AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಎಲೆಕ್ಷನ್​ ಬೆನ್ನಲ್ಲೇ.. ರಾಜ್ಯದಲ್ಲಿ ಶುರುವಾಗುತ್ತಾ ರೆಸಾರ್ಟ್ ರಾಜಕೀಯ ಪರ್ವ?

ಬೆಂಗಳೂರು ಗ್ರಾಮಾಂತರ: ಶಿರಾ ಮತ್ತು ರಾಜರಾಜೇಶ್ವರಿನಗರದ ಉಪಚುನಾವಣೆ ಘೋಷಣೆ ಆಗುತ್ತಿದ್ದ ಬೆನ್ನಲ್ಲೇ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಪರ್ವ ಮತ್ತೆ ಶುರುವಾಗಲಿದೆ ಎಂದು ಹಲವರು ಮಾತನಾಡುತ್ತಿದ್ದಾರೆ. ಈ ನಡುವೆ, ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಬಳಿಯ ರೆಸಾರ್ಟ್ ಒಂದಕ್ಕೆ ಸಿಎಂ BS ಯಡಿಯೂರಪ್ಪ ಭೇಟಿಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಬೆಂಗಾವಲು ವಾಹನ ಇಲ್ಲದೆ ಖಾಸಗಿ ಕಾರಿನಲ್ಲಿ ರೆಸಾರ್ಟ್‌ಗೆ ಆಗಮಿಸಿದರು ಎಂದು ತಿಳಿದುಬಂದಿದೆ. ಕೋಡಗುರ್ಕಿಯ ಬಳಿಯಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ಗೆ ಸಿಎಂ ಭೇಟಿ ನೀಡಿದ್ದು ಈಗಾಗಲೇ ರೆಸಾರ್ಟ್​ನಲ್ಲಿ 7 ವಿಲ್ಲಾಗಳು […]

ಬೈಎಲೆಕ್ಷನ್​ ಬೆನ್ನಲ್ಲೇ.. ರಾಜ್ಯದಲ್ಲಿ ಶುರುವಾಗುತ್ತಾ ರೆಸಾರ್ಟ್ ರಾಜಕೀಯ ಪರ್ವ?
KUSHAL V
|

Updated on: Oct 04, 2020 | 4:22 PM

Share

ಬೆಂಗಳೂರು ಗ್ರಾಮಾಂತರ: ಶಿರಾ ಮತ್ತು ರಾಜರಾಜೇಶ್ವರಿನಗರದ ಉಪಚುನಾವಣೆ ಘೋಷಣೆ ಆಗುತ್ತಿದ್ದ ಬೆನ್ನಲ್ಲೇ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಪರ್ವ ಮತ್ತೆ ಶುರುವಾಗಲಿದೆ ಎಂದು ಹಲವರು ಮಾತನಾಡುತ್ತಿದ್ದಾರೆ. ಈ ನಡುವೆ, ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಬಳಿಯ ರೆಸಾರ್ಟ್ ಒಂದಕ್ಕೆ ಸಿಎಂ BS ಯಡಿಯೂರಪ್ಪ ಭೇಟಿಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಬೆಂಗಾವಲು ವಾಹನ ಇಲ್ಲದೆ ಖಾಸಗಿ ಕಾರಿನಲ್ಲಿ ರೆಸಾರ್ಟ್‌ಗೆ ಆಗಮಿಸಿದರು ಎಂದು ತಿಳಿದುಬಂದಿದೆ.

ಕೋಡಗುರ್ಕಿಯ ಬಳಿಯಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ಗೆ ಸಿಎಂ ಭೇಟಿ ನೀಡಿದ್ದು ಈಗಾಗಲೇ ರೆಸಾರ್ಟ್​ನಲ್ಲಿ 7 ವಿಲ್ಲಾಗಳು ಬುಕ್ಕಿಂಗ್ ಆಗಿದೆ ಎಂದು ಹೇಳಲಾಗಿದೆ. ಹಾಗಾಗಿ, ಸಿಎಂ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಶುರುವಾಗುತ್ತಾ ಅಥವಾ ಉಪ‌ ಚುನಾವಣೆ ಹಿನ್ನೆಲೆಯಲ್ಲಿ ವಿಶ್ರಾಂತಿಗೆಂದು ಸಿಎಂ ರೆಸಾರ್ಟ್​ಗೆ ಆಗಮಸಿದ್ರಾ ಅನ್ನೋ ಶಂಕೆ ವ್ಯಕ್ತವಾಗಿದೆ.