AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಹಿರಾತು ಫಲಕಗಳ ಹಾವಳಿ: ಶತಾಯುಷಿ ಮರಗಳು ಹೇಳುತ್ತಿವೆ ಕಣ್ಣೀರ ಕತೆ

ತಮ್ಮ ಸಂಸ್ಥೆಗಳ ಜಾಹೀರಾತಿಗೆ ಇದೇ ಗಿಡಗಳನ್ನು ಬಳಸಿಕೊಳ್ಳುತ್ತಿರೋದೇ ಸಮಸ್ಯೆಗೆ ಕಾರಣವಾಗಿದೆ. ಹೀಗೆ ಮರಗಳಿಗೆ ಹತ್ತಾರು ತಾರ್ ಮೊಳೆ ಹೊಡೆದು ಜಾಹಿರಾತುಗಳನ್ನು ನೇತು ಹಾಕಿದವರ ಸಂಪರ್ಕ, ವಿಳಾಸವಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ದೂರು ದಾಖಲಿಸಲು ಮನಸ್ಸು ಮಾಡುತ್ತಿಲ್ಲ!

ಜಾಹಿರಾತು ಫಲಕಗಳ ಹಾವಳಿ: ಶತಾಯುಷಿ ಮರಗಳು ಹೇಳುತ್ತಿವೆ ಕಣ್ಣೀರ ಕತೆ
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​|

Updated on: Nov 30, 2020 | 2:52 PM

Share

ಧಾರವಾಡ: ವಿದ್ಯಾಕಾಶಿ ಧಾರವಾಡ ಸಸ್ಯಕಾಶಿಯೂ ಹೌದು. ಇಲ್ಲಿನ ಅದ್ಭುತ ಪರಿಸರಕ್ಕೆ ಕಾರಣ ನೂರಾರು ವರ್ಷಗಳಿಂದ ಬೆಳೆದು ನಿಂತಿರೋ ಗಿಡ-ಮರಗಳು. ಆದರೆ ಇಂಥ ಮರಗಳು ಸ್ವಾರ್ಥಿಗಳಿಂದಾಗಿ ಕಣ್ಣೀರು ಹಾಕುವಂತಾಗಿದೆ.

ಶತಮಾನ ಕಂಡ ಅರಳಿ, ಆಲ, ಅತ್ತಿ ಮತ್ತು ಹುಣಿಸೆ ಮರಗಳೂ ಸೇರಿದಂತೆ, ಅರಣ್ಯ ಇಲಾಖೆ ಸಾಮಾಜಿಕ ಅರಣ್ಯೀಕರಣ ಯೋಜನೆಯಡಿ ರಸ್ತೆ ಬದಿಗೆ ನೆಟ್ಟ ರೇನ್ ಟ್ರೀ, ಪೆಥೋಡಿಯ, ಫಾರೆಸ್ಟ್ ಫ್ಲೇಮ್ ಮರಗಳಿಗೆ ಧಾರವಾಡದ ತುಂಬ ಅನಧಿಕೃತ ಜಾಹಿರಾತುಗಳನ್ನು ಹತ್ತಾರು ಮೊಳೆ ಹೊಡೆದು ನೇತು ಹಾಕಲಾಗುತ್ತಿದೆ. ಈ ಮುಂಚೆ ಹಲವಾರು ಬಾರಿ ಪರಿಸರ ಪ್ರೇಮಿ ಸಂಘಟನೆಗಳು ಇದರ ವಿರುದ್ಧ ಹೋರಾಟ ನಡೆಸಿವೆ.

