AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಕ್ಫ್​ ವಿವಾದ ಬೆನ್ನಲ್ಲೇ ರೈತರ ಪಹಣಿ ಸಿಗದಂತೆ ಸರ್ವರ್ ಡೌನ್: ಸರ್ಕಾರದ ವಿರುದ್ಧ ಯತ್ನಾಳ್​ ಆರೋಪ

ವಿಜಯಪುರದಲ್ಲಿ ರೈತರಿಗೆ ವಕ್ಫ್​​ ಬೋರ್ಡ್​​ ನೋಟಿಸ್​ ಖಂಡಿಸಿ ಮಾಡುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ವಕ್ಫ್​ ಕಾಯ್ದೆ ತೊಲಗಿಸಲು ಈ ಹೋರಾಟ. ರೈತರ ಪಹಣಿ ಸಿಗದಂತೆ ಸರ್ವರ್ ಡೌನ್ ಮಾಡಿದ್ದಾರೆ. ಸರ್ಕಾರವೇ ಡೌನ್ ಆಗಲಿದೆ ಎಂದು ಕಿಡಿಕಾರಿದ್ದಾರೆ.

ವಕ್ಫ್​ ವಿವಾದ ಬೆನ್ನಲ್ಲೇ ರೈತರ ಪಹಣಿ ಸಿಗದಂತೆ ಸರ್ವರ್ ಡೌನ್: ಸರ್ಕಾರದ ವಿರುದ್ಧ ಯತ್ನಾಳ್​ ಆರೋಪ
ವಕ್ಫ್​ ವಿವಾದ ಬೆನ್ನಲ್ಲೇ ರೈತರ ಪಹಣಿ ಸಿಗದಂತೆ ಸರ್ವರ್ ಡೌನ್: ಸರ್ಕಾರದ ವಿರುದ್ಧ ಯತ್ನಾಳ್​ ಆರೋಪ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Nov 04, 2024 | 4:31 PM

Share

ವಿಜಯಪುರ, ನವೆಂಬರ್​ 04: ರೈತರ ಪಹಣಿ ಸಿಗದಂತೆ ಸರ್ವರ್ ಡೌನ್ ಮಾಡಿದ್ದಾರೆ. ಸರ್ಕಾರವೇ ಡೌನ್ ಆಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Basanagouda Patil) ಹೇಳಿದ್ದಾರೆ. ನಗರದಲ್ಲಿ ರೈತರಿಗೆ ವಕ್ಫ್​​ ಬೋರ್ಡ್​​ ನೋಟಿಸ್​ ಖಂಡಿಸಿ ಪ್ರತಿಭಟನೆ ವೇಳೆ​ ಭಾಷಣ ಮಾಡಿದ ಅವರು, ಎಲ್ಲರೂ ಗಟ್ಟಿ ಆದರೆ ರೈತರ, ಮಠಗಳ‌ ಜಮೀನು ಉಳಿಯುತ್ತೆ. ಎಷ್ಟು ಅಂತಾ ಮನೆಯಲ್ಲಿ ಕುಳಿತುಕೊಳ್ಳುವುದು. ಮುಂದೆ ಧರ್ಮ‌ಯುದ್ಧ ಆಗೋದೇ ಎಂದಿದ್ದಾರೆ.

ಮುಸ್ಲಿಂ ಮೌಲ್ವಿಗಳಿಂದ ಪ್ರಧಾನಿ ಮೋದಿಗೆ ಎಚ್ಚರಿಕೆ

ವಕ್ಫ್​ ಕಾಯ್ದೆ ತೊಲಗಿಸಲು ಈ ಹೋರಾಟ ಮಾಡಲಾಗುತ್ತಿದೆ. ವಕ್ಫ್​​ ವಿರುದ್ಧ ಹೋರಾಟ ಶುರುವಾಗಿದ್ದೇ ವಿಜಯಪುರದ ಪವಿತ್ರ ಭೂಮಿಯಿಂದ. ಕರಾಳ ಶಾಸನದ ಅನುಭವ ಆಗುತ್ತಿದೆ. ವಕ್ಫ್​ ವಿರುದ್ಧ ದೊಡ್ಡ ಮಟ್ಟದ ಹೋರಾಟದ ಅಗತ್ಯವಿದೆ. ನಿನ್ನೆ ದೆಹಲಿಯಲ್ಲಿ ಮುಸ್ಲಿಂ ಮೌಲ್ವಿಗಳು ಸಭೆ ನಡೆಸಿ ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ್ದಾರೆ. ಮೋದಿ ತರುವ ಕಾಯ್ದೆ ಬೆಂಬಲಿಸದಂತೆ ನಿತೀಶ್​​ ಕುಮಾರ್, ಚಂದ್ರಬಾಬು ನಾಯ್ಡುಗೂ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೀದರ್, ಧಾರವಾಡ ಜಿಲ್ಲೆಯಲ್ಲಿ ಗ್ರಾಮಗಳು ವಕ್ಫ್​ ಪಾಲು: ಜನ ಕಂಗಾಲು

