AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಪರ್​ ಕಪ್​ನಲ್ಲಿ ಟೀ-ಕಾಫಿ ಕುಡಿಯೋ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ ಪ್ಲೀಸ್; ಇದು ನಿಮ್ಮ ಒಳಿತಿಗೆ

ಓರ್ವ ವ್ಯಕ್ತಿ ಸರಾಸರಿ 3 ಟೀ/ಕಾಫಿ ಕುಡಿಯುತ್ತಾನೆ. ಒಂದೊಮ್ಮೆ ಆತ ಪೇಪರ್​ ಕಪ್​ನಲ್ಲಿ ಇದನ್ನು ಸೇವನೆ ಮಾಡಿದರೆ ದೇಹಕ್ಕೆ ತುಂಬಾನೇ ಅಪಾಯಕಾರಿಯಾಗಲಿದೆ. ಒಂದು ದಿನಕ್ಕೆ ಸುಮಾರು 75 ಸಾವಿರ ಮೈಕ್ರೋ ಪ್ಲಾಸ್ಟಿಕ್​ ಕಣಗಳು ದೇಹ ಸೇರಿಕೊಳ್ಳಲಿವೆ.

ಪೇಪರ್​ ಕಪ್​ನಲ್ಲಿ ಟೀ-ಕಾಫಿ ಕುಡಿಯೋ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ ಪ್ಲೀಸ್; ಇದು ನಿಮ್ಮ ಒಳಿತಿಗೆ
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on: Mar 14, 2021 | 6:52 AM

Share

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಸಾಕಷ್ಟು ಬದಲಾವಣೆ ಆಗಿದೆ. ಹೋಟೆಲ್​ಗಳಲ್ಲಿ ಸ್ಟೀಲ್​ ಪ್ಲೇಟ್​ಗಳ ಬದಲಿಗೆ ಪೇಪರ್​​​ ಪ್ಲೇಟ್​ಗಳು ಬಂದಿವೆ. ಟೀ-ಕಾಫಿ ಕುಡಿಯೋಕೆ ಗ್ಲಾಸ್ ಲೋಟದ ಬದಲಿಗೆ ಪೇಪರ್ ಲೋಟ ಬಂದಿದೆ. ಆದರೆ, ಈ ಪೇಪರ್ ಲೋಟ ತುಂಬಾನೇ ಅಪಾಯಕಾರಿ ಎನ್ನುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಹೀಗಾಗಿ, ಪೇಪರ್​ ಕಪ್​ನಲ್ಲಿ ಬಿಸಿ ದ್ರವ್ಯವನ್ನು ಹಾಕಿ ಕುಡಿಯುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟು ಬಿಡಿ ಎನ್ನುತ್ತಿದೆ ಅಧ್ಯಯನ. ಅಂಗಡಿಯಲ್ಲಿ ಕೊಡುವ ಪೇಪರ್​ ಕಪ್​ ಅನ್ನು ಯಾವಾಗಲಾದರೂ ಸರಿಯಾಗಿ ಗಮನಿಸಿದ್ದೀರಾ? ಈ ಕಪ್​ನ ಒಳಭಾಗದಲ್ಲಿ ತೆಳುವಾದ ಪ್ಲಾಸ್ಟಿಕ್​ ಪದರ ಇರುತ್ತದೆ. ಈ ತೆಳ್ಳನೆಯ ಪ್ಲಾಸ್ಟಿಕ್​ ಹಾಕೋದಕ್ಕೂ ಒಂದು ಕಾರಣ ಇದೆ. ಕಾಗದಕ್ಕೆ ಯಾವುದೇ ದ್ರವ್ಯ ತಾಗಿದರೂ ಅದು ಮುದ್ದೆ ಆಗಿ ಬಿಡುತ್ತದೆ. ಆದರೆ, ಅದರ ಮೇಲೆ ಒಂದು ಸಣ್ಣನೆಯ ಪ್ಲಾಸ್ಟಿಕ್​ ಲೇಯರ್ ಇದ್ದರೆ ವಾಟರ್​ಪ್ರೂಫ್​ ರೀತಿ ವರ್ತಿಸುತ್ತದೆ. ಹೀಗಾಗಿ, ತೆಳ್ಳನೆಯ ಪೇಪರ್​ ಲೇಯರ್​ ಹಾಕಲಾಗುತ್ತದೆ.

ಈ ಪೇಪರ್​ ಕಪ್​ನಲ್ಲಿ ಬಿಸಿ ದ್ರವ್ಯ ಹಾಕಿದಾಗ ಪ್ಲಾಸ್ಟಿಕ್​ ಕರಗುತ್ತದೆ. ವೈದ್ಯರು 100 ಎಂಎಲ್​ ಕಪ್​ನಲ್ಲಿ ಬಿಸಿ ನೀರನ್ನು ಹಾಕಿ 15 ನಿಮಿಷ ಇಟ್ಟಿದ್ದರು. ನಂತರ ಮೈಕ್ರೋಸ್ಕೋಪ್​ ಮೂಲಕ ನೀರನ್ನು ಪರೀಕ್ಷಿಸಲಾಯಿತು. ಈ ವೇಳೆ 25,000ಕ್ಕೂ ಅಧಿಕ ಮೈಕ್ರೋ ಪ್ಲಾಸ್ಟಿಕ್​ ಕಂಡಿದೆ. ಇದರ ಜತೆಗೆ ಜಿಂಕ್​, ಲೆಡ್​ ಅಂಶಗಳು ಕೂಡ ನೀರಿನಲ್ಲಿ ಕಂಡಿದೆ.

ಓರ್ವ ವ್ಯಕ್ತಿ ಸರಾಸರಿ 3 ಟೀ/ಕಾಫಿ ಕುಡಿಯುತ್ತಾನೆ. ಒಂದೊಮ್ಮೆ ಆತ ಪೇಪರ್​ ಕಪ್​ನಲ್ಲಿ ಇದನ್ನು ಸೇವನೆ ಮಾಡಿದರೆ ದೇಹಕ್ಕೆ ತುಂಬಾನೇ ಅಪಾಯಕಾರಿಯಾಗಲಿದೆ. ಒಂದು ದಿನಕ್ಕೆ ಸುಮಾರು 75 ಸಾವಿರ ಮೈಕ್ರೋ ಪ್ಲಾಸ್ಟಿಕ್​ ಕಣಗಳು ದೇಹ ಸೇರಿಕೊಳ್ಳಲಿವೆ. ಈ ಪ್ಲಾಸ್ಟಿಕ್​ ಕಣಗಳು ಕಣ್ಣಿಗೆ ಕಾಣುವುದೇ ಇಲ್ಲ. ಆದರೆ, ಇವು ದೇಹ ಸೇರಿ ಭಾರೀ ತೊಂದರೆ ಉಂಟು ಮಾಡುತ್ತದೆ ಎಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ: ‘5 A Day’: ಎರಡು ಹಣ್ಣು – ಮೂರು ತರಕಾರಿ.. ಪ್ರತಿದಿನವೂ ಸೇವಿಸುವುದರಿಂದ ಆರೋಗ್ಯ ವೃದ್ಧಿ!

ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!