AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಬಿಐ, ಆ್ಯಕ್ಸಿಸ್, ಕೆನರಾ ಬ್ಯಾಂಕ್.. ಉಳಿತಾಯ ಖಾತೆಗೆ ಯಾವ ಬ್ಯಾಂಕ್​ನಲ್ಲಿ ಹೆಚ್ಚು ಬಡ್ಡಿ? ಇಲ್ಲಿದೆ ವಿವರ

Interest rate on savings account: ಉಳಿತಾಯ ಖಾತೆಯಲ್ಲಿ ನಗದು ಇಡಬೇಕಾದರೆ ಯಾವ ಬ್ಯಾಂಕ್ ಎಷ್ಟು ಬಡ್ಡಿ ನೀಡುತ್ತದೆ ಎಂಬುದನ್ನು ಯೋಚಿಸಬೇಕಾಗುತ್ತದೆ. ಸ್ಥಿರ ಠೇವಣಿಗೆ (fixed deposits) ಸಿಗುವ ಬಡ್ಡಿದರಕ್ಕೆ ಹೋಲಿಸಿದರೆ ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ಸಿಗುವ ಬಡ್ಡಿದರ ಕಡಿಮೆಯಾಗಿರುತ್ತದೆ.

ಎಸ್​ಬಿಐ, ಆ್ಯಕ್ಸಿಸ್, ಕೆನರಾ ಬ್ಯಾಂಕ್.. ಉಳಿತಾಯ ಖಾತೆಗೆ ಯಾವ ಬ್ಯಾಂಕ್​ನಲ್ಲಿ ಹೆಚ್ಚು ಬಡ್ಡಿ? ಇಲ್ಲಿದೆ ವಿವರ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
| Edited By: |

Updated on:Feb 21, 2021 | 10:06 PM

Share

ಉಳಿತಾಯ ಖಾತೆಯಲ್ಲಿ ನಗದು ಇಡಬೇಕಾದರೆ ಯಾವ ಬ್ಯಾಂಕ್ ಎಷ್ಟು ಬಡ್ಡಿ ನೀಡುತ್ತದೆ ಎಂಬುದನ್ನು ಯೋಚಿಸಬೇಕಾಗುತ್ತದೆ. ಸ್ಥಿರ ಠೇವಣಿಗೆ (fixed deposits) ಸಿಗುವ ಬಡ್ಡಿದರಕ್ಕೆ ಹೋಲಿಸಿದರೆ ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ಸಿಗುವ ಬಡ್ಡಿದರ ಕಡಿಮೆಯಾಗಿರುತ್ತದೆ. ಖಾಸಗಿ ಬ್ಯಾಂಕ್​ಗಳು ಮತ್ತು ಕಿರು ಹಣಕಾಸು ಸಂಸ್ಥೆಗಳು ನೀಡುವ ಬಡ್ಡಿದರಕ್ಕಿಂತಲೂ ಸಾಮಾನ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕ್​ಗಳು ಉಳಿತಾಯ ಖಾತೆಗೆ ನೀಡುವ ಬಡ್ಡಿದರ ಕಡಿಮೆಯಾಗಿರುತ್ತದೆ. ಹೀಗಿರುವಾಗ ಯಾವ ಬ್ಯಾಂಕ್ ಉಳಿತಾಯ ಖಾತೆಗೆ ಎಷ್ಟು ಬಡ್ಡಿ ನೀಡುತ್ತದೆ ಎಂಬುದರ ಬಗ್ಗೆ ನೋಡೋಣ.

ಭಾರತೀಯ ಸ್ಟೇಟ್ ಬ್ಯಾಂಕ್ (State bank of India – SBI) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆಯಲ್ಲಿ ₹ 1 ಲಕ್ಷವರೆಗೆ ನಗದು ಇರಿಸಿದರೆ ಶೇ. 2.75 ಮತ್ತು ಒಂದು ಲಕ್ಷಕ್ಕಿಂತ ಹೆಚ್ಚಿನ ನಗದಿಗೆ ಶೇ.2.75 ಬಡ್ಡಿದರ ಸಿಗಲಿದೆ.

