AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021 RCB vs SRH Preview: ದೇವದತ್ ಪಡಿಕ್ಕಲ್ ಇಂದು ಆಡಲಿರುವುದರಿಂದ ಆರ್​ಸಿಬಿ ತಂಡದ ಬ್ಯಾಲೆನ್ಸ್ ಉತ್ತಮಗೊಳ್ಳಲಿದೆ

ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿರುವ ವಿರಾಟ್​ ಕೊಹ್ಲಿ ಪಡೆ ಆತ್ಮವಿಶ್ವಾಸದಿಂದ ಬೀಗುತ್ತಿದೆ ಮತ್ತು ಬುಧವಾರದ ಪಂದ್ಯಕ್ಕೆ ಟೀಮಿನ ರೆಗ್ಯುಲರ್ ಓಪನರ್ ಮತ್ತು ಭಾರೀ ಪ್ರತಿಭಾವಂತ ಆಟಗಾರ ದೇವದತ್ ಪಡಿಕ್ಕಲ್ ವಾಪಸ್ಸಾಗಲಿರುವುದರಿಂದ ಟೀಮಿನ ಬ್ಯಾಲೆನ್ಸ್ ಮತ್ತಷ್ಟು ಉತ್ತಮಗೊಳ್ಳಲಿದೆ.

IPL 2021 RCB vs SRH Preview: ದೇವದತ್ ಪಡಿಕ್ಕಲ್ ಇಂದು ಆಡಲಿರುವುದರಿಂದ ಆರ್​ಸಿಬಿ ತಂಡದ ಬ್ಯಾಲೆನ್ಸ್ ಉತ್ತಮಗೊಳ್ಳಲಿದೆ
ದೇವದತ್​ ಪಡಿಕ್ಕಲ್
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on: Apr 14, 2021 | 8:21 AM

Share

ಇಂಡಿಯನ್​ ಪ್ರೀಮಿಯರ್​ ಲೀಗ್ 14ನೇ ಆವೃತ್ತಿಯ ಆರನೇ ಪಂದ್ಯ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್​ ಹೈದರಾಬಾದ್ ನಡುವೆ ಬುಧವಾರ ನಡೆಯಲಿದೆ. ಎರಡೂ ತಂಡಗಳು ಈ ಸೀಸನ್​ನಲ್ಲಿ ಒಂದೊಂದು ಪಂದ್ಯವನ್ನು ಆಡಿದ್ದು ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ಟೀಮನ್ನು ಸೋಲಿಸಿದರೆ, ಹೈದರಾಬಾದ್​ ತಂಡ ಕೊಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಸೋತಿತ್ತು. ಮೊದಲ ಪಂದ್ಯವನ್ನು ಸೋತ ಡೇವಿಡ್​ ವಾರ್ನರ್​ ಅವರ ಹೈದರಾಬಾದ್ ತಂಡ ತಾನು ಎಡವಿದ್ದೆಲ್ಲಿ ಅಂತ ಆತ್ಮಾವಲೋಕನ ಮಾಡಿಕೊಂಡಿರುತ್ತದೆ. ಖುದ್ದು ವಾರ್ನರ್ ಈ ಪಂದ್ಯದಲ್ಲಿ ಫೇಲಾಗಿದ್ದರು. ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲು ಬಂದ ವೃದ್ಧಿಮಾನ್ ಸಹಾ ಕೂಡ ರನ್​ ಗಳಿಸಲು ವಿಫಲರಾದರು. ಹೈದರಾಬಾದ್ ತಂಡ ಈ ಪ್ರಯೋಗ ಅಂದರೆ, ಸಹಾ ಅವರನ್ನು ಓಪನರ್​ ಅಗಿ ಕಳಿಸಿದ್ದು-ಫೇಲ್ ಆಗಿದ್ದರಿಂದ ಬುಧವಾರದ ಪಂದ್ಯದಲ್ಲಿ ಸಹಾ ಜಾಗದಲ್ಲಿ ಬೇರೆ ಅಟಗಾರ ಇನ್ನಿಂಗ್ಸ್ ಆರಂಬಿಸಬಹುದು.

ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ 40 ಎಸೆತಗಳಲ್ಲಿ 55 ರನ್ ಬಾರಿಸಿದ ಜಾನಿ ಬೇರ್​ಸ್ಟೋ, 44 ಎಸೆತಗಳಲ್ಲಿ ಅಜೇಯ 61 ರನ್ ಬಾರಿಸಿದ ಮನೀಶ್​ ಪಾಂಡೆ ಹೈದರಾಬಾದ್​ಗೆ ಆಸರೆಯಾದರು. ಆದರೆ ಕೊನೆಯ ಓವರ್​ಗಳಲ್ಲಿ ಪಾಂಡೆ ಬೌಂಡರಿಗಳನ್ನು ಬಾರಿಸಲು ವಿಫಲರಾಗಿದ್ದರಿಂದ ಹೈದರಾಬಾದ ಪಂದ್ಯ ಸೋಲಬೇಕಾಯಿತು. ಬೌಲಿಂಗ್ ವಿಭಾಗದಲ್ಲಿ ತಂಡದ ನೆಚ್ಚಿನ ಬೌಲರ್​ಗಳಾಗಿರುವ ಭುವನೇಶ್ವರ್ ಕುಮಾರ್ ಮತ್ತು ಸಂದೀಪ್ ಶರ್ಮ ದಂಡನೆಗೊಳಗಾದರು.

ಆದರೆ ಸ್ಪಿನ್ನರ್​ಗಳ ಉತ್ತಮ ದಾಳಿ ವೇಗದ ಬೌಲರ್​ಗಳ ವೈಫಲ್ಯವನ್ನು ಮರೆಸಿತು. ಅಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಲಾ ಎರಡು ವಿಕೆಟ್​ ಪಡೆದರು. ಭುವಿ ಮತ್ತು ಟಿ ನಟರಾಜನ್ ಒಂದೊಂದು ವಿಕೆಟ್ ಗಿಟ್ಟಿಸಿದರು. ಬೌಲಿಂಗ್​ ದಾಳಿ ಓಕೆ, ಆದರೆ ಹೈದರಾಬಾದ್ ತಂಡಕ್ಕೆ ಬೇಕಿರುವುದು ಮಿಡ್ಲ್ ಆರ್ಡರ್​ಲ್ಲಿ ಒಬ್ಬ ಫಿನಿಶರ್. ಜೊತೆಗೆ ಮೂರು ಇಲ್ಲವೇ ನಾಲ್ಕನೇ ಕ್ರಮಾಂಕದಲ್ಲಿ ಒಬ್ಬ ಸ್ಫೋಟಕ ಬ್ಯಾಟ್ಸ್​ಮನ್​ನ ಅಗತ್ಯವೂ ತಂಡಕ್ಕಿದೆ. ಆರ್​ಸಿಬಿ ವಿರುದ್ಧ ಅಡಲಿರುವ ಪಂದ್ಯದಲ್ಲಿ ಈ ನ್ಯೂನತೆಯನ್ನು ಅದು ಸರಿಪಡಿಸಿಕೊಂಡೇ ಕಣಕ್ಕಿಳಿಯಬಹುದು.

