AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಾ! ನಿಜಕ್ಕೂ ಈ ಬಾಲಕನ ಗುಂಡಿಗೆಗೆ ಒಂದು ಸಲಾಂ ಹೇಳಲೇಬೇಕು..

Just ಒಮ್ಮೆ ಯೋಚಿಸಿ ನೋಡಿ! ಇಡೀ ಜಗತ್ತೇ, ಕಾಣದ ಆ ಒಂದು ಕ್ರಿಮಿಯ ಕಾಟದಿಂದ ಥರಗುಟ್ಟಿದೆ. ಚಿಕ್ಕವರು ಹಾಗಿರಲಿ, ದೊಡ್ಡವರೇ ಬೆಚ್ಚಬೀಳುತ್ತಿದ್ದಾರೆ.. ಏನಪ್ಪಾ ಇದು ಗ್ರಹಚಾರ ಅಂಥಾ! ಅಂಥಾದ್ದರಲ್ಲಿ ದೊಡ್ಡವರೇ ಆಗಲಿ, ಎಂಟೆದೆಯ ಬಂಟನೇ ಆಗಲಿ.. ಒಬ್ಬೊಬ್ಬರೇ ಹೊರಗೆ ತಿರುಗಾಡುವುದಕ್ಕೂ ಭಯಪಡುತ್ತಾರೆ. ಎಲ್ಲಿ ಕೊರೊನಾ ಅಟ್ಯಾಕ್ ಆಗಿಬಿಡುತ್ತದೋ ಎಂದು ಅದರತ್ತಲೇ ಗಿರಕಿ ಹೊಡೆಯುತ್ತಾರೆ. ನೀನು ನಿಜಕ್ಕೂ ಸ್ಪೆಷಲ್ಲೇ ಬಿಡು ಕಂದಾ! ಹಿಂದೆಂದೂ ಕಾಣದ ಇಂತಹ ಪರಿಸ್ಥಿತಿ ಇರುವಾಗ ಈ ಬಾಲಕನೊಬ್ಬ ಅದೂ ಜಸ್ಟ್ 5 ವರ್ಷದ ಹುಡುಗ ಆ […]

ಅಬ್ಬಾ! ನಿಜಕ್ಕೂ ಈ ಬಾಲಕನ ಗುಂಡಿಗೆಗೆ ಒಂದು ಸಲಾಂ ಹೇಳಲೇಬೇಕು..
ಸಾಧು ಶ್ರೀನಾಥ್​
|

Updated on:May 25, 2020 | 3:15 PM

Share

Just ಒಮ್ಮೆ ಯೋಚಿಸಿ ನೋಡಿ! ಇಡೀ ಜಗತ್ತೇ, ಕಾಣದ ಆ ಒಂದು ಕ್ರಿಮಿಯ ಕಾಟದಿಂದ ಥರಗುಟ್ಟಿದೆ. ಚಿಕ್ಕವರು ಹಾಗಿರಲಿ, ದೊಡ್ಡವರೇ ಬೆಚ್ಚಬೀಳುತ್ತಿದ್ದಾರೆ.. ಏನಪ್ಪಾ ಇದು ಗ್ರಹಚಾರ ಅಂಥಾ! ಅಂಥಾದ್ದರಲ್ಲಿ ದೊಡ್ಡವರೇ ಆಗಲಿ, ಎಂಟೆದೆಯ ಬಂಟನೇ ಆಗಲಿ.. ಒಬ್ಬೊಬ್ಬರೇ ಹೊರಗೆ ತಿರುಗಾಡುವುದಕ್ಕೂ ಭಯಪಡುತ್ತಾರೆ. ಎಲ್ಲಿ ಕೊರೊನಾ ಅಟ್ಯಾಕ್ ಆಗಿಬಿಡುತ್ತದೋ ಎಂದು ಅದರತ್ತಲೇ ಗಿರಕಿ ಹೊಡೆಯುತ್ತಾರೆ.

