AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾಳೆ ಮಾರ್ಕೆಟ್ ಬಂದ್ ಮಾಡುವಂತಿಲ್ಲ, ಬಂದ್ ಮಾಡಿಸುವವರ ಮೇಲೆ ಕ್ರಿಮಿನಲ್ ಕೇಸ್’

ಬೆಂಗಳೂರು: ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಐಕ್ಯ ಹೋರಾಟ ಸಮಿತಿಯಿಂದ ನಾಳೆ ಕರ್ನಾಟಕ ಬಂದ್​ಗೆ ಮುಂದಾಗಿದೆ. ರೈತರ ಹೋರಾಟಕ್ಕೆ ಬೀದಿಬದಿ ವ್ಯಾಪಾರಿಗಳ ಸಂಘ ಕೂಡ ಸಾಥ್ ನೀಡಿದೆ. ಆದರೆ ಯಾವ ಮಾರ್ಕೆಟ್​ಗಳನ್ನೂ ಬಂದ್ ಮಾಡುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಖಡಕ್ ಸೂಚನೆ ನೀಡಿದ್ದಾರೆ. ಸೋಮವಾರದ ಕರ್ನಾಟಕ ಬಂದ್​ಗೆ ವ್ಯಾಪಾರಿಗಳಿಂದ ಸಂಪೂರ್ಣ ಬೆಂಬಲ ಸಿಕ್ಕಿತ್ತು. ರೈತರ ಬೆಳೆ ಇಲ್ಲಾ ಅಂದ್ರೆ ವ್ಯಾಪಾರಿಗಳೂ ಇಲ್ಲ ಎಂದು ಸ್ವಇಚ್ಛೆಯಿಂದ ಮಾರ್ಕೆಟ್​ ಬಂದ್​ಗೆ ವ್ಯಾಪಾರಿಗಳು ನಿರ್ಧರಿಸಿದ್ರು. ಆದರೆ ಬಿಬಿಎಂಪಿ ಆಯುಕ್ತ […]

'ನಾಳೆ ಮಾರ್ಕೆಟ್ ಬಂದ್ ಮಾಡುವಂತಿಲ್ಲ, ಬಂದ್ ಮಾಡಿಸುವವರ ಮೇಲೆ ಕ್ರಿಮಿನಲ್ ಕೇಸ್'
ಆಯೇಷಾ ಬಾನು
ಆಯೇಷಾ ಬಾನು|

Updated on: Sep 27, 2020 | 1:57 PM

Share

ಬೆಂಗಳೂರು: ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಐಕ್ಯ ಹೋರಾಟ ಸಮಿತಿಯಿಂದ ನಾಳೆ ಕರ್ನಾಟಕ ಬಂದ್​ಗೆ ಮುಂದಾಗಿದೆ. ರೈತರ ಹೋರಾಟಕ್ಕೆ ಬೀದಿಬದಿ ವ್ಯಾಪಾರಿಗಳ ಸಂಘ ಕೂಡ ಸಾಥ್ ನೀಡಿದೆ. ಆದರೆ ಯಾವ ಮಾರ್ಕೆಟ್​ಗಳನ್ನೂ ಬಂದ್ ಮಾಡುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಖಡಕ್ ಸೂಚನೆ ನೀಡಿದ್ದಾರೆ.

ಸೋಮವಾರದ ಕರ್ನಾಟಕ ಬಂದ್​ಗೆ ವ್ಯಾಪಾರಿಗಳಿಂದ ಸಂಪೂರ್ಣ ಬೆಂಬಲ ಸಿಕ್ಕಿತ್ತು. ರೈತರ ಬೆಳೆ ಇಲ್ಲಾ ಅಂದ್ರೆ ವ್ಯಾಪಾರಿಗಳೂ ಇಲ್ಲ ಎಂದು ಸ್ವಇಚ್ಛೆಯಿಂದ ಮಾರ್ಕೆಟ್​ ಬಂದ್​ಗೆ ವ್ಯಾಪಾರಿಗಳು ನಿರ್ಧರಿಸಿದ್ರು. ಆದರೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಯಾವ ಮಾರ್ಕೆಟ್​ಗಳನ್ನು ಬಂದ್ ಮಾಡುವಂತಿಲ್ಲ ಎಂದು ವಾರ್ನಿಂಗ್ ಮಾಡಿದ್ದಾರೆ. ಬಲವಂತವಾಗಿ ಬಂದ್ ಮಾಡಲು ಬಂದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಸೂಚಿಸಿದ್ದಾರೆ.

ಕೆಲ ಕನ್ನಡ ಪರ ಸಂಘಟನೆಗಳು ನಗರದಲ್ಲಿರುವ ಮಾರ್ಕೆಟ್​ಗಳನ್ನ ಬಂದ್ ಮಾಡುವ ಪ್ಲಾನ್ ಮಾಡಿಕೊಂಡಿವೆ. ಹೀಗಾಗಿ ಅವರ ಪ್ರಯತ್ನ ಸಫಲವಾಗಬಾರದೆಂದು ಇಂತಹ ನಿರ್ಧಾರಕ್ಕೆ ಬಿಬಿಎಂಪಿ ಆಯುಕ್ತರು ಮುಂದಾಗಿದ್ದಾರೆ. ನಾಳೆ ಯಾವುದೇ ಮಾರುಕಟ್ಟೆಗಳನ್ನ ಕ್ಲೋಸ್ ಮಾಡಬೇಡಿ. ಎಲ್ಲಾ ಮಾರ್ಕೆಟ್​ಗಳನ್ನ ಓಪನ್ ಮಾಡಿ ಎಂದು ವ್ಯಾಪಾರಿಗಳಿಗೆ ಸೂಚಿಸಿದ್ದಾರೆ.

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.