AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bloodbath in stock market: ಷೇರುಪೇಟೆಯಲ್ಲಿ ರಕ್ತದೋಕುಳಿ; 1900 ಪಾಯಿಂಟ್​​ಗೂ ಹೆಚ್ಚು ಕುಸಿದ ಸೆನ್ಸೆಕ್ಸ್

ಭಾರತದ ಷೇರು ಮಾರ್ಕೆಟ್ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಶುಕ್ರವಾರ ಭಾರೀ ಪ್ರಮಾಣದಲ್ಲಿ ಕುಸಿದಿವೆ. ಈ ಕುಸಿತಕ್ಕೆ ಕಾರಣವಾಗಿದ್ದು ಬ್ಯಾಂಕಿಂಗ್ ಮತ್ತು ಫೈನಾನ್ಷಿಯಲ್ ಸ್ಟಾಕ್​ಗಳು.

Bloodbath in stock market: ಷೇರುಪೇಟೆಯಲ್ಲಿ ರಕ್ತದೋಕುಳಿ; 1900 ಪಾಯಿಂಟ್​​ಗೂ ಹೆಚ್ಚು ಕುಸಿದ ಸೆನ್ಸೆಕ್ಸ್
ಲಾಭದ ನಗದು
Follow us
Srinivas Mata
|

Updated on:Feb 26, 2021 | 4:32 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿಯಲ್ಲಿ ಫೆಬ್ರವರಿ 26ನೇ ತಾರೀಕಿನ ಶುಕ್ರವಾರ ರಕ್ತದೋಕುಳಿ ಆಗಿದೆ. ಮಧ್ಯಾಹ್ನ 1.15ರ ಹೊತ್ತಿಗೆ ಬಿಎಸ್​​ಇ ಸೆನ್ಸೆಕ್ಸ್ ಸೂಚ್ಯಂಕ 1,743.28 ಇಳಿಕೆ ಕಂಡು, 49,296.03ಪಾಯಿಂಟ್​​ನೊಂದಿಗೆ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ ಸೂಚ್ಯಂಕವು 510.8 ಪಾಯಿಂಟ್ ನೆಲ ಕಚ್ಚಿ, 14,586.55 ಪಾಯಿಂಟ್​ನೊಂದಿಗೆ ವಹಿವಾಟು ನಡೆಸಿತು.

ದಿನಾಂತ್ಯದ ವಹಿವಾಟು ಮುಕ್ತಾಯ ಆದಾಗ ಸೆನ್ಸೆಕ್ಸ್ 1939.32 ಪಾಯಿಂಟ್​​ಗಳಷ್ಟು ಕುಸಿತ ಕಂಡು, 49,099.99 ಪಾಯಿಂಟ್​ನಲ್ಲಿ ಕೊನೆಯಾಯಿತು. ಇನ್ನು ನಿಫ್ಟಿ 568.20 ಪಾಯಿಂಟ್ ಇಳಿದು 14,529.20 ಪಾಯಿಂಟ್ ತಲುಪಿತು. ನಿಫ್ಟಿ ಬ್ಯಾಂಕ್ 1745.40 ಪಾಯಿಂಟ್ ಇಳಿಕೆಯಾಯಿತು.

ಇಂದಿನ ವಹಿವಾಟಿನಲ್ಲಿ ಮಾರ್ಕೆಟ್ ನೆಲಕಚ್ಚಲು ಕಾರಣವಾಗಿದ್ದು ಬ್ಯಾಂಕಿಂಗ್ ಹಾಗೂ ಫೈನಾನ್ಷಿಯಲ್ ಷೇರುಗಳು. ಬ್ಯಾಂಕ್ ನಿಫ್ಟಿ, ಖಾಸಗಿ ಬ್ಯಾಂಕ್, ಪಿಎಸ್​ಯು ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಸೂಚ್ಯಂಕಗಳು ತಲಾ 4 ಪರ್ಸೆಂಟ್​​ಗೂ ಹೆಚ್ಚು ಕುಸಿತ ಕಂಡವು. ನಿಫ್ಟಿಯಲ್ಲಿ ಯಾವುದೇ ಷೇರು ಏರಿಕೆ ಕಾಣಲಿಲ್ಲ. ಇನ್ನು ಇಳಿಕೆಯತ್ತ ಗಮನಿಸುವುದಾದರೆ ಒಎನ್​​ಜಿಸಿ, ಜೆಎಸ್​ಡಬ್ಲ್ಯು ಸ್ಟೀಲ್, ಹೀರೋ ಮೋಟೋಕಾರ್ಪ್, ಮಹೀಂದ್ರಾ ಅಂಡ್ ಮಹೀಂದ್ರಾ ಹಾಗೂ ಕೊಟಕ್ ಮಹೀಂದ್ರಾ ಕಂಪೆನಿ ಷೇರುಗಳು ಕನಿಷ್ಠ 6 ಪರ್ಸೆಂಟ್ ಇಳಿಕೆ ಕಂಡವು.

ಇಂದು ಸರ್ಕಾರದಿಂದ ಜಿಡಿಪಿ ಅಂಕಿ- ಅಂಶ ಬಿಡುಗಡೆ ಆಗಲಿದೆ. ಅಕ್ಟೋಬರ್​​ನಿಂದ ಡಿಸೆಂಬರ್ ತ್ರೈಮಾಸಿಕದ ಅಂಕಿ- ಅಂಶ ಬಿಡುಗಡೆ ಆಗಲಿದ್ದು, ಅದು ಸಕಾರಾತ್ಮಕವಾಗಬಹುದು ಎಂಬ ನಿರೀಕ್ಷೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎಸ್​ಬಿಐ, ಆ್ಯಕ್ಸಿಸ್, ಕೆನರಾ ಬ್ಯಾಂಕ್.. ಉಳಿತಾಯ ಖಾತೆಗೆ ಯಾವ ಬ್ಯಾಂಕ್​ನಲ್ಲಿ ಹೆಚ್ಚು ಬಡ್ಡಿ? ಇಲ್ಲಿದೆ ವಿವರ

Published On - 1:52 pm, Fri, 26 February 21

ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?