AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡಗದ್ದೆ ಪಕ್ಷಿಧಾಮ: ಬೆಳ್ಳಕ್ಕಿಗಳ ವಯ್ಯಾರಕ್ಕೆ ಪ್ರವಾಸಿಗರು ಫುಲ್ ದಿಲ್ ಖುಷ್

ಶಿವಮೊಗ್ಗ: ಸುಂದರ ಪರಿಸರದ ನಡುವೆ ತುಂಬಿ ಹರಿಯುತ್ತಿರುವ ತುಂಗೆ. ಹಚ್ಚ ಹಸಿರಿನ ಕಾನನದಲ್ಲಿ ಬಿಳಿ ಚುಕ್ಕಿ ಇಟ್ಟಂತೆ ಭಾಸವಾಗ್ತಿರೋ ಬೆಳ್ಳಕ್ಕಿಗಳ ನೋಟ. ಮರಗಳಲ್ಲಿ ಸಾಲು ಸಾಲಾಗಿ ಕುಳಿತ ಬೆಳ್ಳಕ್ಕಿ ಹಿಂಡನ್ನ ನೋಡ್ತಾ ಇದ್ರೆ ಮನಸ್ಸಿಗೆ ಅದೇನೋ ಖುಷಿ, ಉಲ್ಲಾಸ. ಶಿವಮೊಗ್ಗದಿಂದ ತೀರ್ಥಹಳ್ಳಿ ರಸ್ತೆಗೆ ಹೊರಟರೆ ಪ್ರವಾಸಿಗರಿಗೆ ಹಬ್ಬವೋ ಹಬ್ಬ. ಮೊದಲು ತುಂಗಾ ಡ್ಯಾಂ. ಬಳಿಕ ಸಕ್ರೆ ಬೈಲು ಆನೆ ಬಿಡಾರ. ಇದನ್ನು ನೋಡಿ ಮುಂದೆ ಸಾಗಿದ್ರೆ ಈ ಮಂಡಗದ್ದೆ ಪಕ್ಷಿಧಾಮ ಸಿಗುತ್ತೆ. ಈ ಧಾಮಕ್ಕೆ ಮಳೆಗಾಲದಲ್ಲಿ ದೇಶ […]

ಮಂಡಗದ್ದೆ ಪಕ್ಷಿಧಾಮ: ಬೆಳ್ಳಕ್ಕಿಗಳ ವಯ್ಯಾರಕ್ಕೆ ಪ್ರವಾಸಿಗರು ಫುಲ್ ದಿಲ್ ಖುಷ್
ಆಯೇಷಾ ಬಾನು
| Edited By: |

Updated on: Sep 01, 2020 | 3:28 PM

Share

ಶಿವಮೊಗ್ಗ: ಸುಂದರ ಪರಿಸರದ ನಡುವೆ ತುಂಬಿ ಹರಿಯುತ್ತಿರುವ ತುಂಗೆ. ಹಚ್ಚ ಹಸಿರಿನ ಕಾನನದಲ್ಲಿ ಬಿಳಿ ಚುಕ್ಕಿ ಇಟ್ಟಂತೆ ಭಾಸವಾಗ್ತಿರೋ ಬೆಳ್ಳಕ್ಕಿಗಳ ನೋಟ. ಮರಗಳಲ್ಲಿ ಸಾಲು ಸಾಲಾಗಿ ಕುಳಿತ ಬೆಳ್ಳಕ್ಕಿ ಹಿಂಡನ್ನ ನೋಡ್ತಾ ಇದ್ರೆ ಮನಸ್ಸಿಗೆ ಅದೇನೋ ಖುಷಿ, ಉಲ್ಲಾಸ.