ನೀನು ನಿಜಕ್ಕೂ ಸ್ಪೆಷಲ್ಲೇ ಬಿಡು ಕಂದಾ! ಹಿಂದೆಂದೂ ಕಾಣದ ಇಂತಹ ಪರಿಸ್ಥಿತಿ ಇರುವಾಗ ಈ ಬಾಲಕನೊಬ್ಬ ಅದೂ ಜಸ್ಟ್ 5 ವರ್ಷದ ಹುಡುಗ ಆ ರಾಜಧಾನಿಯಿಂದ -ಈ ರಾಜಧಾನಿವರೆಗೆ ಒಬ್ಬನೇ, ಹೌದು ಒಬ್ಬನೇ ವಿಮಾನದಲ್ಲಿ ಹಾರಿಕೊಂಡು ಬಂದಿದ್ದಾನೆ. ಅದೂ ಏನು ಗೊತ್ತಾ? ಲಾಕ್​ ಡೌನ್​ ಆರಂಭಕ್ಕೂ ಮುಂಚೆ.. ಬೇಸಿಗೆ ರಜೆ ಬಂತು ಅಂತಾ ದಿಲ್ಲಿಯಲ್ಲಿರುವ ಅಜ್ಜಿ ಮನೆ ಸೇರಿಕೊಂಡಿದ್ದಾನೆ.

ಮಗು ಚಿಕ್ಕದಿರಬಹುದು ಆದ್ರೆ, 3 ಗಂಟೆಗಳ ವಿಮಾನ ಪಯಣ ಚಿಕ್ಕದ್ದಲ್ಲ! ಸಡನ್ ಆಗಿ ಇಡೀ ದೇಶ ಲಾಕ್​ ಡೌನ್​ ಆಗುತ್ತಿದ್ದಂತೆ ಈ ಬಾಲಕನೂ ಅಲ್ಲೇ ಉಳಿದುಬಿಟ್ಟಿದ್ದಾನೆ. ಅವನ ಅಪ್ಪ-ಅಮ್ಮ ಇಲ್ಲಿ ಬೆಂಗಳೂರಿನಲ್ಲಿ ಲಾಕ್ ಆಗಿದ್ದಾರೆ. ಅಮ್ಮನನ್ನು ಕಾಣದೆ ಮೂರು ತಿಂಗಳಾಗಿದೆ. ಜೊತೆಗೆ ಅದೇನೋ ಕೊರೊನಾ ಅಂತೆ ಎಂದು ಭಯಪಡುವ ಕಾಲದಲ್ಲಿ ಈ ಬಾಲಕ ಬರೋಬ್ಬರಿ ಮೂರು ಗಂಟೆಗಳ ವಿಮಾನ ಪಯಣ ಮುಗಿಸಿ, ಅಮ್ಮನ ಮಡಿಲು ಸೇರಿದ್ದಾನೆ!

ಮೊದ್ಲೇ ವಿಮಾನ! ಜೊತೆಗೆ ಕೊರೊನಾ ಆತಂಕ, ಅಕಸ್ಮಾತ್ ಅವನಿಗೆ ಅಮ್ಮ-ಅಜ್ಜಿಯ ನೆನಪಾಗಿ ಅಳು ಬಂದಿದ್ದರೆ. ಅಥವಾ ಇನ್ಯಾವುದೋ ಅವ್ಯಕ್ತ ಭಾವ, ಭಯ ಕಾಡಿದ್ದರೆ. ಅವನನ್ನು ಸಂತೈಸಲು ಸಹ ಯಾರೂ ಮುಂದಾಗುತ್ತಿರಲಿಲ್ಲ. ಯಾಕೆಂದ್ರೆ ಸೋಷಿಯಲ್ ಡಿಸ್ಟೆನ್ಸಿಂಗು, ಅದೂ ಇದು ಅಂತಾ ಯಾರೇ ಆಗಲಿ ಹೆಜ್ಜೆ ಹಿಂದಿಡುತ್ತಿದ್ದರು. ಅಂಥಾದ್ದರಲ್ಲಿ ಯಾವುದೇ ಆತಂಕ ಕಾಣದೆ, ಮಗು ನಗುನಗುತಾ ಇಂದು ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮ್ಮನ ಮಡಿಲು ಸೇರಿದ್ದಾನೆ. ಅಬ್ಬಾ ನಿಜಕ್ಕೂ ಅವನ ಗುಂಡಿಗೆಗೆ ಒಂದು ಸಲಾಂ ಹೇಳಲೇಬೇಕು..!

Published On - 3:14 pm, Mon, 25 May 20

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!