Bigg Boss: ತನ್ನನ್ನೇ ತಾನು ನಂಬದ ಶಮಂತ್​ ಮೇಲೆ ಜನರಿಗೆ ಯಾಕಿಷ್ಟು ನಂಬಿಕೆ? ಇದು ಬಿಗ್​ ಬಾಸ್ ರಹಸ್ಯ!

Bigg Boss Kannada 8 | Shamanth Bro Gowda: ಮೂರನೇ ವಾರದ ಎಲಿಮಿನೇಷನ್​ನಲ್ಲಿ ಗೀತಾ ಭಾರತಿ ಭಟ್​ ಮತ್ತು ಶಮಂತ್​ ಮಧ್ಯೆ ಪೈಪೋಟಿ ನಡೆದಿತ್ತು. ‘ಈ ವಾರ ನಾನೇ ಔಟ್​ ಆಗೋದು ಅನಿಸುತ್ತೆ’ ಎಂದು ಶಮಂತ್​ ಆತ್ಮವಿಶ್ವಾಸ ಕಳೆದುಕೊಂಡು ಮಾತನಾಡಿದ್ದರು. ಆದರೂ ಅವರು ಸೇಫ್​ ಆಗಿದ್ದು ಅಚ್ಚರಿ!

Bigg Boss: ತನ್ನನ್ನೇ ತಾನು ನಂಬದ ಶಮಂತ್​ ಮೇಲೆ ಜನರಿಗೆ ಯಾಕಿಷ್ಟು ನಂಬಿಕೆ? ಇದು ಬಿಗ್​ ಬಾಸ್ ರಹಸ್ಯ!
ಶಮಂತ್​ ಬ್ರೋ ಗೌಡ
Edited By:

Updated on: Mar 26, 2021 | 5:00 PM

ಬಿಗ್​ ಬಾಸ್​ ಆಟದ ಲೆಕ್ಕಾಚಾರವೇ ಬೇರೆ. ಒಂದು ವಾರ ವೀಕ್​ ಆಗಿದ್ದವರು ಮತ್ತೊಂದು ವಾರ ಸಖತ್​ ಪರ್ಫಾಮೆನ್ಸ್​ ನೀಡಬಹುದು. ಆದರೆ ಶಮಂತ್​ ಬ್ರೋ ಗೌಡ ವಿಚಾರದಲ್ಲಿ ಈ ಲೆಕ್ಕ ಯಾಕೋ ತಪ್ಪಾಗುತ್ತಿದೆ. ಕಳೆದ ಮೂರು ವಾರದಿಂದ ಅವರು ಬೇರೆಯದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಮೂರನೇ ವಾರದ ಎಲಿಮಿನೇಷನ್​ನಲ್ಲಿ ಅವರು ಮನೆಯಿಂದ ಹೊರನಡೆಯುತ್ತಾರೆ ಎಂದೇ ಊಹಿಸಲಾಗಿತ್ತು. ಆದರೆ ಜಸ್ಟ್​ ಮಿಸ್​!

ಮೂರನೇ ವಾರದ ಎಲಿಮಿನೇಷನ್​ನಲ್ಲಿ ಗೀತಾ ಭಾರತಿ ಭಟ್​ ಮತ್ತು ಶಮಂತ್​ ಬ್ರೋ ಗೌಡ ಮಧ್ಯೆ ಭಾರಿ ಪೈಪೋಟಿ ನಡೆದಿತ್ತು. ಈ ಸಂದರ್ಭದಲ್ಲಿ ಯಾರು ಮನೆಯಿಂದ ಹೊರಹೋಗಬಹುದು ಎಂದು ಎಲ್ಲ ಸದಸ್ಯರಿಗೂ ಸುದೀಪ್​ ಪ್ರಶ್ನೆ ಕೇಳಿದರು. ಆಗ ಹೆಚ್ಚು ಜನರು ಶಮಂತ್​ ಹೆಸರನ್ನು ಹೇಳಿದರು. ಶಮಂತ್​ ಮನೆಯಿಂದ ಹೊರನಡೆಯಬೇಕು ಎಂಬ ಅಭಿಪ್ರಾಯ ಬಹುತೇಕರಿಂದ ಕೇಳಿಬಂತು…

