AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ವರ್ಷಗಳ ಬಳಿಕ ಕೋಡಿ ಬಿದ್ದ ದ್ವಾರಸಮುದ್ರ ಕೆರೆ, ಹರಿಯೋ ನೀರಲ್ಲಿ ಪ್ರವಾಸಿಗರ ಮಸ್ತ್ ಮಜಾ

ಹಾಸನ: ಹಳೆಬೀಡು ಅಂದ್ರೆ ತಕ್ಷಣ ನೆನಪಾಗೋದು ಹೊಯ್ಸಳರ ಕಾಲದ ದೇವಸ್ಥಾನ. ಅಲ್ಲಿನ ಕಲೆ, ವಾಸ್ತು ಶಿಲ್ಪಕ್ಕೆ ಮರುಳಾಗದವರೇ ಇಲ್ಲ. ಹೀಗಾಗಿ ದೇಶವಿದೇಶದಿಂದ ಪ್ರವಾಸಿಗರು ಹರಿದು ಬರ್ತಾರೆ. ಹೀಗೆ ಹರಿದು ಬರೋ ಪ್ರವಾಸಿಗರಿಗೆ ಈ ಡಬಲ್ ಧಮಾಕ. ದೇವಸ್ಥಾನ ನೋಡುವುರದ ಜೊತೆ ನೀರಿನಲ್ಲೂ ಸಖತ್ ಎಂಜಾಯ್ ಮಾಡಬಹುದು. ತುಂಬಿದ ಕರೆಯಲ್ಲಿ ಪ್ರವಾಸಿಗರ ನೀರಾಟ.. ಬೋಟಿಂಗ್ ಮಾಡ್ತಾ ಮಸ್ತ್ ಮಜಾ ಮಾಡ್ತಿರೋ ಟೂರಿಸ್ಟ್ ಗಳು.. ಜುಳು ಜುಳು ಹರಿಯುವ ನೀರಿನಲ್ಲಿ ಮಕ್ಕಳ ಆಟ ತುಂಟಾಟ.. ಹಾಸನ ಜಿಲ್ಲೆ ಬೇಲೂರು ತಾಲೂಕಿನ […]

12 ವರ್ಷಗಳ ಬಳಿಕ ಕೋಡಿ ಬಿದ್ದ ದ್ವಾರಸಮುದ್ರ ಕೆರೆ, ಹರಿಯೋ ನೀರಲ್ಲಿ ಪ್ರವಾಸಿಗರ ಮಸ್ತ್ ಮಜಾ
ಆಯೇಷಾ ಬಾನು
|

Updated on: Oct 28, 2020 | 10:04 AM

Share

ಹಾಸನ: ಹಳೆಬೀಡು ಅಂದ್ರೆ ತಕ್ಷಣ ನೆನಪಾಗೋದು ಹೊಯ್ಸಳರ ಕಾಲದ ದೇವಸ್ಥಾನ. ಅಲ್ಲಿನ ಕಲೆ, ವಾಸ್ತು ಶಿಲ್ಪಕ್ಕೆ ಮರುಳಾಗದವರೇ ಇಲ್ಲ. ಹೀಗಾಗಿ ದೇಶವಿದೇಶದಿಂದ ಪ್ರವಾಸಿಗರು ಹರಿದು ಬರ್ತಾರೆ. ಹೀಗೆ ಹರಿದು ಬರೋ ಪ್ರವಾಸಿಗರಿಗೆ ಈ ಡಬಲ್ ಧಮಾಕ. ದೇವಸ್ಥಾನ ನೋಡುವುರದ ಜೊತೆ ನೀರಿನಲ್ಲೂ ಸಖತ್ ಎಂಜಾಯ್ ಮಾಡಬಹುದು.

