AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ: ಕನಸಲ್ಲಿ ಸಾಯಿಬಾಬಾ ಬಂದ ಕಾರಣಕ್ಕೆ ದೇವಸ್ಥಾನವನ್ನೇ ನಿರ್ಮಿಸಿ ಸಾಮೂಹಿಕ ವಿವಾಹ ನಡೆಸಿದ ಉದ್ಯಮಿ

ಕೆಲ ವರ್ಷಗಳ ಹಿಂದೆ ಕನಸಲ್ಲಿ ಸಾಯಿ ಬಾಬಾ ಬಂದ ಕಾರಣಕ್ಕೆ, ಇಂದು ಜಿಲ್ಲೆಯ ಇಬ್ರಾಹಿಮಪುರ ಗ್ರಾಮದಲ್ಲಿ ಭವ್ಯವಾದ ಬಾಬಾ ಮಂದಿರ ನಿರ್ಮಾಣ ಮಾಡಿ, ಇದೆ ಸಂದರ್ಭದಲ್ಲಿ 51 ಜೋಡಿಗಳಿಗೆ ಮದುವೆ ಮಾಡಿಸಿದ ಉದ್ಯಮಿ ಮಹಾರಾಜ್ ದಿಗ್ಗಿ

ಯಾದಗಿರಿ: ಕನಸಲ್ಲಿ ಸಾಯಿಬಾಬಾ ಬಂದ ಕಾರಣಕ್ಕೆ ದೇವಸ್ಥಾನವನ್ನೇ ನಿರ್ಮಿಸಿ ಸಾಮೂಹಿಕ ವಿವಾಹ ನಡೆಸಿದ ಉದ್ಯಮಿ
ಯಾದಗಿರಿ ಸಾಯಿಬಾಬ ದೇವಸ್ಥಾನ ಉದ್ಘಾಟನೆ ಜೊತೆಗೆ ಸಾಮೂಹಿಕ ವಿವಾಹ
TV9 Web
| Edited By: |

Updated on: Jan 28, 2023 | 1:15 PM

Share

ಯಾದಗಿರಿ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಬ್ರಾಹಿಮಪುರ ಗ್ರಾಮದಲ್ಲಿ ಭವ್ಯವಾದ ಸಾಯಿಬಾಬ ಮಂದಿರವನ್ನ ನಿರ್ಮಾಣ ಮಾಡಲಾಗಿದೆ. ಕೆಲ ವರ್ಷಗಳ ಹಿಂದೆ ಗ್ರಾಮದ ಮಹಾರಾಜ್ ದಿಗ್ಗಿ ಎಂಬವರ ಕನಸಿನಲ್ಲಿ ಸಾಯಿ ಬಾಬ ಬಂದಿದ್ರಂತೆ. ಇದೆ ಕಾರಣಕ್ಕೆ ಗ್ರಾಮದಲ್ಲಿ ಮುಂದೊಂದು ದಿನ ಭವ್ಯವಾದ ಮಂದಿರವನ್ನ ನಿರ್ಮಾಣ ಮಾಡಬೇಕು ಎಂದು ಮಹಾರಾಜ್ ಕನಸು ಕಂಡಿದ್ದರು. ಹೀಗಾಗಿ ಇವತ್ತು 9 ವರ್ಷಗಳ ಬಳಿಕ ಒಂದುವರೆ ಕೋಟಿಗೂ ಅಧಿಕ ಹಣವನ್ನ ಖರ್ಚು ಮಾಡಿ ದೇವಸ್ಥಾನವನ್ನ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ. ಇದೇ ದೇವಸ್ಥಾನವನ್ನ ಇಂದು(ಜ.26) ಲೋಕಾರ್ಪಣೆಯನ್ನ ಮಾಡಲಾಗಿತ್ತು. ಇದರ ಜೊತೆಗೆ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದ್ದು, ಜಿಲ್ಲೆಯ ನಾನಾ ಭಾಗದಿಂದ 51 ಜೋಡಿಗಳು ಬಂದು ಹೊಸ ಜೀವನಕ್ಕೆ ಕಾಲಿಟ್ಟಿತು.