ಸ್ವತಃ ಶಮಂತ್​ಗೂ ಸುದೀಪ್​ ಈ ಪ್ರಶ್ನೆ ಕೇಳಿದರು. ‘ಈ ವಾರ ನಾನೇ ಔಟ್​ ಆಗೋದು ಅನಿಸುತ್ತೆ ಸರ್​. ಯಾಕೆಂದರೆ ಎಲ್ಲರೂ ನನ್ನ ಹೆಸರನ್ನೇ ಹೇಳ್ತಾ ಇದಾರೆ’ ಎಂದು ಶಮಂತ್​ ಸಂಪೂರ್ಣ ಆತ್ಮವಿಶ್ವಾಸ ಕಳೆದುಕೊಂಡು ಮಾತನಾಡಿದರು! ಅಂದರೆ ಸ್ವತಃ ಶಮಂತ್​ಗೆ ತಮ್ಮ ಮೇಲೆ ಆತ್ಮವಿಶ್ವಾಸ ಇಲ್ಲ ಎಂಬುದು ಸಾಬೀತಾಯಿತು. ಆದರೆ ಅಂತಿಮವಾಗಿ ಎಲಿಮಿನೇಟ್​ ಆಗಿದ್ದು ಮಾತ್ರ ಗೀತಾ. ಅಷ್ಟಕ್ಕೂ ಮನೆ ಮಂದಿಗೆಲ್ಲ ಬೇಡವಾದ, ಆತ್ಮ ವಿಶ್ವಾಸವೇ ಇಲ್ಲದ ಶಮಂತ್​ ಸೇಫ್​ ಆಗಿದ್ದು ಹೇಗೆ ಎಂಬ ಅನುಮಾನ ಅನೇಕರಿಗೆ ಕಾಡುತ್ತಿದೆ…

ವೀಕ್ಷಕರು ವೋಟ್​ ಮಾಡಿದ್ದರಿಂದಾಗಿ ಶಮಂತ್​ ಸೇಫ್​ ಆಗಿದ್ದಾರೆ. ಮೂರನೇ ವಾರವೂ ಜನರು ಅವರ ಕೈ ಹಿಡಿದಿದ್ದಾರೆ. ಆದರೆ ಯಾರಿಗೆ ಎಷ್ಟು ವೋಟ್​ ಬಂದಿದೆ ಎಂಬುದನ್ನು ವಾಹಿನಿ ಬಹಿರಂಗ ಪಡಿಸುವುದಿಲ್ಲ. ಹಾಗಾಗಿ ಇದೊಂದು ರಹಸ್ಯವೇ ಸರಿ. ಪ್ರತಿ ಬಾರಿಯೂ ‘ಇನ್ಮೇಲೆ ನನ್ನ ಆಟ ಶುರು ಮಾಡ್ತೀನಿ’ ಎಂದು ಹೇಳುವ ಶಮಂತ್​ ಈವರೆಗೂ ಅಸಲಿ ಆಟ ಶುರು ಮಾಡಿಲ್ಲ. ಎರಡನೇ ವಾರ ಕಳಪೆ ಹಣೆಪಟ್ಟಿಯಿಂದ ಅವರು ಜೈಲು ಶಿಕ್ಷೆ ಕೂಡ ಅನುಭವಿಸಿದ್ದರು. ಮುಂದೆ ಏನು ಮಾಡುತ್ತಾರೋ ಕಾದು ನೋಡಬೇಕು.

ಇದನ್ನೂ ಓದಿ: BBK8: ಲ್ಯಾಗ್​ ಮಂಜು ಬಿಗ್​ ಬಾಸ್​ ವಿನ್ನರ್​; ಶಮಂತ್​ ಶೀಘ್ರವೇ ಔಟ್​! ಹೀಗೆ ಭವಿಷ್ಯ ನುಡಿದಿದ್ದು ಯಾರು?

‘ಶಮಂತ್​ಗೆ ಕ್ಯಾಪ್ಟನ್ಸಿ ಕೊಟ್ಟಿದ್ದ ನನಗೆ ನಾನೇ ಚಪ್ಪಲ್ಲಿಯಲ್ಲಿ ಹೊಡೆದುಕೊಳ್ಳಬೇಕು‘

Published On - 2:29 pm, Mon, 22 March 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us