AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಣು ಬಿಗಿದುಕೊಂಡು ಒದ್ದಾಡ್ತಿದ್ದ ಮಹಿಳೆಯ ಜೀವ ಉಳಿಸಿದ್ದು ಬಾಲಕನ ಚಾಕೊಲೇಟ್ ಪ್ರೀತಿ, ಹೇಗೆ?

ದಾವಣಗೆರೆ: ಅದು ಮಧ್ಯಾಹ್ನದ ಬಿಸಿಲು, ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಮೇಲಾಗಿ ದೀಪಾವಳಿ ಹಬ್ಬ ಮುಗಿದ ಹಿನ್ನೆಲೆ ಬಹುತೇಕರು ತಮ್ಮ ಕೆಲ್ಸಕ್ಕೆ ಹೋಗಿದ್ದರು. ಕೊರೊನಾ ಕಾಟದಿಂದಾಗಿ ಶಾಲಾ ಕಾಲೇಜುಗಳ ಸಹ ಬಂದ್ ಇವೆ. ವಸತಿ ಪರಿಸರ ಬಿಕೋ ಅನ್ನುತ್ತಿದೆ. ಸರಿಯಾಗಿ ಅಂತಹುದೇ ಘಳಿಗೆಯಲ್ಲಿ.. ಮಧ್ಯಾಹ್ನ ಆ 12 ವರ್ಷದ ಬಾಲಕನಿಗೆ ಚಾಕೊಲೇಟ್ ತಿನ್ನುವ ಆಸೆ ಆಗಿದೆ. ಹೀಗಾಗಿ ಆತ ಮನೆ ಹತ್ತಿರವೆ ಇರುವ ಅಂಗಡಿಗೆ ಹೋಗಿದ್ದಾನೆ.. ನಾವು ಹೇಳುತ್ತಿರುವುದು ದಾವಣಗೆರೆ ನಗರದ ಹೊರ ವಲಯದ ಆವರಗೆರೆ ಬಳಿಯ […]

ನೇಣು ಬಿಗಿದುಕೊಂಡು ಒದ್ದಾಡ್ತಿದ್ದ ಮಹಿಳೆಯ ಜೀವ ಉಳಿಸಿದ್ದು ಬಾಲಕನ ಚಾಕೊಲೇಟ್ ಪ್ರೀತಿ, ಹೇಗೆ?
ಪೃಥ್ವಿಶಂಕರ
| Edited By: |

Updated on: Nov 18, 2020 | 12:36 PM

Share

ದಾವಣಗೆರೆ: ಅದು ಮಧ್ಯಾಹ್ನದ ಬಿಸಿಲು, ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಮೇಲಾಗಿ ದೀಪಾವಳಿ ಹಬ್ಬ ಮುಗಿದ ಹಿನ್ನೆಲೆ ಬಹುತೇಕರು ತಮ್ಮ ಕೆಲ್ಸಕ್ಕೆ ಹೋಗಿದ್ದರು. ಕೊರೊನಾ ಕಾಟದಿಂದಾಗಿ ಶಾಲಾ ಕಾಲೇಜುಗಳ ಸಹ ಬಂದ್ ಇವೆ. ವಸತಿ ಪರಿಸರ ಬಿಕೋ ಅನ್ನುತ್ತಿದೆ. ಸರಿಯಾಗಿ ಅಂತಹುದೇ ಘಳಿಗೆಯಲ್ಲಿ.. ಮಧ್ಯಾಹ್ನ ಆ 12 ವರ್ಷದ ಬಾಲಕನಿಗೆ ಚಾಕೊಲೇಟ್ ತಿನ್ನುವ ಆಸೆ ಆಗಿದೆ. ಹೀಗಾಗಿ ಆತ ಮನೆ ಹತ್ತಿರವೆ ಇರುವ ಅಂಗಡಿಗೆ ಹೋಗಿದ್ದಾನೆ.. ನಾವು ಹೇಳುತ್ತಿರುವುದು ದಾವಣಗೆರೆ ನಗರದ ಹೊರ ವಲಯದ ಆವರಗೆರೆ ಬಳಿಯ ಉತ್ತಮಚಂದ ಬಡಾವಣೆಯಲ್ಲಿ ನಡೆದ ನಿಜ ಘಟನೆ ಬಗ್ಗೆ.  ಪೊಲೀಸ್ ಇಲಾಖೆಯಲ್ಲಿ ಎ ಎಸ್ ಐ ಆಗಿರುವ ವೆಂಕಟೇಶ ರೆಡ್ಡಿ-ಲಕ್ಷ್ಮಿ ರೆಡ್ಡಿ ದಂಪತಿಯ ಕುಟುಂಬ ಆ ಬಡಾವಣೆಯ ನಿವಾಸಿಗಳು. ಅವರ ಮಕ್ಕಳಾದ 12 ವರ್ಷದ ಸುಶಾಂತ್ ರೆಡ್ಡಿ ಹಾಗೂ 19 ವರ್ಷದ ಪ್ರಣೀತಾ ರೆಡ್ಡಿ ಸಾಧನೆ ಕುರಿತು ಇಲ್ಲಿ ಕುತೂಹಲಕಾರಿ ಮಾಹಿತಿಯಿದೆ..

