AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರೀಯ ಹೆಣ್ಣುಮಕ್ಕಳ‌ ದಿನ: ಕ್ಷಯ ರೋಗ ತಗುಲಿದ ಬಾಲಕಿಗೆ ದೊಡ್ಡಪ್ಪನೇ ಶತ್ರುವಾದ, ಅರಿವು ಮೂಡಿಸಲು ಮುಂದಾದ NGO..!

ಬಾಲಕಿಯ ಮನೆ ಕಸಿದುಕೊಂಡ ದೊಡ್ಡಪ್ಪ ಈಕೆ ಹಾಗೂ ತಾಯಿಯನ್ನು ಹೊರಗೆ ಹಾಕಿದ್ದಾನೆ. ಈ ಬಾಲಕಿ ಬಳಿ ಚಿಕ್ಕ ಮಕ್ಕಳು ಹೋಗದಂತೆ ಮಾಡಿ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾನೆ..

ರಾಷ್ಟ್ರೀಯ ಹೆಣ್ಣುಮಕ್ಕಳ‌ ದಿನ: ಕ್ಷಯ ರೋಗ ತಗುಲಿದ ಬಾಲಕಿಗೆ ದೊಡ್ಡಪ್ಪನೇ ಶತ್ರುವಾದ, ಅರಿವು ಮೂಡಿಸಲು ಮುಂದಾದ NGO..!
ಪೃಥ್ವಿಶಂಕರ
| Edited By: |

Updated on: Jan 24, 2021 | 1:17 PM

Share

ಬಾಗಲಕೋಟೆ: ಕ್ಷಯರೋಗ ಎಂಬುದು ಮಾರಣಾಂತಿಕ ಕಾಯಿಲೆ ಅಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದರೆ ಸರಳವಾಗಿ ವಾಸಿಯಾಗುತ್ತದೆ. ಆದರೆ ಜಿಲ್ಲೆಯಲ್ಲಿ ಈ ಕಾಯಿಲೆಗೆ ಒಳಗಾದ ಕೆಲವು ಬಾಲಕಿಯರು ನರಕಯಾತನೆ ಪಡುತ್ತಿದ್ದಾರೆ. ಕಾಯಿಲೆಯ ನೋವಿಗಿಂತಲೂ, ಸಮಾಜದವರು ತಮ್ಮನ್ನು ನಡೆಸಿಕೊಳ್ಳುವ ರೀತಿಯನ್ನು ಸಹಿಸಲಾಗದೆ ಕಂಗೆಟ್ಟಿದ್ದಾರೆ.

ಬಾಗಲಕೋಟೆಯ ಕೆಲವು ಗ್ರಾಮಗಳಲ್ಲಿ ಹಲವು ಬಾಲಕಿಯರಿಗೆ  ತಂದೆ-ತಾಯಿಯಿಂದಲೋ, ಇತರೆ ಯಾವುದೋ ಕಾರಣದಿಂದಲೋ ಕ್ಷಯರೋಗ ಅಂಟಿಕೊಂಡಿದೆ. ಚಿಕ್ಕ ವಯಸ್ಸಿನಲ್ಲಿಯೇ ಕ್ಷಯ ಇವರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದೆ. ಚಿಕಿತ್ಸೆ ಪಡೆದು ಬಹುತೇಕರು ಶೇ.90ರಷ್ಟು ಗುಣಮುಖರಾಗಿದ್ದಾರೆ. ಆದರೆ ಕ್ಷಯ ರೋಗದಿಂದ ತಾವು ಪಟ್ಟ ಕಷ್ಟ, ಅಕ್ಕಪ್ಪಕ್ಕದವರಿಂದ ಅನುಭವಿಸಿದ ನೋವು, ಮುಜುಗರವನ್ನು, ರಾಷ್ಟ್ರೀಯ ಹೆಣ್ಣುಮಕ್ಕಳ ದಿನವಾದ ಇಂದು ಎನ್​ಜಿಒ ಒಂದರ ಎದುರು ಅಳುತ್ತಲೇ ಹೊರಹಾಕಿದ್ದಾರೆ.

ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾರೆ..

