AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಿಹಾರ ಕೇಳಿದ್ರೂ ಮೌನ ಮುರಿಯದ ಪ್ರಧಾನಿ ಮೋದಿ?

ಬೆಂಗಳೂರು: ಭೀಕರ ಪ್ರವಾಹ ಕರುನಾಡನ್ನೇ ಮುಳುಗಿಸಿಬಿಡ್ತು. ಮನೆ, ಮಠ, ಬೆಳೆ, ರಸ್ತೆ, ಸೇತುವೆ ಎಲ್ಲವನ್ನೂ ಹಾಳುಗೆಡವಿಬಿಡ್ತು. ಆದ್ರೆ, ಅದೆಲ್ಲವನ್ನೂ ಮರುನಿರ್ಮಾಣ ಮಾಡೋಕೆ ಸರ್ಕಾರ ಮಾಡ್ತಿರೋ ಹರಸಾಹಸ ಅಷ್ಟಿಷ್ಟಲ್ಲ. ಕೇಂದ್ರದ ನೆರವಿಗಾಗಿ ಸಿಎಂ ಬಿಎಸ್​ವೈ ಹಲವು ಬಾರಿ ಮನವಿ ಮಾಡಿದ್ರು. ಆದ್ರೆ, ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಕೇಂದ್ರ ಸರ್ಕಾರ ಮೊದಲ ಹಂತವಾಗಿ 1200ಕೋಟಿ ಪರಿಹಾರ ಕೊಟ್ಟು ಸುಮ್ಮನಾಗಿತ್ತು. ಹೀಗಾಗಿ, ಕೇಂದ್ರದಿಂದ ಇನ್ನೂ ಹೆಚ್ಚಿನ ಪರಿಹಾರ ಪಡೆದೇ ಸಿದ್ಧ ಅನ್ನೋ ಹಠಕ್ಕೆ ಸಿಎಂ ಬಿಎಸ್​ವೈ ಬಿದ್ದಿದ್ದಾರೆ. ನಿನ್ನೆ ತುಮಕೂರಲ್ಲಿ […]

ಪರಿಹಾರ ಕೇಳಿದ್ರೂ  ಮೌನ ಮುರಿಯದ ಪ್ರಧಾನಿ ಮೋದಿ?
ಸಾಧು ಶ್ರೀನಾಥ್​
|

Updated on: Jan 03, 2020 | 7:17 AM

Share

ಬೆಂಗಳೂರು: ಭೀಕರ ಪ್ರವಾಹ ಕರುನಾಡನ್ನೇ ಮುಳುಗಿಸಿಬಿಡ್ತು. ಮನೆ, ಮಠ, ಬೆಳೆ, ರಸ್ತೆ, ಸೇತುವೆ ಎಲ್ಲವನ್ನೂ ಹಾಳುಗೆಡವಿಬಿಡ್ತು. ಆದ್ರೆ, ಅದೆಲ್ಲವನ್ನೂ ಮರುನಿರ್ಮಾಣ ಮಾಡೋಕೆ ಸರ್ಕಾರ ಮಾಡ್ತಿರೋ ಹರಸಾಹಸ ಅಷ್ಟಿಷ್ಟಲ್ಲ. ಕೇಂದ್ರದ ನೆರವಿಗಾಗಿ ಸಿಎಂ ಬಿಎಸ್​ವೈ ಹಲವು ಬಾರಿ ಮನವಿ ಮಾಡಿದ್ರು. ಆದ್ರೆ, ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಕೇಂದ್ರ ಸರ್ಕಾರ ಮೊದಲ ಹಂತವಾಗಿ 1200ಕೋಟಿ ಪರಿಹಾರ ಕೊಟ್ಟು ಸುಮ್ಮನಾಗಿತ್ತು. ಹೀಗಾಗಿ, ಕೇಂದ್ರದಿಂದ ಇನ್ನೂ ಹೆಚ್ಚಿನ ಪರಿಹಾರ ಪಡೆದೇ ಸಿದ್ಧ ಅನ್ನೋ ಹಠಕ್ಕೆ ಸಿಎಂ ಬಿಎಸ್​ವೈ ಬಿದ್ದಿದ್ದಾರೆ. ನಿನ್ನೆ ತುಮಕೂರಲ್ಲಿ ತುಂಬಿದ ಕಾರ್ಯಕ್ರಮದಲ್ಲೇ ಪರಿಹಾರ ಕೊಡ್ಬೇಕು ಅಂತಾ ಮನವಿ ಮಾಡ್ಕೊಂಡ್ರು.

