AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಹೊಸ ಲವ್ ಸ್ಟೋರಿ, ಪ್ರೀತಿಯಲ್ಲಿರೋ ಹುಡುಗ ಯಾರು ಗೊತ್ತಾ?

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಪ್ರೇಮ ಪುರಾಣ ಸಂಚಲನ ಮೂಡಿಸಿದೆ. ಈಗಾಗಲೇ ಒಂದು ಬಾರಿ ಲವ್ವಲ್ಲಿ ಬಿದ್ದು ಬ್ರೇಕಪ್ ಮಾಡಿಕೊಂಡಿರೋ ಅಮೀರ್ ಪುತ್ರಿ ಹೊಸ ಲವ್ ಸ್ಟೋರಿಗೆ ಲಾಕ್​ಡೌನ್ ಕಾರಣವಾಗಿದೆ.

ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಹೊಸ ಲವ್ ಸ್ಟೋರಿ,  ಪ್ರೀತಿಯಲ್ಲಿರೋ ಹುಡುಗ ಯಾರು ಗೊತ್ತಾ?
ಅಮೀರ್ ಖಾನ್ ಮತ್ತು ಪುತ್ರಿ ಇರಾ ಖಾನ್
ಆಯೇಷಾ ಬಾನು
|

Updated on:Nov 26, 2020 | 11:41 AM

Share

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಪ್ರೀತಿ ವಿಚಾರ ಸದ್ಯ ಸಾಕಷ್ಟು ಸದ್ದು ಮಾಡ್ತಿದೆ. ಅಂದ ಹಾಗೆ ಸದ್ಯ ಸದ್ದಿಲ್ಲದೇ ಅಮೀರ್ ಪುತ್ರಿ ಇರಾ ಖಾನ್ ಪ್ರೀತಿಯಲ್ಲಿ ಮುಳುಗಿದ್ದಾರಂತೆ. ಹಾಗಾಗಿ ಇರಾ ಈಗಾಗಲೇ ಒಂದು ಬಾರಿ ಪ್ರೀತಿ ಪ್ರೇಮ ಅಂತ ಕೈ ಕೈ ಹಿಡಿದು ಸುತ್ತಾಡಿ. ಬ್ರೇಕ್ ಅಪ್ ನೋವಲ್ಲಿ ಕಾಲ ಕಳೆದು ಈಗ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

ಅಮೀರ್ ಪುತ್ರಿ ಇರಾ ಖಾನ್ ಈ ಮೊದಲು ಮಿಶಲ್ ಕ್ರಿಪಲಾನಿ ಜೊತೆ ಸುತ್ತಾಡಿದ್ರು. ಎರಡು ವರ್ಷಗಳ ಕಾಲ ಡೇಟ್ ಮಾಡಿದ್ರು. ಆದರೆ 2019ರಿಂದ ಮಿಶಲ್ ಕೃಪಲಾನಿಯಿಂದ ದೂರ ಆಗಿದ್ರು. ಹೀಗಾಗಿ ಸದ್ಯ ಈಗ ಲಾಕ್​ಡೌನ್​ನಲ್ಲಿ ಮತ್ತೆ ಹೊಸ ಪ್ರೇಮ್ ಕಹಾನಿ ಇರಾ ಖಾನ್ ಲೈಫಲ್ಲಿ ಶುರುವಾಗಿದೆ.

ಫಿಟ್ ನೆಸ್ ಕೋಚ್ ಜೊತೆ ಇರಾ ಖಾನ್ ಲವ್ವಿ ಡವ್ವಿ ಅಂದ ಹಾಗೆ ಅಮೀರ್ ಖಾನ್ ಪುತ್ರಿ ಇರಾ ಖಾನ್ ಸದ್ಯ ಪ್ರೀತಿಯಲ್ಲಿ ಬಿದ್ದಿರೋದು ಫಿಟ್ ನೆಸ್ ಕೋಚ್ ನೂಪರ್ ಶಿಕಾರೆ ಜೊತೆ ಅನ್ನೋ ಸುದ್ದಿ ದೊಡ್ಡ ಸಂಚಲನ ಮೂಡಿಸಿದೆ. ಇರಾ ಖಾನ್ ಜೊತೆ ಪ್ರೀತಿಯಲ್ಲಿರೋ ನೂಪುರ್ ಶಿಖಾರೆ, ಅಮೀರ್ ಖಾನ್‌ಗೆ ಫಿಟ್ ನೆಸ್ ಕೋಚ್ ಮಾತ್ರವಲ್ಲ ಇತ್ತೀಚೆಗೆ ಲಾಕ್‌ಡೌನ್ ಟೈಮ್‌ನಲ್ಲಿ ಇರಾಗೂ ಕೋಚ್ ಆಗಿ ಕೆಲಸ ಮಾಡ್ತಿದ್ರಂತೆ.

ಹೀಗಾಗಿ ಸದ್ಯ ಲಾಕ್‌ಡೌನ್‌ನಲ್ಲಿ ಪ್ರೀತಿಗೆ ಜಾರಿದ ಜೋಡಿ ಕಳೆದ ಆರು ತಿಂಗಳಿಂದ ಜೊತೆ ಜೊತೆಯಾಗಿ ಸುತ್ತಾಟ ನಡೆಸಿದ್ದಾರೆ ಅನ್ನೋ ಸುದ್ದಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ಸುದ್ದಿ ಬಗ್ಗೆ ಅಧಿಕೃತವಾಗಿ ಕುಟುಂಬದವರು ಮಾಹಿತಿ ನೀಡಿಲ್ಲ. ಆದ್ರೆ ಅಮೀರ್ ಪುತ್ರಿ ಇರಾ ಏನ್ ಹೇಳ್ತಾರೆ ಇನ್ನು ನೂಪುರ್ ಜೊತೆಗಾದ್ರೂ ಸಪ್ತಪದಿ ತುಳಿಯೋ ಹಂತಕ್ಕೆ ಜೊತೆಯಾಗಿ ನಿಲ್ತಾರಾ ಅನ್ನೋದನ್ನ ಕಾದು ನೊಡಬೇಕಿದೆ.

Published On - 9:19 am, Thu, 26 November 20

Follow Us
ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ
ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!