ಹಾಗೆ ನೋವು ಹೇಳಿಕೊಂಡ ಬಾದಾಮಿ ತಾಲೂಕಿನ ಹಳ್ಳಿಯೊಂದರ ಬಾಲಕಿಯ ಕತೆ ನಿಜಕ್ಕೂ ಮನಕಲಕುವಂತಿದೆ. ಈಕೆ ತನ್ನ ದೊಡ್ಡಪ್ಪನಿಂದಲೇ ಮಾನಸಿಕ ಹಿಂಸೆಗೆ ಒಳಗಾದವಳು.  ಬಾಲಕಿಯ ಮನೆ ಕಸಿದುಕೊಂಡ ದೊಡ್ಡಪ್ಪ, ಈಕೆ ಹಾಗೂ ತಾಯಿಯನ್ನು ಹೊರಗೆ ಹಾಕಿದ್ದಾನೆ. ಈ ಬಾಲಕಿ ಬಳಿ ಚಿಕ್ಕ ಮಕ್ಕಳು ಹೋಗದಂತೆ ಮಾಡಿ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ನೆರೆಹೊರೆಯವರು ಇವರ ಹತ್ತಿರ ಸುಳಿಯದಂತೆ ನೋಡಿಕೊಂಡು ಸಾಕಷ್ಟು ಅಪಮಾನ ಮಾಡಿದ್ದಾರೆ ಎಂದು ಬಾಲಕಿ ಕಣ್ಣೀರು ಹಾಕಿದ್ದಾಳೆ.

ಜಾಗೃತಿಗೆ ಮುಂದಾದ ಎನ್​ಜಿಒ

ಬಾಗಲಕೋಟೆಯ ವಿವಿಧ ಗ್ರಾಮಗಳಲ್ಲಿ ಹಲವು ಬಡ ಬಾಲಕಿಯರು ಕ್ಷಯ ರೋಗಕ್ಕೆ ತುತ್ತಾಗಿದ್ದಾರೆ. ಅದರಲ್ಲೂ 10-17ವರ್ಷಗಳವರೆಗಿನ ಬಾಲಕಿಯರಲ್ಲೇ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಂತವರಿಗೆ ಸಾಂತ್ವನ ಹೇಳಿ, ಅವರಲ್ಲಿ ಅರಿವು ಮೂಡಿಸಲು ಕರ್ನಾಟಕ ಹೆಲ್ತ್ ಪ್ರೊಮೊಷನ್ ಟ್ರಸ್ಟ್ NGO ಮುಂದಾಗಿದೆ. ಇಂದು ಜನವರಿ 24 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾಗಿದ್ದು,  ಕ್ಷಯದಿಂದ ಬಳಲುತ್ತ, ನೆರೆಹೊರೆಯವರಿಂದ ಅವಮಾನಕ್ಕೆ ಒಳಗಾಗಿರುವ ಬಾಲಕಿಯರಿಗೆ ಎನ್​ಜಿಒ ಸಿಬ್ಬಂದಿ ಸಾಂತ್ವನ ಹೇಳಿದ್ದಾರೆ. ಹಾಗೇ, ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಿದ್ದಾರೆ. ಕ್ಷಯ ಬಂದಿದೆ ಎಂಬ ಮಾತ್ರಕ್ಕೆ ಕೆಲವೆಡೆ ಬಹಿಷ್ಕಾರದಂತ ಶಿಕ್ಷೆಯನ್ನೂ ನೀಡಲಾಗುತ್ತಿದೆ. ಇದು ಸರಿಯಲ್ಲ. ಕ್ಷಯ ರೋಗಿಗಳಿಗೆ ಧೈರ್ಯ ಹೇಳುವ ಕಾರ್ಯ ಆಗಬೇಕು ಎಂದು ಎನ್​ಜಿಒ ಹೇಳಿದೆ.

Photos ಉತ್ತಮ ಸಮಾಜಕ್ಕಾಗಿ ಕೈ ಜೋಡಿಸಿದ ಕೋನಸಾಗರದ ಯುವಪಡೆ.. ನೀವೂ ಕಣ್ತುಂಬಿಕೊಳ್ಳಿ!

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