ಕೆನರಾ ಬ್ಯಾಂಕ್ ಕೆನರಾ ಬ್ಯಾಂಕ್​ನಲ್ಲಿ ₹ 50 ಲಕ್ಷಕ್ಕಿಂತ ಕಡಿಮೆ ನಗದು ಇರಿಸಿದರೆ ಶೇ 2.90 ಬಡ್ಡಿ, ₹ 50 ಲಕ್ಷಕ್ಕಿಂತ ಹೆಚ್ಚು ಹಾಗೂ ₹ 100 ಕೋಟಿಗಿಂತ ಕಡಿಮೆ ನಗದು ಇರಿಸಿದರೆ ಶೇ 2.90 ಬಡ್ಡಿ ಸಿಗುತ್ತದೆ. ₹ 100 ಕೋಟಿಗಿಂತ ಹೆಚ್ಚು ಮತ್ತು 300 ಕೋಟಿಗಿಂತ ಕಡಿಮೆ ನಗದು ಇರಿಸಿದರೆ ಶೇ 3 ಬಡ್ಡಿ ದರ ಇದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ 25 ಲಕ್ಷದವರೆಗೆ ಮತ್ತ 25 ಲಕ್ಷಕ್ಕಿಂತ ಹೆಚ್ಚಿನ ನಗದಿಗೆ ಶೇ. 3 ಬಡ್ಡಿದರವಿದೆ.

ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಆಫ್ ಬರೋಡಾದಲ್ಲಿ ₹ 1 ಲಕ್ಷವರೆಗೆ ನಗದು ಇರಿಸಿದರೆ ಶೇ  2.75, ಒಂದು ಲಕ್ಷಕ್ಕಿಂತ ₹ 200 ಕೋಟಿವರೆಗಿನ ಠೇವಣಿಗೆ ಶೇ 2.75 ಬಡ್ಡಿ ಸಿಗಲಿದೆ.

ಪಂಬಾಬ್ ನ್ಯಾಷನಲ್ ಬ್ಯಾಂಕ್ ಈ ಬ್ಯಾಂಕ್​ನಲ್ಲಿ ₹ 50 ಲಕ್ಷದವರೆಗೆ ಶೇ 3 ಮತ್ತು ₹ 50 ಲಕ್ಷಕ್ಕಿಂತ ಹೆಚ್ಚಿನ ನಗದು ಉಳಿತಾಯ ಖಾತೆಯಲ್ಲಿದ್ದರೆ ಶೇ 3 ಬಡ್ಡಿದರ ಸಿಗಲಿದೆ.

ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆಯಲ್ಲಿ ಇರಿಸುವ ಹಣಕ್ಕೆ ಶೇ 2.90 ಬಡ್ಡಿ ಸಿಗುತ್ತದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆಯಲ್ಲಿ ₹ 10 ಲಕ್ಷವರೆಗೆ ನಗದು ಇರಿಸಿದರೆ ಬಡ್ಡಿದರ ಶೇ 3 ಹಾಗೂ ₹ 10 ಲಕ್ಷಕ್ಕಿಂತ ಹೆಚ್ಚು ನಗದು ಇರಿಸಿದರೆ ಬಡ್ಡಿದರ ಶೇ 2.75 ಆಗಿದೆ.

ಇಂಡಿಯನ್ ಓವರ್​ಸಿಸ್ ಬ್ಯಾಂಕ್ ಇಂಡಿಯನ್ ಓವರ್​ಸಿಸ್ ಬ್ಯಾಂಕ್​ನ ಉಳಿತಾಯ ಖಾತೆಯಲ್ಲಿ ₹ 25 ಲಕ್ಷದವರೆಗೆ ನಗದು ಇರಿಸಿದರೆ ಶೇ 3.05 ಬಡ್ಡಿದರವಿದೆ.

