AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಆರ್ಭಟದ ಮಧ್ಯೆ ಕಾಫಿನಾಡಲ್ಲಿ ದರೋಡೆ ಯತ್ನ, ಫೈರಿಂಗ್​

ಚಿಕ್ಕಮಗಳೂರು: ಕಾಫಿನಾಡಲ್ಲಿ ಕೊರೊನಾ ಹೆಮ್ಮಾರಿ ನಿಧಾನವಾಗಿ ಹರಡುತ್ತಿದೆ. ಈ ಮಧ್ಯೆ ನಗರದಲ್ಲಿ ಖದೀಮರ ಹಾವಳಿಯು ಹೆಚ್ಚಾಗ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ನಗರದ ಎಂ.ಜಿ.ರಸ್ತೆಯಲ್ಲಿರುವ ಚಿನ್ನದಂಗಡಿ ಒಂದರಲ್ಲಿ ಮಾಲೀಕನ ಮೇಲೆ ಫೈರಿಂಗ್ ಮಾಡಿ ಕಳ್ಳರು ದರೋಡೆ ಮಾಡಲು ಯತ್ನಿಸಿದ್ದಾರೆ. ಪಲ್ಸರ್ ಬೈಕ್​ನಲ್ಲಿ ಬಂದಿದ್ದ ಮೂವರು ದರೋಡೆಕೋರರು ಸಿನಿಮೀಯ ರೀತಿಯಲ್ಲಿ ಕೇಸರಿ ಜ್ಯುವೆಲ್ಲರಿ ಅಂಗಡಿಯ ಒಳನುಗ್ಗಿದ್ದಾರೆ. ಶಾಪ್ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ. ಈ ವೇಳೆ ಶಾಪ್ ಮಾಲೀಕ ಕೂಗಿಕೊಂಡಾಗ ಆತನನ್ನು ಬೆದರಿಸಲು ಫೈರಿಂಗ್ ಖದೀಮರು ಮಾಡಿದ್ದಾರೆ.  ನಂತರ […]

ಕೊರೊನಾ ಆರ್ಭಟದ ಮಧ್ಯೆ ಕಾಫಿನಾಡಲ್ಲಿ ದರೋಡೆ ಯತ್ನ, ಫೈರಿಂಗ್​
Follow us
KUSHAL V
| Updated By:

Updated on:Jul 11, 2020 | 2:47 PM

ಚಿಕ್ಕಮಗಳೂರು: ಕಾಫಿನಾಡಲ್ಲಿ ಕೊರೊನಾ ಹೆಮ್ಮಾರಿ ನಿಧಾನವಾಗಿ ಹರಡುತ್ತಿದೆ. ಈ ಮಧ್ಯೆ ನಗರದಲ್ಲಿ ಖದೀಮರ ಹಾವಳಿಯು ಹೆಚ್ಚಾಗ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ನಗರದ ಎಂ.ಜಿ.ರಸ್ತೆಯಲ್ಲಿರುವ ಚಿನ್ನದಂಗಡಿ ಒಂದರಲ್ಲಿ ಮಾಲೀಕನ ಮೇಲೆ ಫೈರಿಂಗ್ ಮಾಡಿ ಕಳ್ಳರು ದರೋಡೆ ಮಾಡಲು ಯತ್ನಿಸಿದ್ದಾರೆ.

ಪಲ್ಸರ್ ಬೈಕ್​ನಲ್ಲಿ ಬಂದಿದ್ದ ಮೂವರು ದರೋಡೆಕೋರರು ಸಿನಿಮೀಯ ರೀತಿಯಲ್ಲಿ ಕೇಸರಿ ಜ್ಯುವೆಲ್ಲರಿ ಅಂಗಡಿಯ ಒಳನುಗ್ಗಿದ್ದಾರೆ. ಶಾಪ್ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ. ಈ ವೇಳೆ ಶಾಪ್ ಮಾಲೀಕ ಕೂಗಿಕೊಂಡಾಗ ಆತನನ್ನು ಬೆದರಿಸಲು ಫೈರಿಂಗ್ ಖದೀಮರು ಮಾಡಿದ್ದಾರೆ.  ನಂತರ ಸದ್ದು ಕೇಳಿ ಅಲ್ಲಿ ಜಮಾವಣೆಗೊಂಡ ಸ್ಥಳೀಯರನ್ನ ಕಂಡು ಕೂಡಲೇ ಎಸ್ಕೇಪ್ ಆಗಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿಕೊಟ್ಟ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Published On - 1:19 pm, Sat, 11 July 20