ಸಿಎಂ ಸಿದ್ದರಾಮಯ್ಯ ಭೇಟಿಗೆ ಹೋದಾಗ ಜಮೀರ್ ಜತೆ ವಾಗ್ವಾದ ಆಯ್ತು. ನಾನು ಜೋರು ‌ಮಾಡಿದೆ. ಖಬರಸ್ಥಾನಗೆ ಹಸಿರು ಬಣ್ಣ ಹಾಕಬೇಕು. ಅದು‌ ಸೈತಾನ್​ಗೆ ಕಾಣಿಸಬೇಕೆಂದು ಜಮೀರ್ ಹೇಳುತ್ತಾರೆ. ಖಾವಿ ಹಾಕಿದವರು ನಾವೇ ಸೈತಾನಗಳಾ? ಆ ಮೂಲಕ ಜನ್ನತ್ ಕುರಿತ ಮುಸ್ಲಿಂ ಮುಖಂಡರ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ನಮಗೆ ದೇಶ ಧರ್ಮ‌ ದೊಡ್ಡದು, ನಂತರ ನಮ್ಮ‌ ಪಾರ್ಟಿ. ದೇಶ ಉಳಿದರೆ ಎಲ್ಲ‌ ಉಳಿದಂತೆ. ದೇಶಕ್ಕಿಂತ ಖುರಾನ್ ದೊಡ್ಡದು ಅಂತಾರೆ ಮುಸ್ಲಿಮರು, ಆದರೆ ಸಂವಿಧಾನ ದೊಡ್ಡದು. ವಕ್ಫ್​ ಬೋರ್ಡ್​ ಹೋಗೋವರೆಗೂ ಹೋರಾಟ ನಿಲ್ಲದು. ಅಹೋರಾತ್ರಿ ಹೋರಾಟ ಮಾಡುತ್ತೇವೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಇದೂ ಸಹ ಚರ್ಚೆಗೆ ಗ್ರಾಸವಾಗಲಿದೆ. ಮುಂದೆ ರಾಜ್ಯದಲ್ಲಿ ನಮ್ಮದೇ ಕಾಂಬಿನೇಷನ್ ನಾಯಕತ್ವ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್​ ಹೆಸರು: ಉಗ್ರ ಹೋರಾಟ ಎಚ್ಚರಿಕೆ ನೀಡಿದ ಸ್ವಾಮೀಜಿ

ನಮ್ಮ ಸ್ವಾಮೀಜಿಗಳು ಹೋರಾಟ ಮಾಡುತ್ತಿಲ್ಲ. ಕನ್ಹೇರಿ ಸ್ವಾಮಿಜಿ ಮುಂಚೂಣಿ‌ ವಹಿಸಿಕೊಂಡಿದ್ದರೆ‌ ಇತರೆ ಸ್ವಾಮೀಜಿಗಳು ಕೊಂಕು‌ ಹೇಳುತ್ತಿದ್ದಾರೆ. ಮಠಗಳಿಗೆ ದಾನ‌ ನೀಡುವರು ಹಿಂದೂಗಳು ಮುಸ್ಲಿಂರಲ್ಲ. ಮುಸ್ಲಿಂರು ಸ್ವಾಮೀಜಿಗಳಿಗೆ ನಮಸ್ಕಾರ ಮಾಡಲ್ಲ. ಕೆಲ ಸ್ವಾಮೀಜಿಗಳು ಜ್ಯಾತ್ಯಾತೀತ ಎನ್ನುತ್ತಾರೆ. ಪಾರ್ಟಿಷನ್ ಆಪ್ ಪಾಕಿಸ್ತಾನ ಎಂಬ ಪುಸ್ತಕ ಅಂಬೇಡ್ಕರ್ ಬರೆದಿದ್ದರು ಈಗ ಹೊರ ಬಂದಿದ್ದಾರೆ. ಭಾರತ‌ ಪಾಕಿಸ್ತಾನ ವಿಭಜನೆ ಬೇಡಾ ಎಂದಿದ್ದರು. ವಿಭಜನೆ ಮಾಡಿದರೆ ಪಾಕಿಸ್ತಾನದ ಹಿಂದೂಗಳನ್ನು ಇಲ್ಲಿಗೆ ಇಲ್ಲಿರುವ ಮುಸ್ಲಿಂಮರನ್ನು ಪಾಕಿಸ್ತಾನಕ್ಕೆ ರವಾನೆ ಮಾಡಬೇಕೆಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?