ವೈದ್ಯಕೀಯ ಶಿಕ್ಷಣ ಇಲಾಖೆ -ಕಾಲೇಜು ನಡುವಿನ ತಿಕ್ಕಾಟ: ವಿದ್ಯಾರ್ಥಿಗಳಿಗೆ ಎದುರಾಯ್ತು ಸಂಕಷ್ಟ

ದಾವಣಗೆರೆ: ಜಿಲ್ಲೆಯ JJM ಮೆಡಿಕಲ್ ಕಾಲೇಜಿನ ನಿವಾಸಿ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಸರ್ಕಾರಿ ಕೋಟಾದಡಿ ಪ್ರವೇಶ ಗಿಟ್ಟಿಸಿಕೊಂಡರು. ಶಿಷ್ಯ ವೇತನದಿಂದಲೇ ಓದು ಮುಗಿಸಿ ವೈದ್ಯರಾಗಬೇಕು ಎಂಬ ಕನಸು ಕಂಡಿದ್ದರು. ಆದರೆ ಇವರ ಕನಸ್ಸಿನ ಮೇಲೆ ವೈದ್ಯಕೀಯ ಶಿಕ್ಷಣ ಇಲಾಖೆ ತಣ್ಣೀರು ಎರಚಿದೆ. ‘16 ತಿಂಗಳಿನಿಂದ ಶಿಷ್ಯವೇತನ ನೀಡಿಲ್ಲ’ ಹೌದು, ಶಿಷ್ಯವೇತನ ಪಾವತಿಸುವಂತೆ ಕಳೆದ 16 ತಿಂಗಳಿನಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಹೋರಾಟಕ್ಕೆ ಇಲಾಖೆ ಸ್ಪಂದಿಸುತ್ತಿಲ್ಲ ಎಂಬುದು ವೈದ್ಯಕೀಯ ವಿದ್ಯಾರ್ಥಿಗಳ ಆರೋಪ. […]

ವೈದ್ಯಕೀಯ ಶಿಕ್ಷಣ ಇಲಾಖೆ -ಕಾಲೇಜು ನಡುವಿನ ತಿಕ್ಕಾಟ: ವಿದ್ಯಾರ್ಥಿಗಳಿಗೆ ಎದುರಾಯ್ತು ಸಂಕಷ್ಟ
Edited By: ಸಾಧು ಶ್ರೀನಾಥ್​

Updated on: Jul 01, 2020 | 10:57 AM

ದಾವಣಗೆರೆ: ಜಿಲ್ಲೆಯ JJM ಮೆಡಿಕಲ್ ಕಾಲೇಜಿನ ನಿವಾಸಿ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಸರ್ಕಾರಿ ಕೋಟಾದಡಿ ಪ್ರವೇಶ ಗಿಟ್ಟಿಸಿಕೊಂಡರು. ಶಿಷ್ಯ ವೇತನದಿಂದಲೇ ಓದು ಮುಗಿಸಿ ವೈದ್ಯರಾಗಬೇಕು ಎಂಬ ಕನಸು ಕಂಡಿದ್ದರು. ಆದರೆ ಇವರ ಕನಸ್ಸಿನ ಮೇಲೆ ವೈದ್ಯಕೀಯ ಶಿಕ್ಷಣ ಇಲಾಖೆ ತಣ್ಣೀರು ಎರಚಿದೆ.

‘16 ತಿಂಗಳಿನಿಂದ ಶಿಷ್ಯವೇತನ ನೀಡಿಲ್ಲ’
ಹೌದು, ಶಿಷ್ಯವೇತನ ಪಾವತಿಸುವಂತೆ ಕಳೆದ 16 ತಿಂಗಳಿನಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಹೋರಾಟಕ್ಕೆ ಇಲಾಖೆ ಸ್ಪಂದಿಸುತ್ತಿಲ್ಲ ಎಂಬುದು ವೈದ್ಯಕೀಯ ವಿದ್ಯಾರ್ಥಿಗಳ ಆರೋಪ. ಈ ಕುರಿತು ಹಿಂದೆ ಹಲವಾರು ಬಾರಿ ಹೋರಾಟ ಸಹ ಮಾಡಿದ್ದರಂತೆ. ಆದರೆ, ಏನು ಪ್ರಯೋಜನವಾಗಿಲ್ಲ.

ಇದೀಗ ಇವರನ್ನು ಜಿಲ್ಲೆಯ ಕೊವಿಡ್​ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ಸಹ ನಿಯೋಜಿಸಲಾಗಿದೆ.  ಆದರೆ, ವೈದ್ಯಕೀಯ ಶಿಕ್ಷಣ ಇಲಾಖೆ CET ಮೂಲಕ ಖಾಸಗಿ ಮೆಡಿಕಲ್ ಕಾಲೇಜ್​ಗೆ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಆಯಾ ಕಾಲೇಜುಗಳೇ ಶಿಷ್ಯ ವೇತನ ಕೊಡಬೇಕು ಅಂತಾ ಹೇಳಿ ನುಣುಚಿಕೊಳ್ಳಲು ಯತ್ನಿಸಿದೆ .

‘ಸರ್ಕಾರವೇ ಶಿಷ್ಟ ವೇತನ ಕೊಡಬೇಕು’
ಆದ್ರೆ ಇವರೆಲ್ಲಾ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಇವರಿಗೆ ಸರ್ಕಾರವೇ ಶಿಷ್ಯ ವೇತನ ಕೊಡಬೇಕು ಎಂಬುದು ಕಾಲೇಜಿನ ಆಡಳಿತ ಮಂಡಳಿಯ ವಾದ. ಒಟ್ಟಾರೆ ಇಬ್ಬರ ತಿಕ್ಕಾಟದ ನಡುವೆ ಸಿಕ್ಕಿಹಾಕಿಕೊಂಡಿರುವ ನಿವಾಸಿ ವೈದ್ಯರು ಇದೀಗ ನೇರ ಬೀದಿಗಳಿದು ಪ್ರತಿಭಟನೆ ನಡೆಸಿದರು.  ಆದರೆ, ವಿದ್ಯಾರ್ಥಿಗಳನ್ನ ಭೇಟಿಯಾದ ಜಿಲ್ಲಾಧಿಕಾರಿ ಮಹಾಂತೇಶ್​ ಬೀಳಗಿ ಪ್ರತಿಭಟನೆ ಕೈಬಿಡಿ. ನಾಲ್ಕು ದಿನ ಟೈಮ್ ಕೊಡಿ. ಇಲ್ಲದಿದ್ದರೆ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಪರೋಕ್ಷವಾಗಿ ತಾಕೀತು ಮಾಡಿದ್ದಾರೆ.

ಒಟ್ನಲ್ಲಿ, ಪ್ರಾಣದ ಹಂಗನ್ನು ತೊರೆದು ಕೊವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡದೆ ಇಲಾಖೆ ಸತಾಯಿಸುತ್ತಿದೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೆ ಹೀಗೆ ಹೋರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದು ನಿಜಕ್ಕೂ ವಿಷಾದದ ಸಂಗತಿ.

Published On - 9:32 am, Wed, 1 July 20

Loading...
Unable to load recommendations.
Follow Us