AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ: ಕೆಇಎ ಪರೀಕ್ಷೆ ವೇಳೆ ಅಕ್ರಮ: ಬಂಧನಕೊಳ್ಳಗಾದ ಆರೋಪಿಗಳು ಬಿಚ್ಚಿಟ್ಟ ರಹಸ್ಯವೇನು?

ನಿನ್ನೆ ನಡೆದ ಕೆಇಎ ಪರೀಕ್ಷೆಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಪರೀಕ್ಷಾರ್ಥಿಗಳನ್ನ ಪೊಲೀಸರ ವಶಕ್ಕೆ ಪಡೆದು ಬಂಧಿಸಿದ್ದಾರೆ. 9 ಜನರನ್ನ ಬಂಧಿಸಿದ ಪೊಲೀಸರು ತನಿಖೆ ನಡೆಸಿ ಇವತ್ತು ಜೈಲಿಗೆ ಕಳುಹಿಸಿದ್ದಾರೆ. ಈ ಕುರಿತಾಗಿ ಯಾದಗಿರಿ ಎಸ್​ಪಿ ಜಿ.ಸಂಗೀತ ಪ್ರತಿಕ್ರಿಯಿಸಿದ್ದು, 9 ಜನರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಬಳಿಕ ಅವರನ್ನು ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.

ಯಾದಗಿರಿ: ಕೆಇಎ ಪರೀಕ್ಷೆ ವೇಳೆ ಅಕ್ರಮ: ಬಂಧನಕೊಳ್ಳಗಾದ ಆರೋಪಿಗಳು ಬಿಚ್ಚಿಟ್ಟ ರಹಸ್ಯವೇನು?
ಯಾದಗಿರಿ ಎಸಿ,ಪಿ ಜಿ.ಸಂಗೀತ
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 29, 2023 | 7:46 PM

Share

ಯಾದಗಿರಿ, ಅಕ್ಟೋಬರ್​​​​ 29: ನಿನ್ನೆ ನಡೆದ ಕೆಇಎ (KAE) ಪರೀಕ್ಷೆಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಪರೀಕ್ಷಾರ್ಥಿಗಳನ್ನ ಪೊಲೀಸರ ವಶಕ್ಕೆ ಪಡೆದು ಬಂಧಿಸಿದ್ದಾರೆ. 9 ಜನರನ್ನ ಬಂಧಿಸಿದ ಪೊಲೀಸರು ತನಿಖೆ ನಡೆಸಿ ಇವತ್ತು ಜೈಲಿಗೆ ಕಳುಹಿಸಿದ್ದಾರೆ. ಈ ಕುರಿತಾಗಿ ಯಾದಗಿರಿ ಎಸ್​ಪಿ ಜಿ.ಸಂಗೀತ ಪ್ರತಿಕ್ರಿಯಿಸಿದ್ದು, ಏಳು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಡಿವೈಸ್ ಬಳಕೆ‌ ಮಾಡಿ ಪರೀಕ್ಷೆ ಬರೆಯುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಕೂಡಲೇ ಅಧಿಕಾರಿಗಳ ಒಂದು ತಂಡ ಮಾಡಿ ಕಾರ್ಯ ಪ್ರವೃತರಾಗಿ, 9 ಜನರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಬಳಿಕ ಅವರನ್ನು ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.

ಒಂಬತ್ತು ಜನರಿಂದ ಬ್ಲೂಟೂತ್, ಸೀಮ್ ಕಾರ್ಡ್,ಬ್ಯಾಟರಿಗಳನ್ನ ವಶಕ್ಕೆ ಪಡೆಯಲಾಗಿದೆ. ಶರ್ಟ್​ನ ಕಾಲರನಲ್ಲಿ ಪ್ಯಾಕೇಟ್ ಮಾಡಿಕೊಂಡು ಬಂದಿದ್ದರು. ಬನಿಯನ್, ಅಂಡರ್​ ವೆರ್‌ನಲ್ಲಿ ಬ್ಲೂಟೂತ್ ಇಟ್ಟುಕೊಂಡು ಬಂದಿದ್ದರು. ಎಂಟು ಜನರು ಕಲಬುರ್ಗಿ ಜಿಲ್ಲೆಯ ಮೂಲದವರು. ಒಬ್ಬರು ವಿಜಯಪುರ ಮೂಲದವರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಯಾದಗಿರಿ: ಬ್ಲೂಟೂತ್ ಬಳಸಿ ಕೆಪಿಎಸ್​ಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ವಶಕ್ಕೆ

