ, ಮೂರು ಪಟ್ಟು ಹಣ ಮಾಡಿ ಕೊಡ್ತೀವಿ. ಪ್ಯೂರ್ ಗೊಲ್ಡ್ ಕೊಡ್ತೀವಿ ಅಂತಾ ವಂಚನೆ (Cheat) ಮಾಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಆದರೆ ಮೋಸಗಾರರ ಮಾತಿಗೆ ಮಾರು ಹೋಗಿ ಅಮಾಯಕರು ಮಾತ್ರ ಮೊಸ ಹೋಗುತ್ತೆಲೇ ಇದ್ದಾರೆ (Money Double). ಉತ್ತರ ಕನ್ನಡ ಜಿಲ್ಲೆಯ ಹಳಿಯಾಲ ತಾಲೂಕಿನ ಚಂದ್ರಕಾಂತ ಹಾಗೂ ಸಂಜಯ್ ಎಂಬ ಇಬ್ಬರು ಅಮಾಯಕರು ಬರೋಬ್ಬರಿ 58 ಲಕ್ಷ ಕಳೆದುಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಹಣ ಡಬಲ್ ಆಗುತ್ತೆ. ಹೆಚ್ಚಿನ ಹಣ ಸಿಗುತ್ತೆ ಎಂಬ ಆಸೆಗೆ ಬಿದ್ದು ತಾವು ಕಷ್ಟಪಟ್ಟು ಕೂಡಿಟ್ಟಿದ್ದ 58 ಲಕ್ಷ ರೂ ಕಳೆದುಕೊಂಡಿದ್ದಾರೆ.

ಹಳಿಯಾಳ ಪಟ್ಟಣದ ಪ್ರಸಾದ ಪರಶುರಾಮ ಶೊಂಕೆ ಎಂಬ ವ್ಯಕ್ತಿ ಸಂಜಯ್ ಎಂಬುವವನಿಗೆ ಹಣ ದುಪ್ಟಟ್ಟು ಮಾಡಿ ಕೊಡುವುದಾಗಿ ನಂಬಿಸಿ. ಮೊದಲು 24 ಲಕ್ಷ ರೂಪಾಯಿ ಪಡೆದು ಬಾಂಡ್ ಪೆಪರ್ ಕೊಟ್ಟಿದ್ದಾನೆ. ಬಳಿಕ ಮತ್ತೆ 27 ಲಕ್ಷ ರೂಪಾಯಿ ಪಡೆದು ಯಾವುದೇ ಬಾಂಡ್ ಪೆಪರ್ ಕೊಡದೆ ಪರಾರಿ ಆಗಿದ್ದಾನೆ. ಎರಡನೆ ಬಾರಿಗೆ ಪಡೆದ ಹಣಕ್ಕೆ ಯಾವುದೇ ಪೆಪರ್ ಕೊಟ್ಟಿಲ್ಲ. ಇನ್ನೂ ಮಹಾರಾಷ್ಟ್ರದ ಗಡಿಂಗ್ಲಜ ಮೂಲದ ಸವಿತಾ ದಂಡಿ ಮತ್ತು ವಿದ್ಯಾಶ್ರೀ ಶಿಡಬಣ್ಣವರ ಎಂಬುವವರು, ಹಲಿಯಾಳ ತಾಲೂಕಿನ ತೆರಗಾಂವ ಗ್ರಾಮದ ಚಂದ್ರಕಾಂತ ಎಂಬ ವ್ಯಕ್ತಿಯಿಂದ 7 ಲಕ್ಷ ರೂಪಾಯಿ ಪಡೆದು ವಿದ್ಯಾಶ್ರೀ ಹಾಗೂ ಸವಿತಾ ಪರಾರಿ ಆಗಿದ್ದಾರೆ. ಕೂಲಿ ಕಾರ್ಮಿಕನಾಗಿದ್ದ ಚಂದ್ರಕಾಂತ ಜಮೀನು ಮಾರಿ ಬ್ಯಾಂಕ್ ನಲ್ಲಿಟ್ಟಿದ್ದ ಹಣವನ್ನ ವಂಚಕರಿಗೆ ಕೊಟ್ಟು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಕಲಬುರಗಿ: 10 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಬಾಲಕರಿಂದ ಅತ್ಯಾಚಾರ, ಪ್ರಕರಣ ದಾಖಲು

ಇನ್ನೂ ಈ ಇಬ್ವರು ಮೋಸ ಹೋಗಿದ್ದು ಒಂದೆ ಕಂಪನಿಯನ್ನು ನಂಬಿ. ಸ್ವಪ್ನೀಲ್ ಮಾತಾಡೆ, ಸೋನಿಯಾ ಇಬ್ಬರು ಸೇರಿ ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಫೊರೆಕ್ಸ್ ಹೆಲ್ತ್ ಸೊಲ್ಯುಶನ್ ಎಂಬ ಹೆಸರಿನ ಕಂಪನಿ ಆರಂಭ ಮಾಡಿದ್ರು. ಕಂಪನಿಗೆ ಮೂರು-ನಾಲ್ಕು ಏಜೆಂಟ್​ಗಳನ್ನು ನೇಮಿಸಿದ್ದರು. ಸುಮಾರು 1 ಕೋಟಿ 40 ಲಕ್ಷ ರೂಪಾಯಿ ಹಣ ಬರುತ್ತಿದ್ದಂತೆ. ಕಂಪನಿ ಕ್ಲೋಸ್ ಮಾಡಿ ಆರೋಪಿಗಳು ಪರಾರಿ ಆಗಿದ್ದಾರೆ.

ಸುಲಭವಾಗಿ ಶ್ರೀಮಂತರಾಗಬಹುದು ಎಂಬ ದುರಾಸೆಗೆ ಬಿದ್ದು ತಮ್ಮ ಬಳಿ ಇದ್ದ ಹಣವನ್ನೆಲ್ಲ ಕಳೆದುಕೊಂಡು ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚಕರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