AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನದ ಕಟ್ಟೆ ಮೇಲೆ ಕೂತಿದ್ದಕ್ಕೆ ದಲಿತ ಯುವಕನ ಹತ್ಯೆ?

ವಿಜಯಪುರ:ದೇವಸ್ಥಾನದ ಕಟ್ಟೆಯ ಮೇಲೆ ಮೇಲ್ಜಾತಿಯವರ ಸಮನಾಗಿ ಕುಳಿತಿದ್ದಕ್ಕೆ, ದಲಿತ ಸಮಾಜದ ಯುವಕನ ಹತ್ಯೆ ನಡೆದಿರುವ ಶಂಕೆ ವಿಜಯಪುರ ಜಿಲ್ಲೆಯಾದ್ಯಂತ ಈಗ ಭಾರಿ ತಲ್ಲಣ ಮೂಡಿಸಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬೂದಿಹಾಳ ಪಿ,ಹೆಚ್ ಗ್ರಾಮದಲ್ಲಿ ಆಗಸ್ಟ್ 26ರಂದು ಈ ಕೊಲೆ ನಡೆದಿದ್ದು, ಅನಿಲ್ ಇಂಗಳಗಿ (26) ಕೊಲೆಯಾದ ದುರ್ದೈವಿಯಾಗಿದ್ದಾನೆ. ಅದೇ ಗ್ರಾಮದ ಸಿದ್ದು ಬಿರಾದಾರ್ ಹಾಗೂ ಆತನ ಸಂಬಂಧಿ ಸಂತೋಷ್ ಇಬ್ಬರು ಸೇರಿ, ಅನಿಲ್​ನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಗ್ರಾಮದ ಮಲ್ಲಿಕಾರ್ಜುನ […]

ದೇವಸ್ಥಾನದ ಕಟ್ಟೆ ಮೇಲೆ ಕೂತಿದ್ದಕ್ಕೆ ದಲಿತ ಯುವಕನ ಹತ್ಯೆ?
ಸಾಧು ಶ್ರೀನಾಥ್​
|

Updated on: Aug 28, 2020 | 3:26 PM

Share

ವಿಜಯಪುರ:ದೇವಸ್ಥಾನದ ಕಟ್ಟೆಯ ಮೇಲೆ ಮೇಲ್ಜಾತಿಯವರ ಸಮನಾಗಿ ಕುಳಿತಿದ್ದಕ್ಕೆ, ದಲಿತ ಸಮಾಜದ ಯುವಕನ ಹತ್ಯೆ ನಡೆದಿರುವ ಶಂಕೆ ವಿಜಯಪುರ ಜಿಲ್ಲೆಯಾದ್ಯಂತ ಈಗ ಭಾರಿ ತಲ್ಲಣ ಮೂಡಿಸಿದೆ.

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬೂದಿಹಾಳ ಪಿ,ಹೆಚ್ ಗ್ರಾಮದಲ್ಲಿ ಆಗಸ್ಟ್ 26ರಂದು ಈ ಕೊಲೆ ನಡೆದಿದ್ದು, ಅನಿಲ್ ಇಂಗಳಗಿ (26) ಕೊಲೆಯಾದ ದುರ್ದೈವಿಯಾಗಿದ್ದಾನೆ. ಅದೇ ಗ್ರಾಮದ ಸಿದ್ದು ಬಿರಾದಾರ್ ಹಾಗೂ ಆತನ ಸಂಬಂಧಿ ಸಂತೋಷ್ ಇಬ್ಬರು ಸೇರಿ, ಅನಿಲ್​ನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಕೆಲವು ದಿನಗಳ ಹಿಂದೆ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ, ಮೇಲ್ಜಾತಿಯವರ ಸಮಾನಾಗಿ ದೇವಸ್ಥಾನದ ಕಟ್ಟೆಯ ಮೇಲೆ ಅನಿಲ್ ಕುಳಿತಿದ್ದ. ಇದನ್ನು ಪ್ರಶ್ನಿಸಿದ ಸಿದ್ದು ಬಿರಾದಾರ್, ಅನಿಲ್ ಜೊತೆ ಜಗಳ ಮಾಡಿದ್ದ. ಈ ದ್ವೇಷದ ಹಿನ್ನೆಲೆಯಿಂದ ಸಿದ್ದು ಬಿರಾದಾರ್ ಹಾಗೂ ಸಂತೋಷ್ ಇಬ್ಬರು ಸೇರಿ ಅನಿಲ್​ನನ್ನು ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಅನಿಲ್ ಮೃತದೇಹವನ್ನು ಸಿಂದಗಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇಟ್ಟು ಸಂಬಂಧಿಕರು ಹಾಗೂ ಕೆಲವು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಹಾಗೂ ಇಂಥ ಘಟನೆ ಮತ್ತೆಲ್ಲೂ ಜರುಗಬಾರದು, ಹೀಗಾಗಿ ಅನಿಲ್ ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕೆಂದು ಕುಟುಂಬಸ್ಥರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.