AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಣೆಬೆನ್ನೂರು: ಬಸ್‌ ನಿಲ್ದಾಣದಲ್ಲೇ ಕೊರೊನಾ ಶಂಕಿತನ ಶವ ಇಟ್ಟುಹೋದ್ರು!

ಹಾವೇರಿ: ವೈದ್ಯ ನಾರಾಯಣೋ ಹರಿ ಅಂತಾರೆ. ಆದ್ರೆ ಕೊರೊನಾ ಇಂಥ ವೈದ್ಯರಿಂದಲೂ ಮಾನವಿಯತೆಯನ್ನ ಕಿತ್ತುಕೊಂಡಿದೆ ಅಂತಾ ಕಾಣುತ್ತೆ. ಯಾಕಂದ್ರೆ ಹಾವೇರಿಯಲ್ಲಿನ ವೈದ್ಯಕೀಯ ಸಿಬ್ಬಂದಿ ಪಿಪಿಇ ಕಿಟ್‌ ಥರ ಮನುಷ್ಯತ್ವವನ್ನು ಕಿತ್ತೆಸೆದಂಗಿದೆ. ಹೌದು ಮಾನವೀಯತೆಯನ್ನು ಮರೆತ ಹಾವೇರಿ ಜಿಲ್ಲೆ ವೈದ್ಯಕೀಯ ಸಿಬ್ಬಂದಿ ಬಸ್​ ನಿಲ್ದಾಣದಲ್ಲಿಯೇ ಅನಾರೋಗ್ಯ ಪೀಡಿತನ ಶವ ಇಟ್ಟು ಜನರಲ್ಲಿ ಆತಂಕಕ್ಕೆ ಕಾರಣರಾಗಿದ್ದಾರೆ. ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಈ ಎಡವಟ್ಟು ಸ್ಥಳಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜನನಿಬಿಡ ಪ್ರದೇಶದಲ್ಲಿನ ನಿಲ್ದಾಣದಲ್ಲಿ ಶವ ಇಟ್ಟ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ […]

ರಾಣೆಬೆನ್ನೂರು: ಬಸ್‌ ನಿಲ್ದಾಣದಲ್ಲೇ ಕೊರೊನಾ ಶಂಕಿತನ ಶವ ಇಟ್ಟುಹೋದ್ರು!
Guru
| Updated By: ಸಾಧು ಶ್ರೀನಾಥ್​|

Updated on:Jul 04, 2020 | 5:44 PM

Share

ಹಾವೇರಿ: ವೈದ್ಯ ನಾರಾಯಣೋ ಹರಿ ಅಂತಾರೆ. ಆದ್ರೆ ಕೊರೊನಾ ಇಂಥ ವೈದ್ಯರಿಂದಲೂ ಮಾನವಿಯತೆಯನ್ನ ಕಿತ್ತುಕೊಂಡಿದೆ ಅಂತಾ ಕಾಣುತ್ತೆ. ಯಾಕಂದ್ರೆ ಹಾವೇರಿಯಲ್ಲಿನ ವೈದ್ಯಕೀಯ ಸಿಬ್ಬಂದಿ ಪಿಪಿಇ ಕಿಟ್‌ ಥರ ಮನುಷ್ಯತ್ವವನ್ನು ಕಿತ್ತೆಸೆದಂಗಿದೆ.

ಹೌದು ಮಾನವೀಯತೆಯನ್ನು ಮರೆತ ಹಾವೇರಿ ಜಿಲ್ಲೆ ವೈದ್ಯಕೀಯ ಸಿಬ್ಬಂದಿ ಬಸ್​ ನಿಲ್ದಾಣದಲ್ಲಿಯೇ ಅನಾರೋಗ್ಯ ಪೀಡಿತನ ಶವ ಇಟ್ಟು ಜನರಲ್ಲಿ ಆತಂಕಕ್ಕೆ ಕಾರಣರಾಗಿದ್ದಾರೆ. ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಈ ಎಡವಟ್ಟು ಸ್ಥಳಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಜನನಿಬಿಡ ಪ್ರದೇಶದಲ್ಲಿನ ನಿಲ್ದಾಣದಲ್ಲಿ ಶವ ಇಟ್ಟ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ಕಾರ್ಯಕ್ಕೆ, ಭಯಗೊಂಡ ಸ್ಥಳೀಯ ಜನರು ಹಿಡಿಶಾಪ ಹಾಕಿದ್ದಾರೆ. ಮೃತದೇಹವನ್ನ ಸುಮಾರು 2-3 ಗಂಟೆ ವರೆಗೆ ಅಲ್ಲಿಯೇ ಬಿಟ್ಟಿದ್ದ ಸಿಬ್ಬಂದಿ ನಂತರ ಜನರ ಆಕ್ರೋಶ ಕಂಡು ಆ್ಯಂಬುಲೆನ್ಸ್‌ನಲ್ಲಿ ಕೊಂಡೊಯ್ದಿದ್ದಾರೆ.

Published On - 4:48 pm, Sat, 4 July 20