AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಾ! ನಿಜಕ್ಕೂ ಈ ಬಾಲಕನ ಗುಂಡಿಗೆಗೆ ಒಂದು ಸಲಾಂ ಹೇಳಲೇಬೇಕು..

Just ಒಮ್ಮೆ ಯೋಚಿಸಿ ನೋಡಿ! ಇಡೀ ಜಗತ್ತೇ, ಕಾಣದ ಆ ಒಂದು ಕ್ರಿಮಿಯ ಕಾಟದಿಂದ ಥರಗುಟ್ಟಿದೆ. ಚಿಕ್ಕವರು ಹಾಗಿರಲಿ, ದೊಡ್ಡವರೇ ಬೆಚ್ಚಬೀಳುತ್ತಿದ್ದಾರೆ.. ಏನಪ್ಪಾ ಇದು ಗ್ರಹಚಾರ ಅಂಥಾ! ಅಂಥಾದ್ದರಲ್ಲಿ ದೊಡ್ಡವರೇ ಆಗಲಿ, ಎಂಟೆದೆಯ ಬಂಟನೇ ಆಗಲಿ.. ಒಬ್ಬೊಬ್ಬರೇ ಹೊರಗೆ ತಿರುಗಾಡುವುದಕ್ಕೂ ಭಯಪಡುತ್ತಾರೆ. ಎಲ್ಲಿ ಕೊರೊನಾ ಅಟ್ಯಾಕ್ ಆಗಿಬಿಡುತ್ತದೋ ಎಂದು ಅದರತ್ತಲೇ ಗಿರಕಿ ಹೊಡೆಯುತ್ತಾರೆ. ನೀನು ನಿಜಕ್ಕೂ ಸ್ಪೆಷಲ್ಲೇ ಬಿಡು ಕಂದಾ! ಹಿಂದೆಂದೂ ಕಾಣದ ಇಂತಹ ಪರಿಸ್ಥಿತಿ ಇರುವಾಗ ಈ ಬಾಲಕನೊಬ್ಬ ಅದೂ ಜಸ್ಟ್ 5 ವರ್ಷದ ಹುಡುಗ ಆ […]

ಅಬ್ಬಾ! ನಿಜಕ್ಕೂ ಈ ಬಾಲಕನ ಗುಂಡಿಗೆಗೆ ಒಂದು ಸಲಾಂ ಹೇಳಲೇಬೇಕು..
ಸಾಧು ಶ್ರೀನಾಥ್​
|

Updated on:May 25, 2020 | 3:15 PM

Share

Just ಒಮ್ಮೆ ಯೋಚಿಸಿ ನೋಡಿ! ಇಡೀ ಜಗತ್ತೇ, ಕಾಣದ ಆ ಒಂದು ಕ್ರಿಮಿಯ ಕಾಟದಿಂದ ಥರಗುಟ್ಟಿದೆ. ಚಿಕ್ಕವರು ಹಾಗಿರಲಿ, ದೊಡ್ಡವರೇ ಬೆಚ್ಚಬೀಳುತ್ತಿದ್ದಾರೆ.. ಏನಪ್ಪಾ ಇದು ಗ್ರಹಚಾರ ಅಂಥಾ! ಅಂಥಾದ್ದರಲ್ಲಿ ದೊಡ್ಡವರೇ ಆಗಲಿ, ಎಂಟೆದೆಯ ಬಂಟನೇ ಆಗಲಿ.. ಒಬ್ಬೊಬ್ಬರೇ ಹೊರಗೆ ತಿರುಗಾಡುವುದಕ್ಕೂ ಭಯಪಡುತ್ತಾರೆ. ಎಲ್ಲಿ ಕೊರೊನಾ ಅಟ್ಯಾಕ್ ಆಗಿಬಿಡುತ್ತದೋ ಎಂದು ಅದರತ್ತಲೇ ಗಿರಕಿ ಹೊಡೆಯುತ್ತಾರೆ.

