AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟಿ-ಸಿಮ್ಲಾ-ಮನಾಲಿಯಂತೆ ಕಚಗುಳಿ ಇಡುತ್ತಿದೆಯಂತೆ ಬೆಂಗಳೂರು!

ರಾಜಧಾನಿ ಬೆಂಗಳೂರಿನ ಜನತೆ ಬೆಳಗಿನ ಆಹ್ಲಾದಕರ ವಾತಾವರಣ ನೋಡಿ ಆನಂದ ತುಂದಿಲಿತರಾಗಿದ್ದಾರೆ. ಕಳೆದುಹೋದ pensioners’ paradise ಗೆ ಮೂರೇ ಗೇಣು ಎಂದು ವಾತಾವರಣಕ್ಕೆ ಮಾರುಹೋಗಿದ್ದಾರೆ. ವಿಷಯ ಏನು ಅಂದ್ರೆ ಅತ್ತ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದು, ಮೂರು ದಶಕಗಳಲ್ಲಿಯೇ ಮೊದಲ ಬಾರಿಗೆ ಅತ್ಯಂತ ಶೀತಗಾಳಿ ನಗರದಲ್ಲಿ ಮನೆ ಮಾಡಿದೆ. ಇದರಿಂದ ಜನ ಮನೆಗಳಲ್ಲಿ ಬೆಚ್ಚಗಿದ್ದಾರೆ. ಇನ್ನು, ವರ್ಕ್ ಫ್ರಮ್ ಹೋಮ್ ಡ್ಯೂಟಿಯಿಂದ ಹೊರಬಂದು ಅನಿವಾರ್ಯವಾಗಿ ಕಚೇರಿಗಳತ್ತ ಹೊರಟ ಉದ್ಯೋಗಿಗಳು ಒಂದಷ್ಟು ಮಳೆ ಅವಾಂತರದಿಂದ ಬೇಸರದಲ್ಲಿದ್ದಾರೆ. ಇನ್ನೂ ಮೂರು […]

ಊಟಿ-ಸಿಮ್ಲಾ-ಮನಾಲಿಯಂತೆ ಕಚಗುಳಿ ಇಡುತ್ತಿದೆಯಂತೆ ಬೆಂಗಳೂರು!
ಸಾಧು ಶ್ರೀನಾಥ್​
| Edited By: |

Updated on: Oct 22, 2020 | 10:50 AM

Share

ರಾಜಧಾನಿ ಬೆಂಗಳೂರಿನ ಜನತೆ ಬೆಳಗಿನ ಆಹ್ಲಾದಕರ ವಾತಾವರಣ ನೋಡಿ ಆನಂದ ತುಂದಿಲಿತರಾಗಿದ್ದಾರೆ. ಕಳೆದುಹೋದ pensioners’ paradise ಗೆ ಮೂರೇ ಗೇಣು ಎಂದು ವಾತಾವರಣಕ್ಕೆ ಮಾರುಹೋಗಿದ್ದಾರೆ.

ವಿಷಯ ಏನು ಅಂದ್ರೆ ಅತ್ತ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದು, ಮೂರು ದಶಕಗಳಲ್ಲಿಯೇ ಮೊದಲ ಬಾರಿಗೆ ಅತ್ಯಂತ ಶೀತಗಾಳಿ ನಗರದಲ್ಲಿ ಮನೆ ಮಾಡಿದೆ. ಇದರಿಂದ ಜನ ಮನೆಗಳಲ್ಲಿ ಬೆಚ್ಚಗಿದ್ದಾರೆ. ಇನ್ನು, ವರ್ಕ್ ಫ್ರಮ್ ಹೋಮ್ ಡ್ಯೂಟಿಯಿಂದ ಹೊರಬಂದು ಅನಿವಾರ್ಯವಾಗಿ ಕಚೇರಿಗಳತ್ತ ಹೊರಟ ಉದ್ಯೋಗಿಗಳು ಒಂದಷ್ಟು ಮಳೆ ಅವಾಂತರದಿಂದ ಬೇಸರದಲ್ಲಿದ್ದಾರೆ.

ಇನ್ನೂ ಮೂರು ದಿನಗಳ ಕಾಲ ಇದೇ ಅಲಬೇಲಾ ಮೌಸಂ ಬೆಂಗಳೂರಿಗರಿಗೆ ಮುದನೀಡಲಿದೆ ಎನ್ನುತ್ತಿದೆ ಹವಾಮಾನ ಇಲಾಖೆ ಮೂಲಗಳು. ಇಡೀ ಬೆಂಗಳೂರಿಗೆ ತುಸು ಹೆಚ್ಚೇ ಎ.ಸಿ. ಹಾಕಿದಂತಿದೆ. ಅಲ್ಲಲ್ಲಿ ಮಂಜು ಆವರಿಸಿದೆ. ಇದರಿಂದ ಈ ಬಾರಿ ಮಂಜಿನ ಕಾಲ ಬೇಗನೇ ಬಂತಾ ಅಂತಾ ಜನ ಉದ್ಘರಿಸುತ್ತಿದ್ದಾರೆ.

ಕೊರೊನಾ ಕಾಟದಿಂದ ಮುದುಡಿದ ಮನಸುಗಳಿಗೆ ಮುದ ನೀಡುತ್ತಿದೆ ಈ ವಾತಾವರಣ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಲಬೇಲಾ ಮೌಸಂ ಬಗ್ಗೆ ತಮ್ಮ ಅನುಭವಗಳನ್ನು ದಾಖಲಿಸುತ್ತಿದ್ದಾರೆ.

ಈ ಪರಿಸ್ಥಿತಿಯಲ್ಲಿ ನಾವು ಅಲ್ಲಿಗೆ ಹೋಗೋಕ್ಕೆ ಆಗೋಲ್ಲ ಅಂತಾ ದೇವರು ಬೆಂಗಳೂರನ್ನೇ ಊಟಿ-ಸಿಮ್ಲಾ-ಮನಾಲಿ ಮಾಡಿಬಿಟ್ಟಿದ್ದಾನೆ ಎಂದು ಹಸನ್ಮುಖರಾಗಿದ್ದಾರೆ.

ಏನೇ ಆಗಲಿ ಮೊನ್ನೆ ಪ್ರಧಾನಿ ಮೋದಿ ಹೇಳಿದಂತೆ ಕೊರೊನಾ ಹೊರಟುಹೋಗಿದೆ ಅಂತಾ ಮೈಮರೆಯುವುದು ಬೇಡ. ಮಹಾಮಾರಿ ಬಗ್ಗೆ ನಮ್ಮ ಜಾಗ್ರತೆಯಲ್ಲಿ ನಾವಿರುವುದು ಕ್ಷೇಮ. ಏಕೆಂದ್ರೆ ಈ ವಾತಾವರಣ ಕೊರೊನಾಗೆ ಹೇಳಿ ಮಾಡಿಸಿದಂತಿದೆ. ಹಾಗಾಗಿ ಎಚ್ಚರಿಕೆಯ ಮಧ್ಯೆ ಎಂಜಾಯ್ ಮಾಡಿ..

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