AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಡಿಗಳನ್ನ ಸುಡಲು ಗಲಭೆಕೋರರು ಲೀಟರ್​ಗಟ್ಟಲೇ ಪೆಟ್ರೋಲ್​, ಸೀಮೆ ಎಣ್ಣೆ ತಂದಿದ್ರು -FSL ವರದಿ

ಬೆಂಗಳೂರು: ಗಲಭೆ ನಡೆದ ಹಲವು ದಿನಗಳ ನಂತರವೂ ಮುನ್ನೆಚ್ಚರಿಕಾ ಕ್ರಮವಾಗಿ ಡಿಜೆ ಹಳ್ಳಯಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ಹೀಗಾಗಿ, ಡಿಜೆ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಖಾಕಿ ಪಡೆ ರೌಂಡ್ಸ್ ಹಾಕ್ತಿದೆ. ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿಸ್ತಿರೋ ಪೋಲೀಸರು ಗುಂಪು ಗುಂಪಾಗಿ ಜನ್ರು ಓಡಾಡದಂತೆ ವಾರ್ನ್ ಸಹ ಮಾಡುತ್ತಿರುವುದು ಕಂಡುಬಂತು. ಬಹುದೊಡ್ಡ ಅಟ್ಯಾಕ್‌ನ ಮತ್ತೊಂದು ಆಯಾಮ ಬಿಚ್ಚಿಟ್ಟ FSL ವರದಿ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆಯಲ್ಲಿ ನಡೆದ ಬಹುದೊಡ್ಡ ಅಟ್ಯಾಕ್‌ನ ಮತ್ತೊಂದು ಆಯಾಮವನ್ನ FSL ವರದಿ ಬಿಚ್ಚಿಟ್ಟಿದೆ. ವರದಿಯ […]

ಗಾಡಿಗಳನ್ನ ಸುಡಲು ಗಲಭೆಕೋರರು ಲೀಟರ್​ಗಟ್ಟಲೇ ಪೆಟ್ರೋಲ್​, ಸೀಮೆ ಎಣ್ಣೆ ತಂದಿದ್ರು -FSL ವರದಿ
Follow us
KUSHAL V
|

Updated on: Aug 16, 2020 | 11:02 AM

ಬೆಂಗಳೂರು: ಗಲಭೆ ನಡೆದ ಹಲವು ದಿನಗಳ ನಂತರವೂ ಮುನ್ನೆಚ್ಚರಿಕಾ ಕ್ರಮವಾಗಿ ಡಿಜೆ ಹಳ್ಳಯಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ಹೀಗಾಗಿ, ಡಿಜೆ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಖಾಕಿ ಪಡೆ ರೌಂಡ್ಸ್ ಹಾಕ್ತಿದೆ. ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿಸ್ತಿರೋ ಪೋಲೀಸರು ಗುಂಪು ಗುಂಪಾಗಿ ಜನ್ರು ಓಡಾಡದಂತೆ ವಾರ್ನ್ ಸಹ ಮಾಡುತ್ತಿರುವುದು ಕಂಡುಬಂತು.

ಬಹುದೊಡ್ಡ ಅಟ್ಯಾಕ್‌ನ ಮತ್ತೊಂದು ಆಯಾಮ ಬಿಚ್ಚಿಟ್ಟ FSL ವರದಿ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆಯಲ್ಲಿ ನಡೆದ ಬಹುದೊಡ್ಡ ಅಟ್ಯಾಕ್‌ನ ಮತ್ತೊಂದು ಆಯಾಮವನ್ನ FSL ವರದಿ ಬಿಚ್ಚಿಟ್ಟಿದೆ.