ಅತ್ತ, 5 ಬಾರಿಯ ಚಾಂಪಿಯನ್ಸ್ ಆದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿರುವ ವಿರಾಟ್​ ಕೊಹ್ಲಿ ಪಡೆ ಆತ್ಮವಿಶ್ವಾಸದಿಂದ ಬೀಗುತ್ತಿದೆ ಮತ್ತು ಬುಧವಾರದ ಪಂದ್ಯಕ್ಕೆ ಟೀಮಿನ ರೆಗ್ಯುಲರ್ ಓಪನರ್ ಮತ್ತು ಭಾರೀ ಪ್ರತಿಭಾವಂತ ಆಟಗಾರ ದೇವದತ್ ಪಡಿಕ್ಕಲ್ ವಾಪಸ್ಸಾಗಲಿರುವುದರಿಂದ ಟೀಮಿನ ಬ್ಯಾಲೆನ್ಸ್ ಮತ್ತಷ್ಟು ಉತ್ತಮಗೊಳ್ಳಲಿದೆ. ಮುಂಬೈ ವಿರುದ್ದ 29 ಎಸೆತಗಳಲ್ಲಿ 33 ರನ್ ಬಾರಿಸಿದ ಕೊಹ್ಲಿ ಬುಧವಾರದ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡುವ ಸಂಕಲ್ಪದೊಂದಿಗೆ ಕಣಕ್ಕಿಳಿಯಲಿದ್ದಾರೆ.

ಭಾರಿ ಮೊತ್ತಕ್ಕೆ ಖರೀದಿಯಾಗಿರುವ ಆಸ್ಟ್ರೇಲಿಯಾದ ಗ್ಲೆನ್ ಮಾಕ್ಸ್​ವೆಲ್ ಆರ್​ಸಿಬಿ ಪರ​ 28 ಎಸೆತಗಳಲ್ಲಿ 38 ರನ್ ಬಾರಿಸಿದರು. ಟೀಮಿನ ಆಪತ್ಬಾಂಧವ ಎಬಿ ಡಿವಿಲಿಯರ್ಸ್ 27 ಎಸೆತಗಳಲ್ಲಿ 48 ನ್ ಬಾರಿಸಿ ಟೀಮಿನ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದರು. ಬೌಲಿಂಗ್ ವಿಭಾಗದಲ್ಲಿ, 5 ವಿಕೆಟ್ ಕಬಳಿಸಿದ ಹರ್ಷಲ್ ಪಟೇಲ್ ತನ್ನ ಸಾಮರ್ಥ್ಯವನ್ನು ಅಂಡರ್​ ಎಸ್ಟಿಮೇಟ್ ಮಾಡುತ್ತಿದ್ದವರಿಗೆ ತಕ್ಕ ಜವಾಬು ನೀಡಿದರು. ಇನ್ನಿಬ್ಬರು ವೇಗಿಗಳಾದ ಕೈಲ್ ಜೇಮಿಸನ್ ಮತ್ತು ಮೊಹಮ್ಮದ್ ಸಿರಾಜ್ ಉತ್ತಮವಾಗಿ ಬೌಲ್ ಮಾಡಿದರು. ಪ್ರತಿಬಾರಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಿದ್ದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹೈದರಾಬಾದ್ ಬ್ಯಾಟ್ಸ್​ಮನ್​ಗಳ ಕೈಯಲ್ಲಿ ಚೆನ್ನಾಗಿ ಚಚ್ಚಿಸಿಕೊಂಡರು.

ಪಡಿಕ್ಕಲ್​ ಅವರನ್ನು ಅಡುವ ಇಲೆವೆನ್​ನಲ್ಲಿ ಸೇರಿಸಿಕೊಳ್ಳುವುದನ್ನು ಬಿಟ್ಟರೆ ಬೇರೆ ಬದಲಾವಣೆಗಳನ್ನು ಆರ್​ಸಿಬಿ ಮಾಡಲಿಕ್ಕಿಲ್ಲ.

ಇದನ್ನೂ ಓದಿ: RR vs PBKS, IPL 2021: ಕೊನೆಯ ಓವರ್​ನಲ್ಲಿ ಸಿಂಗಲ್ ಓಟ ನಿರಾಕರಿಸಿದ ಸಂಜು ಸ್ಯಾಮ್ಸನ್​ಗೆ ಕ್ರಿಕೆಟ್ ದಿಗ್ಗಜರು ರಿಯಾಕ್ಟ್ ಮಾಡಿದ್ದು ಹೀಗೆ

3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್