ತುಂಬಿದ ಕರೆಯಲ್ಲಿ ಪ್ರವಾಸಿಗರ ನೀರಾಟ.. ಬೋಟಿಂಗ್ ಮಾಡ್ತಾ ಮಸ್ತ್ ಮಜಾ ಮಾಡ್ತಿರೋ ಟೂರಿಸ್ಟ್ ಗಳು.. ಜುಳು ಜುಳು ಹರಿಯುವ ನೀರಿನಲ್ಲಿ ಮಕ್ಕಳ ಆಟ ತುಂಟಾಟ.. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೆಬೀಡಿನ ದ್ವಾರಸಮುದ್ರ ಕೆರೆಯಲ್ಲಿ ಕಂಡು ಬಂದ ದೃಶ್ಯವಿದು. ಕೆಲ ವರ್ಷಗಳಿಂದ ಮಳೆಯಿಲ್ಲದೇ ಖಾಲಿಯಾಗಿದ್ದ ಕೆರೆ, 12 ವರ್ಷಗಳ ಬಳಿಕ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಕೆರೆ ಕೋಡಿ ಬಿದ್ದು ಜಲಪಾಲತದಂತೆ ಹರಿಯೋ ನೀರಿನಲ್ಲಿ ಪ್ರವಾಸಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ದೇಶ ವಿದೇಶಗಳ ನೂರಾರು ಪ್ರವಾಸಿಗರು ಬಂದು ಹಳೆಬೀಡಿನ ದೇವಾಲಯವನ್ನ ಕಣ್ತುಂಬಿಕೊಳ್ಳುವುದರ ಜೊತೆ ದ್ವಾರಸಮುದ್ರ ಕೆರೆ ನೀರಿನಲ್ಲಿ ಸಖತ್‌ ಎಂಜಾಯ್ ಮಾಡುತ್ತಿದ್ದಾರೆ. ಕೆರೆ ನೀರಿನಲ್ಲಿ ಮಿಂದೆದ್ದು ಸಂಭ್ರಮಿಸೋ ಜನರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಬೋಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ದಶಕದ ಬಳಿಕ ಮೇಳೈಸಿದ ಕೆರೆ ಅಂದವನ್ನ ಪ್ರವಾಸಿಗರು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.

ಒಟ್ನಲ್ಲಿ ಉತ್ತಮ ಮಳೆಯಿಂದ ತುಂಬಿರೋ ದ್ವಾರಸಮುದ್ರ ಕೆರೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದ್ದು, ಪ್ರವಾಸಿಗರು ಹಳೆಬೀಡಿನ ದೇಗುಲವನ್ನ ಕಣ್ತುಂಬಿಕೊಳ್ಳೋ ಜೊತೆಗೆ ನೀರಿನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. -ಮಂಜುನಾಥ್

ರಾಯರ ಸನ್ನಿಧಿಯಲ್ಲಿ ತಂದೆಗೆ ಗೌರವ ಡಾಕ್ಟರೇಟ್: ಯುವ ರಾಜ್​ಕುಮಾರ್ ಸಂತಸ
ರಾಯರ ಸನ್ನಿಧಿಯಲ್ಲಿ ತಂದೆಗೆ ಗೌರವ ಡಾಕ್ಟರೇಟ್: ಯುವ ರಾಜ್​ಕುಮಾರ್ ಸಂತಸ
ಜ್ಯುವೆಲರಿ ಶಾಪ್‌ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ
ಜ್ಯುವೆಲರಿ ಶಾಪ್‌ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ
ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ಪ್ರತಿಕ್ರಿಯೆ
ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ಪ್ರತಿಕ್ರಿಯೆ
ಕರ್ನಾಟಕದ ಬ್ಯಾಟಿಂಗ್, ಬೌಲಿಂಗ್ ಸ್ಟ್ರೆಂತ್ ವಿವರಿಸಿದ ವಿನಯ್ ಕುಮಾರ್
ಕರ್ನಾಟಕದ ಬ್ಯಾಟಿಂಗ್, ಬೌಲಿಂಗ್ ಸ್ಟ್ರೆಂತ್ ವಿವರಿಸಿದ ವಿನಯ್ ಕುಮಾರ್
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