ವರದಿಯ ಪ್ರಕಾರ ಗಲಭೆಕೋರರು ಗಲಾಟೆ ವೇಳೆ ಬೆಂಕಿ ಹಚ್ಚಲು ಪೆಟ್ರೋಲ್‌ ಮತ್ತು ಸೀಮೆ ಎಣ್ಣೆ ತಂದಿದ್ದರು ಎಂದು ಉಲ್ಲೇಖಿಸಲಾಗಿದೆ. ಗಲಭೆ ನಡೆದ ಒಂದು ಕಡೆ ಪುಂಡರು ಪೆಟ್ರೋಲ್ ತಂದಿದ್ದರೆ ಮತ್ತೊಂದು ಕಡೆ ಕೆಲವು ಆರೋಪಿಗಳು ಡೀಸಲ್ ಹಾಗೂ ಸುಮಾರು 25ಲೀಟರ್​ ಸೀಮೆಎಣ್ಣೆ ತಂದಿದ್ದರಂತೆ. ಈ ವಿಚಾರ ಠಾಣೆ ಬಳಿ ಸುಟ್ಟ ವಾಹನಗಳ ಮೇಲೆ FSL ತಂಡ ಪರಿಶೀಲನೆ ನಡೆಸಿದಾಗ ಬೆಳಕಿಗೆ ಬಂದಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಈ ವಿಚಾರವನ್ನು FSL ತಂಡ ಕನ್ಫರ್ಮ್ ಮಾಡಿದೆ.

ಜೊತೆಗೆ, ಕಿಡಿಗೇಡಿಗಳು ವಾಹನಗಳನ್ನು ಸುಡಲು ಮೊದಲೇ ಪ್ಲ್ಯಾನ್ ಮಾಡಿ ಬಂದಿದ್ರು. ಈ ಕೃತ್ಯದಲ್ಲಿ ವಾಹನಗಳ ಪೆಟ್ರೋಲ್ ಟ್ಯಾಂಕ್‌ ಒಡೆಯಲು ಹರಿತವಾದ ಆಯುಧ ಬಳಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹರಿತವಾದ ಆಯುಧದಿಂದ ಟ್ಯಾಂಕ್‌ ಒಡೆದು ಸುರಿದ ಪೆಟ್ರೋಲ್​ನಿಂದ ಉಳಿದ ವಾಹನಗಳಿಗೆ ಬೆಂಕಿ ಹಚ್ಚಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಕನ್ಫರ್ಮ್ ಮಾಡಿರುವ FSL ತಂಡ ಇದೀಗ ಪ್ರಾಥಮಿಕ ವರದಿಯನ್ನ ಪೊಲೀಸರಿಗೆ ನೀಡಲು ಸಿದ್ಧತೆ ನಡೆಸುತ್ತಿದೆ.

ಗಲಭೆ ಸಂಬಂಧ 100ಕ್ಕೂ ಹೆಚ್ಚು FIR ದಾಖಲಾಗುವ ಸಾಧ್ಯತೆ ಇನ್ನು ಗಲಭೆಗೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು FIR ದಾಖಲಾಗುವ ಸಾಧ್ಯತೆಯಿದೆ. ಬಂಧಿತರ ಸಂಖ್ಯೆಯೂ 700ರಿಂದ 1000ಕ್ಕೇರಿಕೆ ಸಾಧ್ಯತೆಯಿದೆ. ಜೊತೆಗೆ, ಗಲಭೆಯಲ್ಲಿ ಸಾಕಷ್ಟು ಆರೋಪಿಗಳು ಭಾಗಿಯಾದ ಹಿನ್ನೆಲೆಯಲ್ಲಿ ಇನ್ನೂ ಕೆಲ ದಿನಗಳ ಕಾಲ ಬಂಧನ ಕಾರ್ಯ ಮುಂದುವರೆಯಲಿದೆ. ಈಗಾಗಲೇ 340ಕ್ಕೂ ಹೆಚ್ಚು ಆರೋಪಿಗಳನ್ನ ಬಂಧಿಸಲಾಗಿದೆ.