ನಿನ್ನೆ ಮಧ್ಯಾಹ್ನದಿಂದ ಒಬ್ಬೊಬ್ಬರು ಅರೆಸ್ಟ್ ಆಗಿದ್ದಾರೆ. ಇನ್ನು ತನಿಖೆ ನಡೆಯುತ್ತಿದೆ‌‌. ಎಲ್ಲರನ್ನ ಪರೀಕ್ಷಾ ಕೇಂದ್ರದಲ್ಲಿ ವಶಕ್ಕೆ ಪಡೆದುಕೊಂಡಿದ್ದೇವೆ. ಸಿದ್ದರಾಮ ಅಲಿಯಾಸ್ ಪುಟ್ಟಪ್ಪ ಎಂಬಾತನನ್ನ ವಶಕ್ಕೆ ಪಡೆದಾಗ ಉಳಿದವರ ಬಗ್ಗೆ ಮಾಹಿತಿ ಸಿಕ್ಕಿದೆ. ಪಿಎಸ್ಐ ಅಕ್ರಮದ ಕಿಂಗ್ ಪಿನ್ ಆರ್.ಡಿ ಪಾಟೀಲ್​ ಸಂಬಂಧಿಕರು ಇರುವ ಮಾಹಿತಿ ಇದೆ ಇನ್ನು ಸಿಕ್ಕಿಲ್ಲ.

ಕೆಲವರು 6,8,10 ಲಕ್ಷ‌ ರೂ. ಕೊಟ್ಟಿದ್ದೆವೆ ಅಂತ ವಿಚಾರಣೆಯಲ್ಲಿ ಮಾಹಿತಿ ಸಿಕ್ಕಿದೆ. ಲಾಡ್ಜ್​ನಲ್ಲಿ ಕುಳಿತುಕೊಂಡು ಉತ್ತರ ಹೇಳುತ್ತಿದ್ದರು. ಆದ್ರೆ ಲಾಡ್ಜ್ ಮೇಲೆ ದಾಳಿ ಮಾಡಿದ್ದಾಗ ಎಸ್ಕೇಪ್ ಆಗಿದ್ದಾರೆ. ಬ್ಲೂಟೂತ್ 4, ರೀಷಿವರ್ 5 ಸೇರಿದಂತೆ ನಾನಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: KPSC ಪರೀಕ್ಷೆ ವೇಳೆ ಅಕ್ರಮ: ಫುಲ್ ತೋಳಿನ ಶರ್ಟ್ ಧರಿಸಿದವರಿಗೆ ನೋ ಎಂಟ್ರಿ, ತೋಳಿಗೆ ಕತ್ತರಿ ಹಾಕಿದ ಅಭ್ಯರ್ಥಿಗಳು

ಇಎನ್‌ಟಿ ಡಾಕ್ಟರ್​ಗೆ ಕರೆಸಿ ಕಿವಿಯಲ್ಲಿ ಹಾಕಿದ್ದ ರಿಷಿವರ್ ತೆಗೆಸಲಾಗಿದೆ. ನಿನ್ನೆ ಬೆಳಗ್ಗೆ ನಡೆದ ಪರೀಕ್ಷೆ ವೇಳೆ ನಾವು ಮೆಟಲ್ ಡಿಟೆಕ್ಟರ್ ಬಳಕೆ ಮಾಡಿಲ್ಲ. ಅಕ್ರಮ ಬಯಲು ಆಗಿದ್ದ ಕೂಡಲೇ ಮೆಟಲ್ ಡಿಟೆಕ್ಟರ್ ಬಳಕೆ ಮಾಡಿದ್ದೇವೆ. ಮೆಟಲ್ ಡಿಟೆಕ್ಟರ್​ನಿಂದ ಟ್ರೇಸ್ ಮಾಡಲು ಆಗಿಲ್ಲ. ಕಿವಿಯಲ್ಲಿ ಬಳಕೆ ಮಾಡಿದ್ದ ರಿಷಿವರ್ ಮಾತ್ರ ಡಿಟೆಕ್ಟ್ ಆಗಿಲ್ಲ ಎಂದು ಹೇಳಿದ್ದಾರೆ.

ಇದೆ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಲ್ಲಿ ಇಷ್ಟು ಮಟ್ಟದಲ್ಲಿ ಪರೀಕ್ಷೆ ವೇಳೆ ಅಕ್ರಮವೆಸಗಿ ಪರೀಕ್ಷೆ ಬರೆದಿರುವ ಘಟನೆ ನಡೆದಿದೆ. ಹೀಗಾಗಿ ಪೊಲೀಸರು 9 ಜನರ ಜೊತೆ ಇನ್ನು ಎಷ್ಟು ಜನ ಶಾಮೀಲಾಗಿದ್ದಾರೆ ಜೊತೆಗೆ ಇದರ ಕಿಂಗ್ ಪಿನ್ ಯಾರು ಪತ್ತೆ ಹಚ್ಚಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