
ಬೀದರ್: ಜಿಲ್ಲೆಯ ಔರಾದ್ ತಾಲೂಕಿನ 5 ಗ್ರಾಮಗಳ ರೈತರು ಕಷ್ಟಪಟ್ಟು ಶ್ರೀಗಂಧದ ಮರಗಳನ್ನ ಬೆಳೆಸಿದ್ರು. ಸುಮಾರು 10-15ವರ್ಷಗಳಿಂದ ಬೆಳೆದಿದ್ದ ಶ್ರೀಗಂಧದ ಮರಗಳನ್ನ ಇನ್ನೇನು ಕಟಾವು ಮಾಡಬೇಕು ಅನ್ನೋ ಚಿಂತನೆಯಲ್ಲಿ ರೈತರು ಇದ್ರು. ಆದ್ರೆ, ಈಗ ರೈತರಿಗೆ ಹೊಸ ಸಂಕಷ್ಟ ಶುರುವಾಗಿದೆ.
ಜೊತೆಗೆ ಗಂಧದ ಮರಗಳು ಕಣ್ಮರೆಯಾಗ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ರೈತರ ಹೊಲಗಳಲ್ಲಿ ಶ್ರೀಗಂಧ ಬೆಳೆಯಲು ಉತ್ತೇಜನ ನೀಡಿತ್ತು. ಹೀಗೆ ಬೆಳೆದ ಶ್ರೀಗಂಧ ಕಳ್ಳರ ಪಾಲಾದ್ರೆ ಏನ್ಮಾಡೋದು ಹೇಳಿ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ರೈತರು ಕಷ್ಟಪಟ್ಟು ಶ್ರೀಗಂಧದ ಮರಗಳನ್ನ ಬೆಳೆಸಿದ್ರು. ಇಲ್ಲಿನ ಜಮೀನುಗಳಲ್ಲಿ ಶ್ರೀಗಂಧದ ಮರಗಳು ನೈಸರ್ಗಿಕವಾಗಿ ಬೆಳೆದಿದ್ವು.
ಕೆಲವು ರೈತರು ಶ್ರೀಗಂಧದ ಪ್ಲಾಂಟೇಷನ್ ಕೂಡ ಮಾಡಿದ್ರು. ಆದ್ರೆ, ರೈತರಿಗೆ ಶ್ರೀಗಂಧಕ್ಕೆ ಮಾರುಕಟ್ಟೆ ಎಲ್ಲಿದೆ ಅಂತಾ ಗೊತ್ತಿಲ್ಲ. ಹೀಗಾಗಿ ಕಟಾವಿಗೆ ಬಂದಿರೋ ಮರಗಳು ಕಳ್ಳರ ಪಾಲಾಗ್ತಿವೆ. ಈ ಕುರಿತು ಪೊಲೀಸರಿಗೆ, ಅರಣ್ಯ ಇಲಾಖೆಗೆ ದೂರು ಕೊಟ್ಟರೂ ಪ್ರಯೋಜನ ಆಗ್ತಿಲ್ಲ ಅಂತಾ ರೈತರು ಅಳಲು ತೋಡಿಕೊಂಡಿದ್ದಾರೆ.
ಇನ್ನಾದ್ರೂ ಪೊಲೀಸರು ಎಚ್ಚೆತ್ತುಕೊಂಡು ಕಳ್ಳರ ಆಟಕ್ಕೆ ಕಡಿವಾಣ ಹಾಕಬೇಕಿದೆ. ಇಲ್ಲದೇ ಹೋದ್ರೆ ಈಗಾಗಲೇ ಸಂಕಷ್ಟದಲ್ಲಿರೋ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ.
ಜೊತೆಗೆ ಅರಣ್ಯ ಇಲಾಖೆ ರೈತರಿಗೆ ಗಂಧವನ್ನ ಎಲ್ಲಿ ಮಾರಾಟ ಮಾಡಬೇಕು ಅನ್ನೋ ಜಾಗೃತಿ ಮೂಡಿಸಬೇಕಿದೆ. ಮಾರುಕಟ್ಟೆಯ ಕುರಿತು ರೈತರಿಗೆ ತಿಳುವಳಿಕೆ ಮೂಡಿಸಿದ್ರೆ ಕಳ್ಳರ ಈ ಕೃತ್ಯಗಳಿಗೆ ತಡೆಯೊಡ್ಡಬಹುದು. ಹೀಗಾಗಿ ಇನ್ನಾದ್ರೂ ಪೊಲೀಸರು, ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುತ್ತಾ ಅಂತಾ ಕಾದು ನೋಡ್ಬೇಕಿದೆ.