AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತದೇ ರಗಳೆ.. ಮಾಸ್ಕ್ ಹಾಕದ ಗುಂಪಿಂದ ರಾತ್ರೋರಾತ್ರಿ ಮಾರ್ಷಲ್​ಗಳ ಮೇಲೆ ಹಲ್ಲೆ

ಬೆಂಗಳೂರು: ಮತ್ತದೇ ರಗಳೆ ನಡೆದಿದೆ. ಕೊರೊನಾ ವಾರಿಯರ್ಸ್​ ಮೇಲೆ ಮತ್ತೆ ರಾತ್ರೋರಾತ್ರಿ ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಸ್ಕ್ ಹಾಕದ ವ್ಯಕ್ತಿಯೊಬ್ಬ ಗುಂಪು ಕಟ್ಟಿಕೊಂಡು ರಾತ್ರೋರಾತ್ರಿ ಮಾರ್ಷಲ್​ಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಚೀಫ್ ಮಾರ್ಷಲ್ ಆಫೀಸರ್ ರಜ್ ಬೀರ್ ಸಿಂಗ್ ದೂರು ದಾಖಲು ಮಾಡಿದ್ದಾರೆ. ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ: ನಿನ್ನೆ ರಾತ್ರಿ ಅಬ್ದುಲ್ ರಜಾಕ್ ಎಂಬ ವ್ಯಕ್ತಿ ಗುಂಪುಕೂಡಿ ಈ ಪುಂಡಾಟಿಕೆ ನಡೆಸಿದ್ದಾನೆ. ಬಿಬಿಎಂಪಿ […]

ಮತ್ತದೇ ರಗಳೆ.. ಮಾಸ್ಕ್ ಹಾಕದ ಗುಂಪಿಂದ ರಾತ್ರೋರಾತ್ರಿ ಮಾರ್ಷಲ್​ಗಳ ಮೇಲೆ ಹಲ್ಲೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: May 04, 2020 | 5:52 PM

Share

ಬೆಂಗಳೂರು: ಮತ್ತದೇ ರಗಳೆ ನಡೆದಿದೆ. ಕೊರೊನಾ ವಾರಿಯರ್ಸ್​ ಮೇಲೆ ಮತ್ತೆ ರಾತ್ರೋರಾತ್ರಿ ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಸ್ಕ್ ಹಾಕದ ವ್ಯಕ್ತಿಯೊಬ್ಬ ಗುಂಪು ಕಟ್ಟಿಕೊಂಡು ರಾತ್ರೋರಾತ್ರಿ ಮಾರ್ಷಲ್​ಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಚೀಫ್ ಮಾರ್ಷಲ್ ಆಫೀಸರ್ ರಜ್ ಬೀರ್ ಸಿಂಗ್ ದೂರು ದಾಖಲು ಮಾಡಿದ್ದಾರೆ.

ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ: ನಿನ್ನೆ ರಾತ್ರಿ ಅಬ್ದುಲ್ ರಜಾಕ್ ಎಂಬ ವ್ಯಕ್ತಿ ಗುಂಪುಕೂಡಿ ಈ ಪುಂಡಾಟಿಕೆ ನಡೆಸಿದ್ದಾನೆ. ಬಿಬಿಎಂಪಿ ಮಾರ್ಷಲ್​ಗಳು ಸಾರ್ವಜನಿಕ ಸ್ಥಳಗಳಲ್ಲಿ ಕಸ, ಪ್ರಾಣಿತ್ಯಾಜ್ಯ ಎಸೆಯದಂತೆ, ಮಾಸ್ಕ್ ಹಾಕದಂತೆ ಮೇಲ್ವಿಚಾರಣೆ ಮಾಡುತ್ತಿದ್ದಾಗ ಈ ಹಲ್ಲೆ ನಡೆದಿದೆ. ನಿನ್ನೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಜನ ಮಾರ್ಷಲ್ ಗಳ ಮೇಲೆ ಅಬ್ದುಲ್ ರಜಾಕ್ ಎಂಬ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ಮಾರ್ಷಲ್​ಗಳು ಮೋದಿ ಸರ್ಕಾರದ ಕಡೆಯವರಾ?: ಅಬ್ದುಲ್ ರಜಾಕ್ ಹಾಗೂ ಗುಂಪಿನವರು ಮಾಸ್ಕ್ ಹಾಕದೇ ಓಡಾಡುತ್ತಿದ್ದರು. ಆ ವೇಳೆ ಪಾಲಿಕೆಯ ಮಾರ್ಷಲ್​ಗಳು ಅವರನ್ನ ಪ್ರಶ್ನಿಸಿ, ದಂಡ ಹಾಕಲು ಮುಂದಾಗಿದ್ದಾರೆ. ಆ ವೇಳೆ ದಂಡ ಹಾಕಲು ನೀವ್ಯಾರು, ನೀವೆಲ್ಲ ಮೋದಿ ಸರ್ಕಾರದವರು ಎಂದು ಬೈಯುವುದಕ್ಕೆ ಶುರು ಮಾಡಿದ್ದಾರೆ. ಸ್ಥಳೀಯರನ್ನೆಲ್ಲ ಕರೆದು ಹಲ್ಲೆ ಮಾಡಲು ಪ್ರೇರೇಪಿಸಿದ್ದಾನೆ. ಈ ಮಧ್ಯೆ, ದಂಡ ಹಾಕುವ ಮೆಷಿನ್, ದಂಡ ಹಾಕಿ ಸಂಗ್ರಹಿಸಿದ್ದ ಹಣವನ್ನೂ ಕೂಡಾ ಕಿತ್ತುಕೊಂಡಿದ್ದಾರೆ.

ಅಲ್ಲದೆ ಈ ವೇಳೆ ವೀಡಿಯೋ ಮಾಡುತ್ತಿದ್ದ ಮಾರ್ಷಲ್ ಕೆನ್ನೆಗೆ ಹೊಡೆದು ಪುಂಡಾಟಿಕೆ ಮಾಡಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿಯ ಚೀಫ್ ಮಾರ್ಷಲ್ ಆಫೀಸರ್ ರಜ್ ಬೀರ್ ಸಿಂಗ್ ದೂರು ದಾಖಲು ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಕೆಲಸದ ಮೇಲಿದ್ದಾಗ ತೊಂದರೆ ಕೊಟ್ಟ ಕಾರಣ ಎಫ್ ಐರ್ ದಾಖಲಿಸುವಂತೆ ಮನವಿ ಮಾಡಿದ್ದಾರೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು