AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರೆಂಟ್ ಬಿಲ್ ಉಳಿಸಲು ಮಾಲೀಕರು ಮಾಡಿದ ಎಡವಟ್ಟು, ಕಳ್ಳನಿಗಾಯ್ತು ವರದಾನ

ಮೇನ್ ಸ್ವಿಚ್ ಆಫ್ ಮಾಡಿ ಮಾಲೀಕರು ಮನೆಗೆ ಹೋಗುತ್ತಿದ್ದಂತೆ ಖತರ್ನಾಕ್ ಕಳ್ಳನೊಬ್ಬ ಅಂಗಡಿಗಳಿಗೆ ನುಗ್ಗಿ ಕಳ್ಳತನ ಎಸಗಿರುವ ಘಟನೆ ಬೆಂಗಳೂರು ಹೊರವಲಯದ ಬಾಗಲೂರಿನಲ್ಲಿ ನಡೆದಿದೆ.

ಕರೆಂಟ್ ಬಿಲ್ ಉಳಿಸಲು ಮಾಲೀಕರು ಮಾಡಿದ ಎಡವಟ್ಟು, ಕಳ್ಳನಿಗಾಯ್ತು ವರದಾನ
ಕಳ್ಳತನ ಮಾಡುತ್ತಿರುವ ಖದೀಮ
ಆಯೇಷಾ ಬಾನು
| Edited By: |

Updated on:Feb 10, 2021 | 9:06 AM

Share

ಬೆಂಗಳೂರು: ಕರೆಂಟ್ ಬಿಲ್ ಉಳಿಸಲು ಮಾಲೀಕರು ಮಾಡಿದ ಎಡವಟ್ಟು ಐಡಿಯಾದಿಂದ ಈಗ ಮಾಲೀಕರು ಪೇಚಿಗೆ ಸಿಲುಕಿದಂತಾಗಿದೆ. ಮೇನ್ ಸ್ವಿಚ್ ಆಫ್ ಮಾಡಿ ಮಾಲೀಕರು ಮನೆಗೆ ಹೋಗುತ್ತಿದ್ದಂತೆ ಖತರ್ನಾಕ್ ಕಳ್ಳನೊಬ್ಬ ಅಂಗಡಿಗಳಿಗೆ ನುಗ್ಗಿ ಕಳ್ಳತನ ಎಸಗಿರುವ ಘಟನೆ ಬೆಂಗಳೂರು ಹೊರವಲಯದ ಬಾಗಲೂರಿನಲ್ಲಿ ನಡೆದಿದೆ. ಮೇನ್ ಸ್ವಿಚ್ ಆಫ್ ಮಾಡುತ್ತಿದ್ದಂತೆ ಸಿಸಿ ಕ್ಯಾಮರಾ ಕೂಡ ಆಫ್ ಆಗುತ್ತೆ. ಇದನ್ನೇ ಬಂಡವಾಳ ಮಾಡ್ಕೊಂಡ ಖತರ್ನಾಕ್ ಖದೀಮ ಒಂದೇ ವಾರದಲ್ಲಿ ಒಂದೇ ಏರಿಯಾದ 4 ಶಾಪ್ ಕಳ್ಳತನ ಮಾಡಿದ್ದಾನೆ.

ಕರೆಂಟ್ ಸೇವ್ ಆಗುತ್ತೆ ಎಂದು ಅಂಗಡಿ ಮಾಲೀಕರು ಪವರ್ ಮೇನ್ ಸ್ವಿಚ್ ಆಫ್ ಮಾಡಿ ಮನೆಗೆ ಹೋಗುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ರಾತ್ರಿಯಾಗ್ತಿದ್ದಂತೆ ಎಚ್ಚರಗೊಳ್ಳುತ್ತಿದ್ದ ಈ ಖತರ್ನಾಕ್ ಕಳ್ಳ ದಿನಸಿ ಅಂಗಡಿ, ಮೆಡಿಕಲ್, ಮೊಬೈಲ್ ಶಾಪ್, ಹಾರ್ಡ್​ವೇರ್ ಶಾಪ್​ಗಳಿಗೆ ನುಗ್ಗಿ ಕೈಗೆ ಸಿಕ್ಕದನ್ನು ದೋಚಿದ್ದಾನೆ. ಆದ್ರೆ ಹಾರ್ಡ್ ವೇರ್ ಶಾಪ್​ನ ಸಿಸಿಟಿವಿಯಲ್ಲಿ ಮಾತ್ರ ಕಳ್ಳನ ಕೈ ಚಳಕ ಸೆರೆಯಾಗಿದ್ದು ಕೊನೆಗೂ ಖದೀಮನ ಸುಳಿವು ಸಿಕ್ಕಿದೆ.

ಈ ಕಳ್ಳ ಸುಮಾರು 50 ಸಾವಿರ ನಗದು ದೋಚಿದ್ದಾನೆ. ಮೊಬೈಲ್ ಶಾಪ್​ನಲ್ಲಿ 1ಲಕ್ಷ ಮೌಲ್ಯದ‌ ಮೊಬೈಲ್, ದಿನಸಿ ಅಂಗಡಿಯಲ್ಲಿ 10 ಸಾವಿರ ಮೌಲ್ಯದ ಸಿಗರೇಟ್, ಮೆಡಿಕಲ್ ಶಾಪ್​ನಲ್ಲಿ ಕೋರೆಕ್ಸ್ ಸಿರಪ್​ಗಳು , ಸಿರಿಂಜ್​ಗಳು ಸೇರಿದಂತೆ ಕ್ಯಾಶ್ ಕಳ್ಳತನ ಮಾಡಿದ್ದಾನೆ. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿದ್ದು ಸದ್ಯ ಸಿಸಿಟಿವಿ ಆಧಾರದ ಮೇಲೆ ಪೊಲೀಸರು ಕಳ್ಳನನ್ನು ಹಿಡಿಯಲು ಬಲೆ ಬೀಸಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಮೊಬೈಲ್ ಕಳ್ಳತನ: ಫೋನ್ ಕಳೆದುಹೋದರೆ ಏನು ಮಾಡಬೇಕು?

Published On - 7:51 am, Wed, 10 February 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