AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Contactless Transaction: ಇನ್ಮುಂದೆ ATMನಲ್ಲಿ ಹಣ ಪಡೆಯಲು ನೀವು ಕಾರ್ಡ್​ ಬಳಸಬೇಕಿಲ್ಲ!

Mastercard: ಈ ವ್ಯವಸ್ಥೆ ಶೀಘ್ರದಲ್ಲೇ ದೇಶದ ಎಲ್ಲಾ ATM ಕೇಂದ್ರಗಳಲ್ಲೂ ಜಾರಿಯಾಗಲಿದ್ದು, ನೀವು ನಿಮ್ಮ ATM ಕಾರ್ಡ್​ ಬಳಸದೇ, ಮಶೀನ್​ನಲ್ಲಿ ಪಿನ್​ ನಮೂದಿಸದೇ hಣ ಪಡೆಯುವುದು ಸಾಧ್ಯವಾಗಲಿದೆ.

Contactless Transaction: ಇನ್ಮುಂದೆ ATMನಲ್ಲಿ ಹಣ ಪಡೆಯಲು ನೀವು ಕಾರ್ಡ್​ ಬಳಸಬೇಕಿಲ್ಲ!
ಎಟಿಎಂ ಕೇಂದ್ರ (ಸಾಂದರ್ಭಿಕ ಚಿತ್ರ)
Skanda
|

Updated on:Feb 12, 2021 | 1:17 PM

Share

ತಂತ್ರಜ್ಞಾನ ದಿನೇದಿನೇ ಮುಂದುವರೆಯುತ್ತಿದ್ದಂತೆ ಎಲ್ಲಾ ಕ್ಷೇತ್ರಗಳೂ ಬದಲಾವಣೆಗೆ ಒಗ್ಗಿಕೊಳ್ಳುತ್ತಿವೆ. ಈಗಾಗಲೇ ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಕ್ಯಾಶ್​ಲೆಸ್ ವ್ಯವಹಾರಕ್ಕೆ ದೇಶದಲ್ಲಿ ಸಾಕಷ್ಟು ಮಹತ್ವ ಒದಗಿದ್ದು ತಂತ್ರಜ್ಞಾನ ಬಳಕೆ ಜನಸಾಮಾನ್ಯರಿಗೆ ಸುಲಭವಾಗಿ ತಲುಪಿದೆ. ಈ ಬೆಳವಣಿಗೆಗಳು ಕೊರೊನಾ ಸಂದರ್ಭದಲ್ಲಂತೂ ಜನರ ಪಾಲಿಗೆ ವರದಾನವಾಗಿದ್ದವು. ಅದರ ಮುಂದುವರಿದ ಭಾಗವೆಂಬಂತೆ ATM ಕೇಂದ್ರಗಳಲ್ಲೂ ಈಗ ನೂತನ ತಂತ್ರಜ್ಞಾನ ಆಧಾರಿತ ಪದ್ಧತಿ ಜಾರಿಗೆ ತರಲು ಯೋಜಿಸಲಾಗಿದ್ದು. ಕಾಂಟ್ಯಾಕ್ಟ್ ಲೆಸ್ ವ್ಯವಹಾರಕ್ಕೆ ಇದು ದಾರಿ ಮಾಡಿಕೊಡಲಿದೆ ಎಂದು ಸಂಬಂಧಿಸಿದವರು ಹೇಳಿದ್ದಾರೆ. ATMಗಳಲ್ಲಿ ಕಾರ್ಡ್​ ಬಳಸದೇ ಕೇವಲ QR ಕೋಡ್ ಮೂಲಕವೇ ಹಣ ಪಡೆಯುವ ವ್ಯವಸ್ಥೆ ಸದ್ಯದಲ್ಲೇ ಎಲ್ಲೆಡೆ ಲಭ್ಯವಾಗಲಿದೆ.

ಇದಕ್ಕಾಗಿ AGS Transact Technologies ಜೊತೆಗೆ Mastercard ಕೈ ಜೋಡಿಸಿದ್ದು, ಈ ನೂತನ ತಂತ್ರಜ್ಞಾನದಡಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಳಸಿಕೊಂಡು ATM ಯಂತ್ರದಿಂದ ಹಣಪಡೆಯಬಹುದಾಗಿದೆ. ಸದ್ಯ Mastercard ಬಳಕೆದಾರರಿಗೆ ಹೊಸ ಸೌಲಭ್ಯ ಸಿಗಲಿದ್ದು, ಗ್ರಾಹಕರು ಹಣ ಪಡೆಯುವ ಮುನ್ನ ATM ಯಂತ್ರದ ಮೇಲೆ ಕಾಣುವ QR ಕೋಡ್ ಸ್ಕ್ಯಾನ್ ಮಾಡಬೇಕಿದೆ. ನಂತರ ತಮ್ಮ ಮೊಬೈಲ್​ನಲ್ಲಿ ಪಿನ್​ ನಮೂದಿಸಿ, ಪಡೆಯಬೇಕಾದ ಹಣದ ಮೊತ್ತವನ್ನೂ ಹಾಕಿ ನಗದು ಸ್ವೀಕರಿಸಬಹುದಾಗಿದೆ.

ಈ ವ್ಯವಸ್ಥೆ ಶೀಘ್ರದಲ್ಲೇ ದೇಶದ ಎಲ್ಲಾ ATM ಕೇಂದ್ರಗಳಲ್ಲೂ ಜಾರಿಯಾಗಲಿದ್ದು, ನೀವು ನಿಮ್ಮ ATM ಕಾರ್ಡ್​ ಬಳಸದೇ, ಮಶೀನ್​ನಲ್ಲಿ ಪಿನ್​ ನಮೂದಿಸದೇ ಹಣ ಪಡೆಯುವುದು ಸಾಧ್ಯವಾಗಲಿದೆ.

Published On - 1:01 pm, Fri, 12 February 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