ಮೊಳೆ ಕಿತ್ತು ಹಾಕಿ, ಜಾಹಿರಾತು ಫಲಕ ತೆಗೆದು ಹಾಕಿ ಎಚ್ಚರಿಕೆಯನ್ನು ನೀಡಿದ್ದವು. ಈ ರೀತಿ ಮಾಡುವುದರಿಂದ ಮರಗಳಿಗೆ ನಂಜಾಗಬಹುದು ಅನ್ನೋ ಆತಂಕ ಹೋರಾಟಗಾರರದ್ದು. ಆದರೆ ಇದೀಗ ಮತ್ತೆ ಜಾಹಿರಾರು ಫಲಕಗಳನ್ನು ಮತ್ತೆ ಗಿಡ-ಮರಗಳ ಕಾಂಡಕ್ಕೆ ಮೊಳೆಗಳನ್ನು ಬಳಸಿ ಅಳವಡಿಸಲಾಗಿದೆ. ‌ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತಮುತ್ತಲಿನ ಗಿಡಗಳಿಗೂ ಇಂಥದ್ದೇ ಸ್ಥಿತಿ ಬಂದೊದಗಿದೆ. ಧಾರವಾಡ ವಿದ್ಯಾಕಾಶಿಯೂ ಆಗಿರುವುದರಿಂದ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಟ್ಯುಟೋರಿಯಲ್, ಪಿಜಿಗಳಿವೆ. ಅನೇಕ ಶಾಲಾ-ಕಾಲೇಜುಗಳಿವೆ.

ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ದೂರು ದಾಖಲಿಸಲು ಮನಸ್ಸು ಮಾಡುತ್ತಿಲ್ಲ.. ಇವರೆಲ್ಲ ತಮ್ಮ ಸಂಸ್ಥೆಗಳ ಜಾಹೀರಾತಿಗೆ ಇದೇ ಗಿಡಗಳನ್ನು ಬಳಸಿಕೊಳ್ಳುತ್ತಿರೋದೇ ಸಮಸ್ಯೆಗೆ ಕಾರಣವಾಗಿದೆ. ಹೀಗೆ ಮರಗಳಿಗೆ ಹತ್ತಾರು ತಾರ್ ಮೊಳೆ ಹೊಡೆದು ಜಾಹಿರಾತುಗಳನ್ನು ನೇತು ಹಾಕಿದವರ ಸಂಪರ್ಕ, ವಿಳಾಸವಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ದೂರು ದಾಖಲಿಸಲು ಮನಸ್ಸು ಮಾಡುತ್ತಿಲ್ಲ! ಇಲಾಖೆ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡರೆ ಜಾಹಿರಾತು ಫಲಕ ಅಳವಡಿಸುವವರು ಈ ಪರಿಯ ದಾರ್ಷ್ಟ್ಯದ ನಡೆಯನ್ನು ತೋರಲಾರರು. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣವಾಗಿದೆ.

ಇದೆಲ್ಲ ಒಂದು ಕಡೆಯಾದರೆ ಹಲವಾರು ಕಡೆಗಳಲ್ಲಿ ವಿದ್ಯುತ್ ಕಂಬಗಳ ಬೀಳದಂತೆ ಅವುಗಳ ಆಧಾರಕ್ಕೆ ದಪ್ಪನೆಯ ತಂತಿಯನ್ನು ಕಟ್ಟಿ, ಪಕ್ಕದ ಗಿಡಗಳಿಗೆ ವೈರ್ ಬಿಗಿದ ಪರಿಣಾಮ ಗಿಡಕ್ಕೆ ಶಾಶ್ವತ ಕಚ್ಚು ಬಿದ್ದಿವೆ. ತಂತಿಗಳನ್ನು ತಮ್ಮ ಉದರದಲ್ಲಿಯೇ ಸಿಕ್ಕಿಸಿಕೊಂಡು ಗಿಡಗಳು ಬೆಳೆಯುತ್ತಿವೆ. ಇಷ್ಟೆಲ್ಲಾ ಕಣ್ಣಿಗೆ ಕಾಣುತ್ತಿದ್ದರೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಾಗಲೀ, ಅರಣ್ಯ ಇಲಾಖೆಯ ಅಧಿಕಾರಿಗಳಾಗಲೀ ಜಾಣಗುರುಡರಂತೆ ವರ್ತಿಸುತ್ತಿರೋದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. -ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ: ಗಂಧದ ನಾಡು ಆಗುವತ್ತ ಕಲ್ಪತರು ನಾಡು

ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