ಬಿಎಸ್​ವೈ ಪರಿಹಾರ ಕೇಳಿದ್ರೂ ಮೋದಿ ಮೌನ: ನಿನ್ನೆ ತುಮಕೂರಿನಲ್ಲಿ ಕಾರ್ಯಕ್ರಮದ ವೇಳೆಯೇ ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿಗೆ ಮನವಿ ಮಾಡಿದ್ರು. ರಾಜ್ಯದಲ್ಲಿ ಭೀಕರ ಪ್ರವಾಹ ಬಂದು ಬಹಳಷ್ಟು ಹಾನಿ ಮಾಡಿದೆ. ಸೂರು, ರಸ್ತೆ, ಸೇತುವೆಗಳೆಲ್ಲಾ ಕೊಚ್ಚಿಕೊಂಡು ಹೋಗಿವೆ. ಹೀಗಾಗಿ, ರಾಜ್ಯಕ್ಕೆ 50ಸಾವಿರ ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಕೊಡಬೇಕು ಅಂತಾ ಬಹಿರಂಗವಾಗೇ ಮನವಿ ಮಾಡಿದ್ರು. ಆದ್ರೆ, ಪ್ರಧಾನಿ ಮೋದಿ ಮಾತ್ರ ಬಿಎಸ್​ವೈ ಮನವಿಗೆ ಸ್ಪಂದಿಸಲೇ ಇಲ್ಲ. ನೆರೆ ಪರಿಹಾರದ ಬಗ್ಗೆ ಮಾತೇ ಆಡಲಿಲ್ಲ. ಹೀಗಾಗಿ, ಮತ್ತೊಮ್ಮೆ ರಾಜಭವನದಲ್ಲಿ ಪರಿಹಾರದ ಬಗ್ಗೆ ಮನವಿ ಮಾಡ್ತೇನೆ ಅಂತಾ ಸಿಎಂ ಹೇಳಿದ್ರು.

ಐದೇ ನಿಮಿಷದಲ್ಲಿ ಮುಗಿದ ಮೋದಿ, ಬಿಎಸ್​ವೈ ಭೇಟಿ: ತುಮಕೂರಿನಲ್ಲಿ ಸಿಎಂ ನೆರೆ ಪರಿಹಾರ ಕೇಳಿದ್ದಕ್ಕೆ ಪ್ರಧಾನಿ ಮೋದಿ ಮಾತೇ ಆಡಲಿಲ್ಲ. ಹೀಗಾಗಿ, ಬೆಂಗಳೂರಿನ ರಾಜಭವನದಲ್ಲಿ ಬಿಎಸ್​ವೈ ಮತ್ತೊಮ್ಮೆ ಮೋದಿ ಭೇಟಿಯಾದ್ರು. ಈ ವೇಳೆ, ಮೋದಿಗೆ ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನ ಮಾಡಿದ್ರು. ಬಳಿಕ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ನೆರೆ ಪರಿಹಾರ ಕೋರಿ ಮನವಿಪತ್ರ ಸಲ್ಲಿಸಿ ಸಿಎಂ ಯಡಿಯೂರಪ್ಪ ಐದೇ ನಿಮಿಷದಲ್ಲಿ ವಾಪಸಾದ್ರು.

ಒಟ್ನಲ್ಲಿ, ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲೇಬೇಕು ಅನ್ನೋ ಛಲಕ್ಕೆ ಸಿಎಂ ಬಿಎಸ್​ವೈ ಬಿದ್ದಿದ್ದಾರೆ. ನಿನ್ನೆ ತುಮಕೂರಿನಲ್ಲಿ ನೆರೆ ಪರಿಹಾರಕ್ಕೆ ಮನವಿ ಮಾಡಿದ್ದ ಸಿಎಂ, ರಾಜಭವನದಲ್ಲಿ ಮತ್ತೆ ಮನವಿ ಮಾಡಿದ್ರು. ಆದ್ರೆ, ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಯಾವ ರೀತಿ ಸ್ಪಂದಿಸಿದ್ರು ಅನ್ನೋದೇ ಕುತೂಹಲ.

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!