ಶಿವಮೊಗ್ಗದಿಂದ ತೀರ್ಥಹಳ್ಳಿ ರಸ್ತೆಗೆ ಹೊರಟರೆ ಪ್ರವಾಸಿಗರಿಗೆ ಹಬ್ಬವೋ ಹಬ್ಬ. ಮೊದಲು ತುಂಗಾ ಡ್ಯಾಂ. ಬಳಿಕ ಸಕ್ರೆ ಬೈಲು ಆನೆ ಬಿಡಾರ. ಇದನ್ನು ನೋಡಿ ಮುಂದೆ ಸಾಗಿದ್ರೆ ಈ ಮಂಡಗದ್ದೆ ಪಕ್ಷಿಧಾಮ ಸಿಗುತ್ತೆ. ಈ ಧಾಮಕ್ಕೆ ಮಳೆಗಾಲದಲ್ಲಿ ದೇಶ ವಿದೇಶದಿಂದ ವಿವಿಧ ಜಾತಿಯ ಪಕ್ಷಿಗಳು ಬರುತ್ತವೆ. ಅದರಲ್ಲೂ ಹೆಚ್ಚಾಗಿ ಇಲ್ಲಿ ಬೆಳ್ಳಕ್ಕಿಗಳು ಕಾಣ ಸಿಗುತ್ತೆ. ಅದರಲ್ಲೂ ತುಂಗಾ ನದಿ ದಡದಲ್ಲಿ ಕಾಣವ ಈ ಪಕ್ಷಿಗಳ ಹಿಂಡು ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತೆ.

ಪ್ರತಿ ವರ್ಷವೂ ಮಂಡಗದ್ದೆ ಪಕ್ಷಿಧಾಮಕ್ಕೆ ವಿದೇಶಿ ಪಕ್ಷಿಗಳು ಆಗಮಿಸುತ್ತವೆ. ಇಲ್ಲಿ ಮೂರು ನಾಲ್ಕು ತಿಂಗಳು ವಾಸವಿದ್ದು, ಗೂಡು ಕಟ್ಟಿಕೊಂಡು, ಮೊಟ್ಟೆಯಿಟ್ಟು ಮರಿ ಮಾಡಿಕೊಂಡ ಬಳಿಕ ವಾಪಸ್‌ ತಾಯ್ನಾಡಿಗೆ ತೆರಳುತ್ತವೆ. ಮಳೆಗಾಲದ ಸಮಯ ಮೂರು ನಾಲ್ಕು ತಿಂಗಳು ಈ ವಿದೇಶಿ ಪಕ್ಷಿಗಳನ್ನು ಇಲ್ಲಿ ನೋಡಬಹುದು. ಅದರಲ್ಲೂ ಇಲ್ಲಿ ಹೆಚ್ಚಾಗಿ ಕಾಣುವ ಕೊಕ್ಕರೆಗಳು ಹಸಿರ ಪರಿಸರಕ್ಕೆ ಬೆಳ್ಳಿಯ ಚುಕ್ಕೆಗಳನ್ನ ಇಟ್ಟಂತೆ ಭಾಸವಾಗುತ್ತೆ. ಇನ್ನು ಇಲ್ಲಿಗೆ ಬರೋ ಪ್ರವಾಸಿಗರು ಹಕ್ಕಿಗಳ ಆಟವನ್ನ ನೋಡುತ್ತಾ, ಅವುಗಳನ್ನ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಾರೆ.

ಒಟ್ಟಾರೆ ಮಲೆನಾಡಿನ ಮರಗಳ ಮೇಲೆ ಒಟ್ಟೊಟ್ಟಿಗೆ ಆಡುತ್ತಾ, ಒಣಗಿದ ಮರಗಳ ಕೊಂಬೆಗಳ ಮೇಲೆ ಕುಳಿತು ಪಕ್ಷಿಗಳು ರಿಲ್ಯಾಕ್ಸ್ ಮಾಡೋ ಪರಿ ನಿಜಕ್ಕೂ ಕಣ್ಣಿಗೆ ಹಬ್ಬ. ಬೆಳ್ಳಕ್ಕಿಗಳ  ವಯ್ಯಾರ ಇಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿದ್ದು, ಇದನ್ನ ನೋಡಿದ್ರೆ ಪ್ರಕೃತಿ ಮಾತೆಗೆ ನಿಜಕ್ಕೂ ನಾವು ಕೈ ಮುಗಿಯಲೇ ಬೇಕು.

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!