AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ವಿದ್ಯುತ್ ಉತ್ಪಾದನೆ.. ಮಂಡ್ಯದಲೊಬ್ಬ ರೈತ ವಿಜ್ಞಾನಿ

ಆತ ಓದಿದ್ದು 8ನೇ ತರಗತಿ, ಮಾಡ್ತಿರೋದು ಬೇಸಾಯ. ಆದರೆ ಈತನ ಸಂಶೋಧನೆಗಳು ಯಾವುದೇ ವಿಜ್ಞಾನಿಗೂ ಕಡಿಮೆ ಇಲ್ಲ. ಮೂರ್ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸಂಶೋಧನೆ ಮಾಡಿರುವ ಈತನ ಸಾಧನೆ ಬಗ್ಗೆ ವಿವರಿಸೋದಕ್ಕೆ ತುಂಬಾ ಇದೆ. ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ವಿದ್ಯುತ್ ಉತ್ಪಾದನೆ.. ಮಂಡ್ಯದಲೊಬ್ಬ ರೈತ ವಿಜ್ಞಾನಿ
ರೈತ ಮಂಜೇಗೌಡ
ಆಯೇಷಾ ಬಾನು
|

Updated on:Dec 23, 2020 | 12:49 PM

Share

ಮಂಡ್ಯ: ಕೆ.ಆರ್.ಪೇಟೆ ತಾಲೂಕು ಕೋಮನಹಳ್ಳಿಯ ಮಂಜೇಗೌಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇವ್ರು ಮಾಡಿದ ಸಾಧನೆಗಳು ಎಲ್ಲರ ಗಮನ ಸೆಳೆಯುತ್ತಿದೆ. ತಮ್ಮ ಸಂಶೋಧನೆಗಳಿಂದಲೇ ಮಂಜೇಗೌಡ ಸುತ್ತಮುತ್ತಲ ಊರುಗಳಲ್ಲಿ ಫುಲ್ ಫೇಮಸ್ ಕೂಡ ಆಗಿದ್ದಾರೆ.

ಅಂದಹಾಗೆ 8ನೇ ತರಗತಿ ಓದಿರುವ ಮಂಜೇಗೌಡ ತಮಗಿರುವ ಜಮೀನಿನಲ್ಲೇ ವ್ಯವಸಾಯ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಸಂಶೋಧನೆಯ ಆಸಕ್ತಿ ಹೊಂದಿರುವ ಇವರು ಎಲ್ಲರಂತೆ ವ್ಯವಸಾಯವನ್ನಷ್ಟೇ ಮಾಡಿಕೊಂಡು ಸುಮ್ಮನಿಲ್ಲ. ಬದಲಾಗಿ ತಮಗೆ ಸಮಯ ಸಿಕ್ಕಾಗಲೆಲ್ಲಾ ಬೋರ್ ವೆಲ್​ಗೆ ಬೀಳುವ ಮಕ್ಕಳ ರಕ್ಷಿಸುವ ರೋಬೋ ಸಂಶೋಧಿಸಿದ್ದರು. ಅದರಲ್ಲಿ ಒಂದಷ್ಟು ಯಶಸ್ಸನ್ನು ಕಂಡಿದ್ದರು ಮಂಜೇಗೌಡ.

ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಇವರು ತಮ್ಮದೇ ಜಮೀನಿನಲ್ಲಿ ವಿದ್ಯುತ್ ತಯಾರಿಕಾ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಿ ಕೆರೆತುಂಬಿ ಹರಿಯುತ್ತಿದ್ದು ವೇಸ್ಟೇಜ್ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ಸ್ಥಳೀಯವಾಗಿಯೇ ಸಿಗುವ ವಸ್ತು ಬಳಕೆ ಮಾಡಿ ಅವ್ರು ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಊರಿನ 10 ಬಡಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ. ಜೊತೆಗೆ ಶಾಲೆ, ಹಾಲಿನ ಡೈರಿ ಹಾಗೂ ದೇವಾಲಯಕ್ಕೂ ಇವರು ನೀಡುತ್ತಿರುವ ವಿದ್ಯುತ್ ಬೆಳಕಾಗಿ ಉರಿಯುತ್ತಿದೆ.

ಮಂಜೇಗೌಡರಿಗೆ ಊರಿನಲ್ಲಿ ನಾಲ್ಕೈದು ಎಕರೆ ಭೂಮಿ ಇದೆ. ಅಲ್ಲಿ ಬಾಳೆ ಅಡಿಕೆ ಸೇರಿದಂತೆ ವಿವಿಧ ರೀತಿಯ ಮಿಶ್ರ ಬೇಸಾಯ ಮಾಡುತ್ತಿದ್ದಾರೆ. ಇವರ ಬೇಸಾಯಕ್ಕೂ ಇದೇ ವಿದ್ಯುತ್ ಬಳಸಿ ನೀರನ್ನ ಪಂಪ್ ಮಾಡಿಕೊಳ್ತಾರೆ. ವಾರದಲ್ಲಿ 1 ದಿನ ಪೂರ್ತಿ ಅಂದರೆ ದಿನದ 24 ಗಂಟೆ ಕಾಲ ವಿದ್ಯುತ್ ಬಳಸಿ ನೀರು ಪಂಪ್ ಮಾಡ್ತಾರೆ. ಸರ್ಕಾರ ರೈತರ ಪಂಪ್ ಸೆಟ್​ ಗಳಿಗೆ ದಿನಕ್ಕೆ 3 ಗಂಟೆ ವಿದ್ಯುತ್ ನೀಡುತ್ತಿದ್ದು, ಇವರು ತಮ್ಮದೇ ವಿದ್ಯುತ್ ಬಳಸಿ ದಿನದ 24 ಗಂಟೆಗಳ ಕಾಲ ಫ್ರೀಯಾಗಿ ವಿದ್ಯುತ್ ಪಡೆಯುತ್ತಿದ್ದಾರೆ.

ಒಟ್ನಲ್ಲಿ ಹಲವು ಸಂಶೋಧನೆಗಳನ್ನ ಮಾಡುವ ಮೂಲಕ ಮಂಜೇಗೌಡ ಈ ಭಾಗದಲ್ಲಿ ರೈತ ವಿಜ್ಞಾನಿ ಎಂದೇ ಹೆಸರುಗಳಿಸಿದ್ದು, ಅವರ ಸಾಧನೆ ಪಟ್ಟಿಗೆ ಈಗ ಮತ್ತೊಂದು ವಿಚಾರ ಸೇರ್ಪಡೆಯಾಗಿದೆ. ಇವರ ಸಂಶೋಧನೆಯನ್ನು ಸ್ಥಳೀಯವಾಗಿ ಬಳಸಿಕೊಂಡಿದ್ದೇ ಆದರೆ ಹಳ್ಳಿಗಳಲ್ಲಿನ ವಿದ್ಯುತ್ ಸಮಸ್ಯೆ ನಿವಾರಣೆ ಆಗೋದು ಗ್ಯಾರಂಟಿ.

Published On - 7:08 am, Wed, 23 December 20

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