ಜೊತೆಗೆ, ಗಲಾಟೆ ವೇಳೆ ಗಂಭೀರವಾಗಿ ಗಾಯಗೊಂಡಿರುವ ಪೊಲೀಸರು ಹಾಗೂ ವಾಹನ ಕಳೆದುಕೊಂಡಿರುವ ಪೊಲೀಸರು ಮತ್ತು ಸಾರ್ವಜನಿಕರಿಂದ ಮತ್ತಷ್ಟು ಲಿಖಿತ ದೂರುಗಳನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಗಲಭೆ ಸಂಬಂಧ 100ಕ್ಕೂ ಹೆಚ್ಚು FIR ಸೇರುವ ಸಾಧ್ಯತೆಯಿದೆ.

ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್
ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್
ನನ್ನದೇನೂ ಉನ್ನತ ಹುದ್ದೆಯಲ್ಲ, ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ: ರಾಯರೆಡ್ಡಿ
ನನ್ನದೇನೂ ಉನ್ನತ ಹುದ್ದೆಯಲ್ಲ, ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ: ರಾಯರೆಡ್ಡಿ
ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್​​ ಚಕ್ರ: ಮುಂದೇನಾಯ್ತು?
ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್​​ ಚಕ್ರ: ಮುಂದೇನಾಯ್ತು?
ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
ರಾಜಣ್ಣ ಹೇಳಿದ್ದೊಂದು, ಮಾಧ್ಯಮಗಳು ಅರ್ಥಮಾಡಿಕೊಂಡಿದ್ದು ಮತ್ತೊಂದು: ಸಿಎಂ
ರಾಜಣ್ಣ ಹೇಳಿದ್ದೊಂದು, ಮಾಧ್ಯಮಗಳು ಅರ್ಥಮಾಡಿಕೊಂಡಿದ್ದು ಮತ್ತೊಂದು: ಸಿಎಂ
ಸಚಿವರಾದ ಮಹದೇವಪ್ಪ ಮತ್ತು ಶಿವರಾಜ್ ತಂಗಡಿಗಿಯಿಂದಲೂ ಮಾಲಾರ್ಪಣೆ
ಸಚಿವರಾದ ಮಹದೇವಪ್ಪ ಮತ್ತು ಶಿವರಾಜ್ ತಂಗಡಿಗಿಯಿಂದಲೂ ಮಾಲಾರ್ಪಣೆ
ಬದಲಾಗಲಿದೆ ಕರ್ನಾಟಕ ಪೊಲೀಸ್ ಟೋಪಿ! ನೆರೆರಾಜ್ಯಗಳ ಪೊಲೀಸ್ ಕ್ಯಾಪ್ ಪರಿಶೀಲನೆ
ಬದಲಾಗಲಿದೆ ಕರ್ನಾಟಕ ಪೊಲೀಸ್ ಟೋಪಿ! ನೆರೆರಾಜ್ಯಗಳ ಪೊಲೀಸ್ ಕ್ಯಾಪ್ ಪರಿಶೀಲನೆ
ಕೆಂಪೇಗೌಡ ಜಯಂತಿಯಂದು ಇಲ್ಲಿನ ಪ್ರತಿಮೆಗೆ ಮಾಲಾರ್ಪಣೆ: ಶಿವಕುಮಾರ್
ಕೆಂಪೇಗೌಡ ಜಯಂತಿಯಂದು ಇಲ್ಲಿನ ಪ್ರತಿಮೆಗೆ ಮಾಲಾರ್ಪಣೆ: ಶಿವಕುಮಾರ್
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣಗೆ ಸುಳಿವು ಇರಬಹುದು: ಪರಮೇಶ್ವರ್
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣಗೆ ಸುಳಿವು ಇರಬಹುದು: ಪರಮೇಶ್ವರ್
ವಿಐಪಿಗಳೆಂದು ಹೇಳಿಕೊಂಡು ಯಾರ‍್ಯಾರೋ ದೇವಿಯ ದರ್ಶನಕ್ಕೆ ನುಗ್ಗುತ್ತಿದ್ದಾರೆ
ವಿಐಪಿಗಳೆಂದು ಹೇಳಿಕೊಂಡು ಯಾರ‍್ಯಾರೋ ದೇವಿಯ ದರ್ಶನಕ್ಕೆ ನುಗ್ಗುತ್ತಿದ್ದಾರೆ