ವಿಜಯಪುರದಲ್ಲಿ ಕರಿ ಹರಿಯುವ ಪದ್ಧತಿ: ಯುವಕನ ಕರುಳು ಬಗೆದ ಹೋರಿ

ಕಾರ ಹುಣ್ಣಿಮೆ ಹಬ್ಬದ ಪ್ರಯುಕ್ತ ಎತ್ತು, ಹೋರಿಗಳನ್ನು ಬೆದರಿಸಿ ಓಡಿಸುವ ಪದ್ದತಿ ಮಾಡಲಾಗುತ್ತಿದೆ. ಈ ಪದ್ದತಿ ವೇಳೆ ಎತ್ತು ಅಥವಾ ಹೋರಿ ನೆರೆದಿದ್ದವರ ಮೇಲೆ ದಾಳಿ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಪ್ರಾಣಕಳೆದುಕೊಂಡ ಉದಾರಣೆಗಳಿವೆ. ಇದೀಗ ವಿಜಯಪುರದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಓರ್ವ ಯುವಕ ಮೇಲೆ ಹೋರಿ ದಾಳಿ ಮಾಡಿದ್ದು, ಕರುಳು ಹೊರಗೆ ಬಂದಿರುವಂತಹ ಘಟನೆ ನಡೆದಿದೆ.

ವಿಜಯಪುರದಲ್ಲಿ ಕರಿ ಹರಿಯುವ ಪದ್ಧತಿ: ಯುವಕನ ಕರುಳು ಬಗೆದ ಹೋರಿ
ವಿಜಯಪುರದಲ್ಲಿ ಕರಿ ಹರಿಯುವ ಪದ್ದತಿ: ಯುವಕನ ಕರುಳು ಬಗೆದ ಹೋರಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jun 28, 2024 | 7:54 PM

ವಿಜಯಪುರ, ಜೂನ್​ 28: ಆಯುಷ್ಯ ಗಟ್ಟಿ ಇದ್ದರೆ ಬಂಡೆಗಲ್ಲು ತಲೆ ಬಿದ್ದರೆ ಜೀವ ಉಳಿಯುತ್ತದೆ ಎಂಬ ಮಾತಿದೆ. ಇಂತದ್ದೇ ಒಂದು ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಕಾರಹುಣ್ಣಿಮೆ (kara hunnime) ನಿಮಿತ್ಯ ನಡೆಯೋ ಎತ್ತು ಹೋರಿಗಳನ್ನು ಬೆದರಿಸಿ ಓಡಿಸುವ ಪದ್ದತಿಯ ರೋಮಾಂಚನಕಾರಿ ಆಚರಣೆ ವೀಕ್ಷಣೆಗೆ ಬಂದಿದ್ದ ವ್ಯಕ್ತಿಗೆ ಹೋರಿಯೊಂದು (bull) ತಿವಿದು ಎತ್ತಿ ಬಿಸಾಡಿದಿದೆ. ಪರಿಣಾಮ ವ್ಯಕ್ತಿಯ ಹೊಟ್ಟೆ ಹರಿದು ಕರುಳು ಹೊರಗೆ ಬಂದು ಬಿಟ್ಟಿದ್ದವು. ಕೂಡಲೇ ಆ ವ್ಯಕ್ತಿಯನ್ನು ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಮರು ಜೀವ ನೀಡಿದ್ದಾರೆ.

ಯುವಕನನ್ನು ಎತ್ತಿ ಬಿಸಾಕಿದ ಹೋರಿ

ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಬಳಿಕ 7 ನೇ ದಿನಕ್ಕೆ ಕರಿ ಹರಿಯೋ ಸಂಪ್ರದಾಯ ಮಾಡುತ್ತಾರೆ. ಇದೇ ವೇಳೆ ಹೋರಿಗಳನ್ನು ಬೆದರಿಸಿ ಓಡಿಸುವುದನ್ನು ನೋಡಲು ಜಿಲ್ಲೆಯ ನಿಡಗುಂದಿ ತಾಲೂಕಿನ ಮುದ್ದಾಪೂರ ಗ್ರಾಮದ ಪರಸಪ್ಪ ಬಿರಾದಾರ್ ಎಂಬ ಯುವಕ ಬಂದಿದ್ದಾನೆ. ರಸ್ತೆಯ ಪಕ್ಕದಲ್ಲಿ ಜನರ ಮಧ್ಯೆ ಕುಳಿತಿದ್ದ ಪರಸಪ್ಪನ ಮೇಲೆ ಹೋರಿ ಮೇಲೆರಗಿ ದಾಳಿ ಮಾಡಿದೆ. ಕೊಂಬಿನಲ್ಲಿ ಪರಸಪ್ಪ ಬಿರಾದಾರ್​ನನ್ನು ಎತ್ತಿ ಬಿಸಾಕಿದೆ. ಪರಿಣಾಮ ಗಾಳಿಯಲ್ಲಿ ಹಾರಿ ಬಿದ್ದ ಪರಸಪ್ಪನ ಹೊಟ್ಟೆ ಹರಿದು ಕರುಳೆಲ್ಲಾ ಹೊರಗೆ ಬಿದ್ದಿತ್ತು. ಕೂಡಲೇ ಆತನನ್ನು ವಿಜಯಪುರ ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕರುಳಿಗೆ ಹಾಗೂ ಇತರೆ ಭಾಗಕ್ಕೆ ತೀವ್ರ ಗಾಯವಾಗಿದ್ದು ಬಿಎಲ್ಡಿಇ ಆಸ್ಪತ್ರೆಯ ಡಾ. ಎಂಬಿ ಪಾಟೀಲ್ ಉರ್ಫ್ ಆನಂದ ಪಾಟೀಲ್ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದರು. ಸದ್ಯ ಪರಸಪ್ಪನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ಧಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಬಡಿಗೆಯಿಂದ ಹೊಡೆದಾಡುವ ಪದ್ದತಿ: ರಕ್ತ ಬಂದ್ರೇನೆ ಜಾತ್ರೆಗೆ ತೆರೆ, ಏನಿದು ವಿಶಿಷ್ಟ ಆಚರಣೆ