ನೀನು ನಿಜಕ್ಕೂ ಸ್ಪೆಷಲ್ಲೇ ಬಿಡು ಕಂದಾ! ಹಿಂದೆಂದೂ ಕಾಣದ ಇಂತಹ ಪರಿಸ್ಥಿತಿ ಇರುವಾಗ ಈ ಬಾಲಕನೊಬ್ಬ ಅದೂ ಜಸ್ಟ್ 5 ವರ್ಷದ ಹುಡುಗ ಆ ರಾಜಧಾನಿಯಿಂದ -ಈ ರಾಜಧಾನಿವರೆಗೆ ಒಬ್ಬನೇ, ಹೌದು ಒಬ್ಬನೇ ವಿಮಾನದಲ್ಲಿ ಹಾರಿಕೊಂಡು ಬಂದಿದ್ದಾನೆ. ಅದೂ ಏನು ಗೊತ್ತಾ? ಲಾಕ್​ ಡೌನ್​ ಆರಂಭಕ್ಕೂ ಮುಂಚೆ.. ಬೇಸಿಗೆ ರಜೆ ಬಂತು ಅಂತಾ ದಿಲ್ಲಿಯಲ್ಲಿರುವ ಅಜ್ಜಿ ಮನೆ ಸೇರಿಕೊಂಡಿದ್ದಾನೆ.

ಮಗು ಚಿಕ್ಕದಿರಬಹುದು ಆದ್ರೆ, 3 ಗಂಟೆಗಳ ವಿಮಾನ ಪಯಣ ಚಿಕ್ಕದ್ದಲ್ಲ! ಸಡನ್ ಆಗಿ ಇಡೀ ದೇಶ ಲಾಕ್​ ಡೌನ್​ ಆಗುತ್ತಿದ್ದಂತೆ ಈ ಬಾಲಕನೂ ಅಲ್ಲೇ ಉಳಿದುಬಿಟ್ಟಿದ್ದಾನೆ. ಅವನ ಅಪ್ಪ-ಅಮ್ಮ ಇಲ್ಲಿ ಬೆಂಗಳೂರಿನಲ್ಲಿ ಲಾಕ್ ಆಗಿದ್ದಾರೆ. ಅಮ್ಮನನ್ನು ಕಾಣದೆ ಮೂರು ತಿಂಗಳಾಗಿದೆ. ಜೊತೆಗೆ ಅದೇನೋ ಕೊರೊನಾ ಅಂತೆ ಎಂದು ಭಯಪಡುವ ಕಾಲದಲ್ಲಿ ಈ ಬಾಲಕ ಬರೋಬ್ಬರಿ ಮೂರು ಗಂಟೆಗಳ ವಿಮಾನ ಪಯಣ ಮುಗಿಸಿ, ಅಮ್ಮನ ಮಡಿಲು ಸೇರಿದ್ದಾನೆ!

ಮೊದ್ಲೇ ವಿಮಾನ! ಜೊತೆಗೆ ಕೊರೊನಾ ಆತಂಕ, ಅಕಸ್ಮಾತ್ ಅವನಿಗೆ ಅಮ್ಮ-ಅಜ್ಜಿಯ ನೆನಪಾಗಿ ಅಳು ಬಂದಿದ್ದರೆ. ಅಥವಾ ಇನ್ಯಾವುದೋ ಅವ್ಯಕ್ತ ಭಾವ, ಭಯ ಕಾಡಿದ್ದರೆ. ಅವನನ್ನು ಸಂತೈಸಲು ಸಹ ಯಾರೂ ಮುಂದಾಗುತ್ತಿರಲಿಲ್ಲ. ಯಾಕೆಂದ್ರೆ ಸೋಷಿಯಲ್ ಡಿಸ್ಟೆನ್ಸಿಂಗು, ಅದೂ ಇದು ಅಂತಾ ಯಾರೇ ಆಗಲಿ ಹೆಜ್ಜೆ ಹಿಂದಿಡುತ್ತಿದ್ದರು. ಅಂಥಾದ್ದರಲ್ಲಿ ಯಾವುದೇ ಆತಂಕ ಕಾಣದೆ, ಮಗು ನಗುನಗುತಾ ಇಂದು ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮ್ಮನ ಮಡಿಲು ಸೇರಿದ್ದಾನೆ. ಅಬ್ಬಾ ನಿಜಕ್ಕೂ ಅವನ ಗುಂಡಿಗೆಗೆ ಒಂದು ಸಲಾಂ ಹೇಳಲೇಬೇಕು..!

Published On - 3:14 pm, Mon, 25 May 20

ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!
ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!
ಈ ವಿಷಯ ಗೊತ್ತಾದ್ರೆ ಚರ್ಕವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಮಂಜು
ಈ ವಿಷಯ ಗೊತ್ತಾದ್ರೆ ಚರ್ಕವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಮಂಜು
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಇಂದು ಈ ರಾಶಿಯವರಿಗೆ ಧನ ಯೋಗ!
ಇಂದು ಈ ರಾಶಿಯವರಿಗೆ ಧನ ಯೋಗ!
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್