AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss: ತನ್ನನ್ನೇ ತಾನು ನಂಬದ ಶಮಂತ್​ ಮೇಲೆ ಜನರಿಗೆ ಯಾಕಿಷ್ಟು ನಂಬಿಕೆ? ಇದು ಬಿಗ್​ ಬಾಸ್ ರಹಸ್ಯ!

Bigg Boss Kannada 8 | Shamanth Bro Gowda: ಮೂರನೇ ವಾರದ ಎಲಿಮಿನೇಷನ್​ನಲ್ಲಿ ಗೀತಾ ಭಾರತಿ ಭಟ್​ ಮತ್ತು ಶಮಂತ್​ ಮಧ್ಯೆ ಪೈಪೋಟಿ ನಡೆದಿತ್ತು. ‘ಈ ವಾರ ನಾನೇ ಔಟ್​ ಆಗೋದು ಅನಿಸುತ್ತೆ’ ಎಂದು ಶಮಂತ್​ ಆತ್ಮವಿಶ್ವಾಸ ಕಳೆದುಕೊಂಡು ಮಾತನಾಡಿದ್ದರು. ಆದರೂ ಅವರು ಸೇಫ್​ ಆಗಿದ್ದು ಅಚ್ಚರಿ!

Bigg Boss: ತನ್ನನ್ನೇ ತಾನು ನಂಬದ ಶಮಂತ್​ ಮೇಲೆ ಜನರಿಗೆ ಯಾಕಿಷ್ಟು ನಂಬಿಕೆ? ಇದು ಬಿಗ್​ ಬಾಸ್ ರಹಸ್ಯ!
ಶಮಂತ್​ ಬ್ರೋ ಗೌಡ
ಮದನ್​ ಕುಮಾರ್​
| Edited By: |

Updated on:Mar 26, 2021 | 5:00 PM

Share

ಬಿಗ್​ ಬಾಸ್​ ಆಟದ ಲೆಕ್ಕಾಚಾರವೇ ಬೇರೆ. ಒಂದು ವಾರ ವೀಕ್​ ಆಗಿದ್ದವರು ಮತ್ತೊಂದು ವಾರ ಸಖತ್​ ಪರ್ಫಾಮೆನ್ಸ್​ ನೀಡಬಹುದು. ಆದರೆ ಶಮಂತ್​ ಬ್ರೋ ಗೌಡ ವಿಚಾರದಲ್ಲಿ ಈ ಲೆಕ್ಕ ಯಾಕೋ ತಪ್ಪಾಗುತ್ತಿದೆ. ಕಳೆದ ಮೂರು ವಾರದಿಂದ ಅವರು ಬೇರೆಯದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಮೂರನೇ ವಾರದ ಎಲಿಮಿನೇಷನ್​ನಲ್ಲಿ ಅವರು ಮನೆಯಿಂದ ಹೊರನಡೆಯುತ್ತಾರೆ ಎಂದೇ ಊಹಿಸಲಾಗಿತ್ತು. ಆದರೆ ಜಸ್ಟ್​ ಮಿಸ್​!

ಮೂರನೇ ವಾರದ ಎಲಿಮಿನೇಷನ್​ನಲ್ಲಿ ಗೀತಾ ಭಾರತಿ ಭಟ್​ ಮತ್ತು ಶಮಂತ್​ ಬ್ರೋ ಗೌಡ ಮಧ್ಯೆ ಭಾರಿ ಪೈಪೋಟಿ ನಡೆದಿತ್ತು. ಈ ಸಂದರ್ಭದಲ್ಲಿ ಯಾರು ಮನೆಯಿಂದ ಹೊರಹೋಗಬಹುದು ಎಂದು ಎಲ್ಲ ಸದಸ್ಯರಿಗೂ ಸುದೀಪ್​ ಪ್ರಶ್ನೆ ಕೇಳಿದರು. ಆಗ ಹೆಚ್ಚು ಜನರು ಶಮಂತ್​ ಹೆಸರನ್ನು ಹೇಳಿದರು. ಶಮಂತ್​ ಮನೆಯಿಂದ ಹೊರನಡೆಯಬೇಕು ಎಂಬ ಅಭಿಪ್ರಾಯ ಬಹುತೇಕರಿಂದ ಕೇಳಿಬಂತು…

