AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಹೊಸ ಲವ್ ಸ್ಟೋರಿ, ಪ್ರೀತಿಯಲ್ಲಿರೋ ಹುಡುಗ ಯಾರು ಗೊತ್ತಾ?

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಪ್ರೇಮ ಪುರಾಣ ಸಂಚಲನ ಮೂಡಿಸಿದೆ. ಈಗಾಗಲೇ ಒಂದು ಬಾರಿ ಲವ್ವಲ್ಲಿ ಬಿದ್ದು ಬ್ರೇಕಪ್ ಮಾಡಿಕೊಂಡಿರೋ ಅಮೀರ್ ಪುತ್ರಿ ಹೊಸ ಲವ್ ಸ್ಟೋರಿಗೆ ಲಾಕ್​ಡೌನ್ ಕಾರಣವಾಗಿದೆ.

ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಹೊಸ ಲವ್ ಸ್ಟೋರಿ,  ಪ್ರೀತಿಯಲ್ಲಿರೋ ಹುಡುಗ ಯಾರು ಗೊತ್ತಾ?
ಅಮೀರ್ ಖಾನ್ ಮತ್ತು ಪುತ್ರಿ ಇರಾ ಖಾನ್
Follow us
ಆಯೇಷಾ ಬಾನು
|

Updated on:Nov 26, 2020 | 11:41 AM

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಪ್ರೀತಿ ವಿಚಾರ ಸದ್ಯ ಸಾಕಷ್ಟು ಸದ್ದು ಮಾಡ್ತಿದೆ. ಅಂದ ಹಾಗೆ ಸದ್ಯ ಸದ್ದಿಲ್ಲದೇ ಅಮೀರ್ ಪುತ್ರಿ ಇರಾ ಖಾನ್ ಪ್ರೀತಿಯಲ್ಲಿ ಮುಳುಗಿದ್ದಾರಂತೆ. ಹಾಗಾಗಿ ಇರಾ ಈಗಾಗಲೇ ಒಂದು ಬಾರಿ ಪ್ರೀತಿ ಪ್ರೇಮ ಅಂತ ಕೈ ಕೈ ಹಿಡಿದು ಸುತ್ತಾಡಿ. ಬ್ರೇಕ್ ಅಪ್ ನೋವಲ್ಲಿ ಕಾಲ ಕಳೆದು ಈಗ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

ಅಮೀರ್ ಪುತ್ರಿ ಇರಾ ಖಾನ್ ಈ ಮೊದಲು ಮಿಶಲ್ ಕ್ರಿಪಲಾನಿ ಜೊತೆ ಸುತ್ತಾಡಿದ್ರು. ಎರಡು ವರ್ಷಗಳ ಕಾಲ ಡೇಟ್ ಮಾಡಿದ್ರು. ಆದರೆ 2019ರಿಂದ ಮಿಶಲ್ ಕೃಪಲಾನಿಯಿಂದ ದೂರ ಆಗಿದ್ರು. ಹೀಗಾಗಿ ಸದ್ಯ ಈಗ ಲಾಕ್​ಡೌನ್​ನಲ್ಲಿ ಮತ್ತೆ ಹೊಸ ಪ್ರೇಮ್ ಕಹಾನಿ ಇರಾ ಖಾನ್ ಲೈಫಲ್ಲಿ ಶುರುವಾಗಿದೆ.

ಫಿಟ್ ನೆಸ್ ಕೋಚ್ ಜೊತೆ ಇರಾ ಖಾನ್ ಲವ್ವಿ ಡವ್ವಿ ಅಂದ ಹಾಗೆ ಅಮೀರ್ ಖಾನ್ ಪುತ್ರಿ ಇರಾ ಖಾನ್ ಸದ್ಯ ಪ್ರೀತಿಯಲ್ಲಿ ಬಿದ್ದಿರೋದು ಫಿಟ್ ನೆಸ್ ಕೋಚ್ ನೂಪರ್ ಶಿಕಾರೆ ಜೊತೆ ಅನ್ನೋ ಸುದ್ದಿ ದೊಡ್ಡ ಸಂಚಲನ ಮೂಡಿಸಿದೆ. ಇರಾ ಖಾನ್ ಜೊತೆ ಪ್ರೀತಿಯಲ್ಲಿರೋ ನೂಪುರ್ ಶಿಖಾರೆ, ಅಮೀರ್ ಖಾನ್‌ಗೆ ಫಿಟ್ ನೆಸ್ ಕೋಚ್ ಮಾತ್ರವಲ್ಲ ಇತ್ತೀಚೆಗೆ ಲಾಕ್‌ಡೌನ್ ಟೈಮ್‌ನಲ್ಲಿ ಇರಾಗೂ ಕೋಚ್ ಆಗಿ ಕೆಲಸ ಮಾಡ್ತಿದ್ರಂತೆ.

ಹೀಗಾಗಿ ಸದ್ಯ ಲಾಕ್‌ಡೌನ್‌ನಲ್ಲಿ ಪ್ರೀತಿಗೆ ಜಾರಿದ ಜೋಡಿ ಕಳೆದ ಆರು ತಿಂಗಳಿಂದ ಜೊತೆ ಜೊತೆಯಾಗಿ ಸುತ್ತಾಟ ನಡೆಸಿದ್ದಾರೆ ಅನ್ನೋ ಸುದ್ದಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ಸುದ್ದಿ ಬಗ್ಗೆ ಅಧಿಕೃತವಾಗಿ ಕುಟುಂಬದವರು ಮಾಹಿತಿ ನೀಡಿಲ್ಲ. ಆದ್ರೆ ಅಮೀರ್ ಪುತ್ರಿ ಇರಾ ಏನ್ ಹೇಳ್ತಾರೆ ಇನ್ನು ನೂಪುರ್ ಜೊತೆಗಾದ್ರೂ ಸಪ್ತಪದಿ ತುಳಿಯೋ ಹಂತಕ್ಕೆ ಜೊತೆಯಾಗಿ ನಿಲ್ತಾರಾ ಅನ್ನೋದನ್ನ ಕಾದು ನೊಡಬೇಕಿದೆ.

Published On - 9:19 am, Thu, 26 November 20

ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