Sign In

By signing in or creating an account, you agree with Associated Broadcasting Company's Terms & Conditions and Privacy Policy.

RRR ಸಿನಿಮಾದ ಶೂಟಿಂಗ್‌ ಗಿಂತ ಗ್ರಾಫಿಕ್ಸ್‌ಗೇ ಅತಿಹೆಚ್ಚು ಹಣ ಖರ್ಚಾ.. ತೆರೆಮೇಲೆ ಹುಟ್ಟಲಿದೆ ಅದ್ಭುತ ದೃಶ್ಯ ವೈಭವ

ಬಾಹುಬಲಿ ಮಾಂತ್ರಿಕ ನಿರ್ದೇಶಕ ರಾಜಮೌಳಿ ಆ್ಯಕ್ಷನ್‌ ಕಟ್ ಹೇಳ್ತಿರೋ ಆರ್‌ಆರ್‌ಆರ್‌ ಸಿನಿಮಾ ಒಂದಲ್ಲ ಒಂದು ವಿಶೇಷತೆಯಿಂದ ಸೌಂಡ್‌ ಮಾಡ್ತಾನೆ ಇದೆ. ಸದ್ಯಕ್ಕಂತೂ ಆರ್‌ಆರ್‌ಆರ್‌ ಸಿನಿಮಾಗಳಿಗಾಗಿ ಚಿತ್ರತಂಡ ಹಗಲಿರುಳು ಶ್ರಮಿಸಿ ತೆರೆಗೆ ತರೋಕೆ ಹರಸಾಹಸ ಪಡ್ತಿದೆ. ಆದ್ರೀಗ ಶೂಟಿಂಗ್‌ ಗಿಂತ ಸಿನಿಮಾ ಗ್ರಾಫಿಕ್ಸ್‌ ಕೆಲಸಕ್ಕೆ ಹೆಚ್ಚು ಹಣ ಖರ್ಚು ಮಾಡೋಕೆ ತಯಾರಾಗಿದೆ ಚಿತ್ರತಂಡ. ಈ ಕುರಿತ ಲೇಟೆಸ್ಟ್ ಅಪ್‌ಡೇಟ್‌ ಇಲ್ಲಿದೆ ಓದಿ.

RRR ಸಿನಿಮಾದ ಶೂಟಿಂಗ್‌ ಗಿಂತ ಗ್ರಾಫಿಕ್ಸ್‌ಗೇ ಅತಿಹೆಚ್ಚು ಹಣ ಖರ್ಚಾ.. ತೆರೆಮೇಲೆ ಹುಟ್ಟಲಿದೆ ಅದ್ಭುತ ದೃಶ್ಯ ವೈಭವ
Follow us
ಆಯೇಷಾ ಬಾನು
|

Updated on: Dec 20, 2020 | 7:49 AM

ಆರ್‌ಆರ್‌ಆರ್, ನಿರ್ದೇಶಕ ರಾಜಮೌಳಿ ಆ್ಯಕ್ಷನ್‌ ಕಟ್ ಹೇಳ್ತಿರೋ ಸಿನಿಮಾ. ಕೋಮರಂ ಭೀಮ್‌ ಪಾತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್‌ ಹಾಗೆಯೇ ಅಲ್ಲುರಿ ಸೀತಾರಾಮ್‌ ಪಾತ್ರದಲ್ಲಿ ರಾಮ್‌ ಚರಣ್‌ ತೇಜಾ ನಟಿಸಿ ಕಮಾಲ್‌ ಮಾಡ್ತಿರೋದು ಒಂದೆಡೆಯಾದ್ರೆ ಸಿನಿಮಾ ಕುರಿತ ಲೇಟೆಸ್ಟ್ ಅಪ್‌ಡೇಟ್‌ ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟುಹಾಕಿದೆ.

ತೆರೆಮೇಲೆ ಅದ್ಭುತ ದೃಶ್ಯ ವೈಭವ: ರಾಜಮೌಳಿ ಆ್ಯಕ್ಷನ್‌ ಕಟ್‌ ಹೇಳ್ತಿರೋ ಆರ್‌ಆರ್‌ಆರ್‌ ಸಿನಿಮಾ ಬರೋಬ್ಬರಿ 10 ಭಾಷೆಯಲ್ಲಿ ರಿಲೀಸ್‌ ಆಗಲಿದೆ ಅನ್ನೋ ಮಾಹಿತಿ ಇದೆ. ಹೀಗಾಗಿ ಸದ್ಯ ಹಿಂದಿ ಭಾಷೆಯ ಸಿನಿಮಾದಲ್ಲಿ ನಾಯಕರನ್ನ ಪರಿಚಯಿಸೋ ಕೆಲ್ಸಕ್ಕೆ ಆಮೀರ್‌ ಖಾನ್‌ ಗ್ರೀನ್‌ ಸಿಗ್ನಲ್‌ ನೀಡಿದ್ದಾರಂತೆ. ಈಗಾಗ್ಲೇ ಬಾಲಿವುಡ್‌ ನಟ ಅಜೇಯ್‌ ದೇವಗನ್‌ ಹಾಗೂ ಆಲಿಯಾ ಭಟ್‌ ನಟಿಸ್ತಿದ್ದಾರೆ. ಈಗ ಆಮೀರ್‌ ಖಾನ್ ಕೂಡ ಆರ್‌ಆರ್‌ಆರ್‌ ತಂಡ ಸೇರಿದ್ದಾರೆ. ಇದೆಲ್ಲಾ ಮಾಹಿತಿ ಒಂದು ಕಡೆಯಾದ್ರೆ ಸದ್ಯ ಸಿನಿಮಾದ ಗ್ರಾಫಿಕ್ಸ್‌ಗಾಗಿ ಚಿತ್ರತಂಡ ಖರ್ಚು ಮಾಡ್ತಿರೋ ಮೊತ್ತ ಎಲ್ಲರನ್ನೂ ಬೆರಗುಗೊಳಿಸಲಿದ್ಯಂತೆ. ಆದ್ರೆ, ಇದ್ರ ಪರಿಣಾಮ ತೆರೆಮೇಲೆ ಒಂದು ಅದ್ಭುತ ದೃಶ್ಯ ವೈಭವ ಕಟ್ಟಿಕೊಡೋಕೆ ತಯಾರಾಗಿದೆ ಆರ್‌ಆರ್‌ಆರ್ ತಂಡ.

ಈಗಾಗ್ಲೇ ಆರ್‌ಆರ್‌ಆರ್‌ ಸಿನಿಮಾವನ್ನ ಬರೋಬ್ಬರಿ 400 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡ್ತಿದೆ ಚಿತ್ರತಂಡ. ವಿಶೇಷ ಅಂದ್ರೆ ಆರ್‌ಆರ್‌ಆರ್‌ ಸಿನಿಮಾದ ಶೂಟಿಂಗ್‌ ಗಿಂತ ಗ್ರಾಫಿಕ್ಸ್‌ಗೇ ಅತಿಹೆಚ್ಚು ಹಣ ಖರ್ಚಾಗಲಿದ್ಯಂತೆ. ಸದ್ಯ ಈ ಸುದ್ದಿ ಭಾರಿ ಸಂಚಲನ ಸೃಷ್ಟಿಸಿದೆ. ಮೊದಲೇ ರಾಜಮೌಳಿ ತಮ್ಮ ಕಲ್ಪನೆಯಂತೆ ಕೆತ್ತಿರೋ ಕಥೆ ಅಚ್ಚುಕಟ್ಟಾಗಿ ತೆರೆ ಮೇಲೆ ಮೂಡೋಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳೋ ನಿರ್ದೇಶಕ. ಹೀಗಾಗಿ ಈಗ ಗ್ರಾಫಿಕ್ಸ್‌ ವಿಚಾರವಾಗಿ ಸಿನಿಮಾ ಮೇಲಿನಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಒಟ್ಟಿನಲ್ಲಿ ಆರ್‌ಆರ್‌ಆರ್‌ ಐತಿಹಾಸಿಕ ಸಿನಿಮಾಗಾಗಿ ನುರಿತ ತಂತ್ರಜ್ಞರ ತಂಡ ಕೆಲಸ ಮಾಡ್ತಿದೆ. ಆದ್ರೆ ಗ್ರಾಫಿಕ್ಸ್‌ಗಾಗಿ ಸುರೀತಿರೋ ಹಣ ಎಷ್ಟು ಅನ್ನೋದನ್ನ ಮಾತ್ರ ಚಿತ್ರತಂಡ ರಿವೀಲ್‌ ಮಾಡಿಲ್ಲ.

ರಾಜಮೌಳಿಯ RRR ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟನೆ? ಪಾತ್ರ ಯಾವುದು?

ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