ಇವತ್ತಿನ ದಿನದಲ್ಲಿ ಬಡವರ ಮನೆಯ ಮದುವೆಯಲ್ಲೂ ಕೂಡ ಕಡಿಮೆಯೆಂದರು 3 ರಿಂದ 4 ಲಕ್ಷ ಹಣ ಖರ್ಚು ಆಗೋದು ಕಾಮನ್ ಆಗಿದೆ. ಇಷ್ಟು ಹಣವನ್ನ ಖರ್ಚು ಮಾಡದೆ ಇದ್ರೆ ಮದುವೆನೆ ಆಗಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದೆ ಕಾರಣಕ್ಕೆ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕೆ ದೇವಸ್ಥಾನ ಉದ್ಘಾಟನೆ ದಿನ ಸಾಯಿ ಮಂದಿರದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯವನ್ನ ಮಹಾರಾಜ್ ದಿಗ್ಗಿ ಅವರು ನೆರವೇರಿಸಿದ್ದಾರೆ. 51 ಜೋಡಿಗಳಿಗೆ ಹೊಸ ಬಟ್ಟೆ, ಕಾಲುಂಗುರ, ಕೈಬಳೆ, ಕುಂಕುಮ ಸೇರಿದಂತೆ ಮದುವೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನ ಉಚಿತವಾಗಿ ಮಾಡಲಾಗಿತ್ತು.

ಇನ್ನು ವಿವಿಧ ಮಠದ ಸ್ವಾಮೀಜಿಗಳು ಹಾಗೂ ವಿವಿಧ ಪಕ್ಷದ ಮುಖಂಡರ ಸಮ್ಮುಖದಲ್ಲಿ ಜೋಡಿಗಳಿಗೆ ಮಾಂಗಲ್ಯವನ್ನ ನೀಡಿ ಅಕ್ಷತೆ ಹಾಕುವ ಮೂಲಕ ಮದುವೆಯನ್ನ ಮಾಡಿಸಿದ್ದಾರೆ. ಇನ್ನು ಜೋಡಿಗಳ ಜೊತೆಗೆ ಬಂದಿದ್ದ ಸಂಬಂಧಿಕರು, ಮನೆಯವರಿಗೆ ಭರ್ಜರಿಯಾಗಿ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಪ್ರತಿ ಒಂದು ವಸ್ತುವಿನಿಂದ ಹಿಡಿದು ಊಟದವರೆಗೆ ಉಚಿತವಾಗಿ ಆಯೋಜನೆ ಮಾಡಲಾಗಿತ್ತು. ದೇವಸ್ಥಾನ ಕಟ್ಟಬೇಕು, ಸಾಯಿ ಬಾಬನ ಬಗ್ಗೆ ಈ ಭಾಗದ ಜನರಿಗೆ ಪರಿಚಯ ಮಾಡಿಕೊಡಬೇಕು ಎನ್ನುವ ಕನಸು ಬಹುದಿನಗಳಿಂದ ಇತ್ತು. ಹೀಗಾಗಿ ಇವತ್ತು ದೇವಸ್ಥಾನವನ್ನ ಲೋಕಾರ್ಪಣೆ ಮಾಡಲಾಗಿದೆ ಜೊತೆಗೆ ಇದೇ ವೇಳೆ ಸಾಮೂಹಿಕ ವಿವಾಹವನ್ನ ಮಾಡಿಸಲಾಗಿದೆ ಎಂದು ಮಹಾರಾಜ್ ದಿಗ್ಗಿ ಅವರು ಹೇಳುತ್ತಾರೆ.

ಇದನ್ನೂ ಓದಿ:SimhaPriya Wedding: ‘ಈ ಥರ ಮದುವೆ ಆದ್ರೆ ಖುಷಿ’: ಸಿಂಹಪ್ರಿಯಾ ವಿವಾಹಕ್ಕೆ ಡಾಲಿ ಜತೆ ಬಂದ ಅಮೃತಾ ಹೇಳಿಕೆ

ಒಟ್ಟಿನಲ್ಲಿ ಆಡಂಬರದಿಂದ ಮದುವೆ ಮಾಡಿಕೊಳ್ಳುವ ಈ ಕಾಲದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎನ್ನುವ ಕಾರಣಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನ ಮಾಡಲಾಗಿದ್ದು, ದೇವಸ್ಥಾನ ಹೆಸರಲ್ಲಿ ಸಮಾಜಿಕ ಕಾರ್ಯ ಮಾಡುತ್ತಿರುವುದು ನೀಜಕ್ಕೂ ಒಳ್ಳೆಯ ವಿಚಾರವಾಗಿದೆ.

ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್