ಸ್ವತಃ ಶಮಂತ್​ಗೂ ಸುದೀಪ್​ ಈ ಪ್ರಶ್ನೆ ಕೇಳಿದರು. ‘ಈ ವಾರ ನಾನೇ ಔಟ್​ ಆಗೋದು ಅನಿಸುತ್ತೆ ಸರ್​. ಯಾಕೆಂದರೆ ಎಲ್ಲರೂ ನನ್ನ ಹೆಸರನ್ನೇ ಹೇಳ್ತಾ ಇದಾರೆ’ ಎಂದು ಶಮಂತ್​ ಸಂಪೂರ್ಣ ಆತ್ಮವಿಶ್ವಾಸ ಕಳೆದುಕೊಂಡು ಮಾತನಾಡಿದರು! ಅಂದರೆ ಸ್ವತಃ ಶಮಂತ್​ಗೆ ತಮ್ಮ ಮೇಲೆ ಆತ್ಮವಿಶ್ವಾಸ ಇಲ್ಲ ಎಂಬುದು ಸಾಬೀತಾಯಿತು. ಆದರೆ ಅಂತಿಮವಾಗಿ ಎಲಿಮಿನೇಟ್​ ಆಗಿದ್ದು ಮಾತ್ರ ಗೀತಾ. ಅಷ್ಟಕ್ಕೂ ಮನೆ ಮಂದಿಗೆಲ್ಲ ಬೇಡವಾದ, ಆತ್ಮ ವಿಶ್ವಾಸವೇ ಇಲ್ಲದ ಶಮಂತ್​ ಸೇಫ್​ ಆಗಿದ್ದು ಹೇಗೆ ಎಂಬ ಅನುಮಾನ ಅನೇಕರಿಗೆ ಕಾಡುತ್ತಿದೆ…

ವೀಕ್ಷಕರು ವೋಟ್​ ಮಾಡಿದ್ದರಿಂದಾಗಿ ಶಮಂತ್​ ಸೇಫ್​ ಆಗಿದ್ದಾರೆ. ಮೂರನೇ ವಾರವೂ ಜನರು ಅವರ ಕೈ ಹಿಡಿದಿದ್ದಾರೆ. ಆದರೆ ಯಾರಿಗೆ ಎಷ್ಟು ವೋಟ್​ ಬಂದಿದೆ ಎಂಬುದನ್ನು ವಾಹಿನಿ ಬಹಿರಂಗ ಪಡಿಸುವುದಿಲ್ಲ. ಹಾಗಾಗಿ ಇದೊಂದು ರಹಸ್ಯವೇ ಸರಿ. ಪ್ರತಿ ಬಾರಿಯೂ ‘ಇನ್ಮೇಲೆ ನನ್ನ ಆಟ ಶುರು ಮಾಡ್ತೀನಿ’ ಎಂದು ಹೇಳುವ ಶಮಂತ್​ ಈವರೆಗೂ ಅಸಲಿ ಆಟ ಶುರು ಮಾಡಿಲ್ಲ. ಎರಡನೇ ವಾರ ಕಳಪೆ ಹಣೆಪಟ್ಟಿಯಿಂದ ಅವರು ಜೈಲು ಶಿಕ್ಷೆ ಕೂಡ ಅನುಭವಿಸಿದ್ದರು. ಮುಂದೆ ಏನು ಮಾಡುತ್ತಾರೋ ಕಾದು ನೋಡಬೇಕು.

ಇದನ್ನೂ ಓದಿ: BBK8: ಲ್ಯಾಗ್​ ಮಂಜು ಬಿಗ್​ ಬಾಸ್​ ವಿನ್ನರ್​; ಶಮಂತ್​ ಶೀಘ್ರವೇ ಔಟ್​! ಹೀಗೆ ಭವಿಷ್ಯ ನುಡಿದಿದ್ದು ಯಾರು?

‘ಶಮಂತ್​ಗೆ ಕ್ಯಾಪ್ಟನ್ಸಿ ಕೊಟ್ಟಿದ್ದ ನನಗೆ ನಾನೇ ಚಪ್ಪಲ್ಲಿಯಲ್ಲಿ ಹೊಡೆದುಕೊಳ್ಳಬೇಕು‘

Published On - 2:29 pm, Mon, 22 March 21

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