ಅಂಗಡಿಯ‌ ಯಜಮಾನಿ ಆತ್ಮಹತ್ಯೆಗೆ ಮುಂದಾಗಿದ್ದಳು.. ಮನೆಯಲ್ಲಿ ಆಟವಾಡಿಕೊಂಡಿದ್ದ ಸುಶಾಂತ್ ರೆಡ್ಡಿ ಮಧ್ಯಾಹ್ನದ ಸಮಯದಲ್ಲಿ ಅಂಗಡಿಗೆ ಚಾಕೊಲೇಟ್ ತರಲು ಹೋಗಿದ್ದಾನೆ. ಆದರೆ ಅಂಗಡಿಯಲ್ಲಿ ಸುಶಾಂತ್ ರೆಡ್ಡಿಗೆ ಯಾರೂ ಇಲ್ಲದಿರುವುದು ಕಂಡಿದೆ. ಹೀಗಾಗಿ ಸುಶಾಂತ್ ರೆಡ್ಡಿ ನೇರವಾಗಿ ಅಂಗಡಿ ಒಳಗೆ ಹೋಗಿ ನೋಡಿದ್ದಾನೆ. ಅಲ್ಲಿ ಅಂಗಡಿ‌ ಯಜಮಾನಿ ಕಿಟಕಿಗೆ ಟಾವಲ್​ ಬಿಗಿದು ಆತ್ಮಹತ್ಯೆಗೆ ಮುಂದಾಗಿದ್ದಳು. ಅವಳ ಬಾಯಿಂದ ರಕ್ತ ಕೂಡಾ ಬರುತ್ತಿತ್ತು. ಇದನ್ನ ನೋಡಿದ ಸುಶಾಂತ್ ರೆಡ್ಡಿ ತನ್ನ ಅಕ್ಕ ಪ್ರಣೀತಾ ರೆಡ್ಡಿಯನ್ನ ಕರೆದಿದ್ದಾನೆ.

ಕೂಡಲೇ ಇಬ್ಬರೂ ಸೇರಿ ಮನೆಯವರಿಗೆ ವಿಚಾರ ಮುಟ್ಟಿಸಿದ್ದಾರೆ. ಜೊತೆಗೆ ಸ್ಥಳೀಯರ ಮೊಬೈಲ್ ಪಡೆದು ಅಂಬ್ಯುಲೆನ್ಸ್​ಗೆ ಸುಶಾಂತ್ ರೆಡ್ಡಿ ಪೋನ್ ಮಾಡಿದ್ದಾನೆ. ಅಷ್ಟರಲ್ಲಾಗಲೇ ಆ ಮಹಿಳೆಯ ಸಂಬಂಧಿಕರು ಸ್ಥಳಕ್ಕೆ ಬಂದಿದ್ದಾರೆ.‌ ತೀವ್ರ ಅಸ್ವಸ್ಥಗೊಂಡ ಮಹಿಳೆಯನ್ನ ಆಸ್ಪತ್ರೆಗೆ ಸಾಗಿಸಲು ಅಕ್ಕ ತಮ್ಮ ಮಹತ್ವದ ಪಾತ್ರ ವಹಿಸಿದ್ದಾರೆ. ಬಾಲಕನ ಹಾಗೂ ಆತನ ಅಕ್ಕನ ಸಮಯ ಪ್ರಜ್ಞೆ ಯಿಂದ ಓರ್ವ ಮಹಿಳೆಯ‌ ಪ್ರಾಣ ಉಳಿದಿದೆ. ಆದರೆ ಮಹಿಳೆಯ ಆತ್ಮಹತ್ಯೆ ಯತ್ನಕ್ಕೆ ಸರಿಯಾದ ಕಾರಣ ತಿಳಿದುಬಂದಿಲ್ಲ.

ಬಾಲಕನ ಈ ಕಾರ್ಯಕ್ಕೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಮಹಿಳೆ ದಾವಣಗೆರೆ ಬಾಪೂಜಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸಾವು ಬದುಕಿನೊಂದಿಗೆ ಹೋರಾಟ ಮಾಡುತ್ತಿರುವ ಮಹಿಳೆ ಬದುಕಿ ಬಂದ್ರೆ ಬಾಲಕನ ಶ್ರಮ ಸಾರ್ಥಕವಾದಂತೆಯೇ ಸರಿ.

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್