AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ಮಾನ್ಯತೆ ಪಡೆದ ಪುಟ್ಟ ತರಕಾರಿ; ಇದು ಉಡುಪಿಯ ಮಟ್ಟು ಗುಳ್ಳ

ಮಟ್ಟು ಗುಳ್ಳ ಅಥವಾ ಗುಳ್ಳ ಅಂತಿಂಥ ತರಕಾರಿ ಅಲ್ಲ. ಇದು ಭೌಗೋಳಿಕ ಮಾನ್ಯತೆ ಪಡೆದ ತರಕಾರಿ. ಬಿಟಿ ಬದನೆಯೊಂದಿಗೆ ತನ್ನ ಉಳಿಯುವಿಕೆಗಾಗಿ ಹೋರಾಡಿ ಗೆದ್ದ ಅಪ್ಪಟ ದೇಸೀ ತಳಿ ಈ ಮಟ್ಟು ಗುಳ್ಳ. ಹಲವಾರು ವರ್ಷಗಳಿಂದ ಹೇಳಹೆಸರಿಲ್ಲದೆ ಮೂಲೆಗುಂಪಾಗಿದ್ದ ಈ ತರಕಾರಿ ಈ ಹೋರಾಟದಿಂದಾಗಿ ಪ್ರಸಿದ್ಧಿ ಪಡೆಯಿತು. ಈ ತರಕಾರಿಯ ಬಗ್ಗೆ ಮತ್ತಷ್ಟು ತಿಳಿಯಲು ಮುಂದೆ ಓದಿ...

ಜಾಗತಿಕ ಮಾನ್ಯತೆ ಪಡೆದ ಪುಟ್ಟ ತರಕಾರಿ; ಇದು ಉಡುಪಿಯ ಮಟ್ಟು ಗುಳ್ಳ
ಮಟ್ಟು ಗುಳ್ಳ
Follow us
ರಶ್ಮಿ ಕಲ್ಲಕಟ್ಟ
|

Updated on: May 25, 2024 | 12:10 PM

ನೋಡಲು ಬದನೆಕಾಯಿ ತರಾನೇ ಇದೆ. ಆದರೆ ಬದನೆ ಅಲ್ಲ…ಈ ತರಕಾರಿ ಹೆಸರು ಮಟ್ಟು ಗುಳ್ಳ . ಗುಳ್ಳ ಎಂದರೆ ತುಳು ಭಾಷೆಯಲ್ಲಿ ಚಿಕ್ಕದು ಎಂಬರ್ಥವಿದೆ. ಉಡುಪಿಯಿಂದ ಕೇವಲ 10 ಕಿಮೀ ದೂರದಲ್ಲಿರುವ ಮಟ್ಟು ಎಂಬ ಗ್ರಾಮದಲ್ಲಿ  ಇದನ್ನು ಬೆಳೆಯುವುದರಿಂದ ಇದಕ್ಕೆ ಮಟ್ಟು ಗುಳ್ಳ ಎಂಬ ಹೆಸರು ಬಂತು. ಮಟ್ಟು ಗುಳ್ಳ ಅಥವಾ ಗುಳ್ಳ ಅಂತಿಂಥ ತರಕಾರಿ ಅಲ್ಲ. ಇದು ಭೌಗೋಳಿಕ ಮಾನ್ಯತೆ ಪಡೆದ ತರಕಾರಿ. ಬಿಟಿ ಬದನೆಯೊಂದಿಗೆ ತನ್ನ ಉಳಿಯುವಿಕೆಗಾಗಿ ಹೋರಾಡಿ ಗೆದ್ದ ಅಪ್ಪಟ ದೇಸೀ ತಳಿ ಈ ಮಟ್ಟು ಗುಳ್ಳ. ಹಲವಾರು ವರ್ಷಗಳಿಂದ ಹೇಳಹೆಸರಿಲ್ಲದೆ ಮೂಲೆಗುಂಪಾಗಿದ್ದ ಈ ತರಕಾರಿ ಈ ಹೋರಾಟದಿಂದಾಗಿ ಪ್ರಸಿದ್ಧಿ ಪಡೆಯಿತು. ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಬೆಳೆಯ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ಮಾಡಿದರು. ಮಟ್ಟು ಗುಳ್ಳಕ್ಕೆ 2011 ರಲ್ಲಿ ಭೌಗೋಳಿಕ ಮಾನ್ಯತೆ (GI Tag) ನೀಡಲಾಯಿತು. ವಿಶಿಷ್ಟವಾದ ದುಂಡಗಿನ ಆಕಾರ, ತಿಳಿ ಹಸಿರು ಬಣ್ಣ ಮತ್ತು ಹೊರಮೈಮೇಲೆ ಮಸುಕಾದ ಪಟ್ಟೆಗಳಿರುವ ಈ ಗುಳ್ಳದಲ್ಲಿ ಬೀಜಗಳು ಕಡಿಮೆ, ಹೆಚ್ಚಿನ ತಿರುಳು ಇರುತ್ತದೆ. ಮಟ್ಟು ಗುಳ್ಳದ ಪ್ರಮುಖ ಲಕ್ಷಣವೆಂದರೆ ತೆಳುವಾದ ಮೇಲ್ಮೈ ಮುಳ್ಳುಗಳನ್ನು ಹೊಂದಿರುವ ತೊಟ್ಟು ಇರುತ್ತದೆ. ಸಮುದ್ರಕ್ಕೆ ಹತ್ತಿರವಾಗಿರುವುದರಿಂದ ಇಲ್ಲಿನ ಮಣ್ಣು ತರಕಾರಿಗೆ ವಿಶಿಷ್ಟವಾದ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ. ಈ ಮಟ್ಟುಗುಳ್ಳದ ಬಗ್ಗೆ ಮತ್ತಷ್ಟು ತಿಳಿಯೋಣ… ಎಲ್ಲಿಂದ ಬಂತು ಗುಳ್ಳ? ದಂತಕಥೆಯ ಪ್ರಕಾರ, ಕರ್ನಾಟಕದ ಪೂಜ್ಯ ಸಂತ ಮತ್ತು ತತ್ವಜ್ಞಾನಿ ಶ್ರೀ ವಾದಿರಾಜರು ಈ ಬೆಳೆಯ ಬೀಜಗಳನ್ನು ನೀಡಿದರು. ಅವರು ಈ ಬೀಜಗಳನ್ನು 15 ನೇ ಶತಮಾನದಲ್ಲಿ ಮಟ್ಟುವಿನ ರೈತರಿಗೆ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಆರ್​ಸಿಬಿಗೆ 18 ವರ್ಷಗಳಿಂದ ಕಪ್ ಮರೀಚಿಕೆಯಾಗಿದೆ, ಈ ಸಲ ನೀಗುವುದೇ ಬರ?
ಆರ್​ಸಿಬಿಗೆ 18 ವರ್ಷಗಳಿಂದ ಕಪ್ ಮರೀಚಿಕೆಯಾಗಿದೆ, ಈ ಸಲ ನೀಗುವುದೇ ಬರ?