ಗಾಯಗೊಂಡಿರು ಪರಸಪ್ಪ ಬಿರಾದಾರ್​ಗೆ ಬಿಎಲ್ಡಿಇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಇಂದು ಮಧ್ಯಾಹ್ನದವರೆಗೂ ವೆಂಟಿಲೇಟರ್ ನಲ್ಲಿದ್ದ ಪರಸಪ್ಪನಿಗೆ ಇದೀಗ ವೆಂಟಿಲೇಟರ್ ತೆಗೆಯಲಾಗಿದೆ. ಸಹಜವಾಗಿಯೇ ಸ್ವತಃ ಉಸಿರಾಡುತ್ತಿದ್ದಾರೆ. ಆತನ ರಕ್ತದೊತ್ತಡ ಹೃದಯ ಬಡಿತ ಸೇರಿದಂತೆ ಎಲ್ಲಾ ಅಂಗಾಂಗಳು ಸಹಜವಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.

ಪರಸಪ್ಪನ ಜೊತೆಗೆ ಪತ್ನಿ ರೇಣುಕಾ ಜೊತೆಗೆ ಇದ್ದು ಉಪಚಾರ ಮಾಡುತ್ತಿದ್ದಾರೆ. ಕಾರಹುಣ್ಣಿಮೆ ಅಂಗವಾಗಿ ಎತ್ತುಗಳನ್ನು ಹೋರಿಗಳನ್ನು ಓಡಿಸುವುದನ್ನು ನೋಡಲು ನನ್ನ ಪತಿ ಕಾಖಂಡಕಿಗೆ ಹೋಗಿದ್ದರು. ಆಗ ಎತ್ತು ನನ್ನ ಗಂಡನ ಮೇಲೆ ದಾಳಿ ಮಾಡಿ ಅನಾಹುತ ಮಾಡಿದೆ. ಹೊಟ್ಟೆ ಹರಿದು ಕರುಗಳು ಹೊರಗಡೆ ಬಿದ್ದಿದ್ದವು. ಆಪರೇಷನ್ ಮಾಡಿದ್ದಾರೆ. ಅವರ ಆರೋಗ್ಯ ಸುಧಾರಣೆಯಾಗುತ್ತಿದೆ. ಇಂತಹ ಪದ್ದತಿ ಆಚರಣೆ ವೇಳೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ರೇಣುಕಾ ಹೇಳಿದ್ದಾರೆ.

ಇದನ್ನೂ ಓದಿ: ಮೂವರು ಮಕ್ಕಳ ಸಾವಿನ ಪ್ರಕರಣ; ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿಗಳ ಮೇಲೆ ದಾಖಲಾಯ್ತು ಎಫ್​ಐಆರ್

ಸಾರ್ವಜನಿಕರೂ ಸಹ ಕಾಖಂಡಕಿ ಕಾರಹುಣ್ಣಿಮೆ ಪದ್ದತಿಯಲ್ಲಿ ಪ್ರತಿ ವರ್ಷ ಇಂಥ ಅನಾಹುತಗಳು ನಡೆಯುತ್ತವೆ. ಕಾರುಹುಣ್ಣಿಮೆ ಪದ್ದತಿ ಮಾಡಲಿ. ಆದರೆ ಯಾವುದೇ ಅನಾಹುತವಾಗದಂತೆ ಎಚ್ಚರ ವಹಿಸಬೇಕು. ಜಿಲ್ಲಾಡಳಿತ ಪೊಲೀಸ್ ಇಲಾಖೆ ಸಹ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:50 pm, Fri, 28 June 24

ತಾಜಾ ಸುದ್ದಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?