ಪಂಜಾಬ್ ಸಿಂಧ್ ಬ್ಯಾಂಕ್ ಪಂಜಾಬ್ ಸಿಂಧ್ ಬ್ಯಾಂಕ್​ನಲ್ಲಿ ಉಳಿತಾಯ ಖಾತೆಯಲ್ಲಿರಿಸುವ ನಗದಿಗೆ ಶೇ 3.10 ಬಡ್ಡಿ ಸಿಗುತ್ತದೆ.

ಖಾಸಗಿ ಬ್ಯಾಂಕ್​ಗಳು

ಆಕ್ಸಿಕ್ ಬ್ಯಾಂಕ್ ಆಕ್ಸಿಸ್ ಬ್ಯಾಂಕ್​ನ ಉಳಿತಾಯ ಖಾತೆಯಲ್ಲಿ ₹50 ಲಕ್ಷಕ್ಕಿಂತ ಕಡಿಮೆ ನಗದು ಇರಿಸಿದರೆ  ಶೇ. 3ರಷ್ಟು ಬಡ್ಡಿ ಸಿಗುತ್ತದೆ. ₹ 50 ಲಕ್ಷಕ್ಕಿಂತ ಹೆಚ್ಚು ₹ 10 ಕೋಟಿಗಿಂತ ಕಡಿಮೆ ನಗದು ಇರಿಸಿದರೆ ಸಿಗುವ ಬಡ್ಡಿದರ ಶೇ 3.50.

ಕರ್ಣಾಟಕ ಬ್ಯಾಂಕ್ ಕರ್ಣಾಟಕ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ₹ 50 ಲಕ್ಷವರೆಗೆ ಶೇ 2.75 ಬಡ್ಡಿದರವಿದೆ. ₹ 50 ಲಕ್ಷದಿಂದ ₹ 1 ಕೋಟಿಯವರೆಗೆ ಶೇ .3.50 ಹಾಗೂ ₹ 1 ಕೋಟಿಗೂ ಹೆಚ್ಚು ಮೊತ್ತ ಇರಿಸಿದರೆ ಶೇ 4.50 ಬಡ್ಡಿ ಸಿಗಲಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ಎಚ್​ಡಿಎಫ್​ಸಿ ಬ್ಯಾಂಕ್​ನ ಉಳಿತಾಯ ಖಾತೆಯಲ್ಲಿ ₹ 50 ಲಕ್ಷದವರೆಗೆ ಶೇ 3, ₹ 50 ಲಕ್ಷಕ್ಕೂ ಹೆಚ್ಚು ಹಣ ಇದ್ದರೆ ಶೇ 3.5ರ ಬಡ್ಡಿ ಸಿಗಲಿದೆ.

ಐಸಿಐಸಿಐ ಬ್ಯಾಂಕ್ ಐಸಿಐಸಿಐ ಬ್ಯಾಂಕ್​ನ ಉಳಿತಾಯ ಖಾತೆಯಲ್ಲಿ ₹ 50 ಲಕ್ಷದವರೆಗೆ ಶೇ 3, ₹ 50 ಲಕ್ಷಕ್ಕೂ ಹೆಚ್ಚು ಹಣ ಇದ್ದರೆ ಶೇ 3.5ರ ಬಡ್ಡಿ ಸಿಗಲಿದೆ.

ಇದನ್ನೂ ಓದಿ: ದಿನಕ್ಕೆ 411 ರೂ. ಉಳಿಸಿದರೆ 15 ವರ್ಷಕ್ಕೆ ಬರೋಬ್ಬರಿ 40.68 ಲಕ್ಷ: ಹಣಕಾಸಿನ ಆಸರೆಗೆ ಪಿಪಿಎಫ್​ ಉತ್ತಮ ಆಯ್ಕೆ

ಇದನ್ನೂ ಓದಿ: ಇಳಿಗಾಲದ ಇಡಗಂಟಿಗೆ ಅತ್ಯುತ್ತಮ ಉಪಾಯ ನೌಕರರ ಭವಿಷ್ಯ ನಿಧಿ

Published On - 10:03 pm, Sun, 21 February 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್