AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡಗದ್ದವಳ್ಳಿ ಕಾಳಿ ವಿಗ್ರಹ ಹಾನಿ ಪ್ರಕರಣ: ವಿವರಣೆ ಕೇಳಿದ ಪ್ರಧಾನಿ ಕಚೇರಿ

ಹಾಸನ: ದೊಡ್ಡಗದ್ದವಳ್ಳಿ ಲಕ್ಷ್ಮೀ ದೇಗುಲದ ಕಾಳಿ ವಿಗ್ರಹ ಹಾನಿ ಪ್ರಕರಣಕ್ಕೆ ಸಂಬಂಧಿಸಿ ಘಟನೆ ಬಗ್ಗೆ ಮಾಹಿತಿ ನೀಡುವಂತೆ ಪ್ರಧಾನಮಂತ್ರಿ ಕಾರ್ಯಾಲಯ ರಾಜ್ಯ ಪುರಾತತ್ವ ಇಲಾಖೆಗೆ ತಿಳಿಸಿದೆ ಎಂದು ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಹಾಸನ ತಾಲೂಕಿನ ಐತಿಹಾಸಿಕ ಪುರಾತನ, ಶಕ್ತಿ ದೇವತೆಯ ದೇಗುಲದಲ್ಲಿ ಕಾಳಿ ವಿಗ್ರಹ ಹಾನಿಯಾಗಿದೆ. ಈಗ ಈ ಪ್ರಕರಣ ಪಿಎಂಒ ಕಚೇರಿ ತಲುಪಿದೆ. ಈ ಬಗ್ಗೆ ಭಾರತ ಪುನರುತ್ಥಾನ ಟ್ರಸ್ಟ್​ ಪಿಎಂಒಗೆ ದೂರು ನೀಡಿತ್ತು. ಹೀಗಾಗಿ ಪ್ರದಾನಿ ಕಛೇರಿ ಮಾಹಿತಿ ಕೇಳಿದೆ. ಹೀಗಾಗಿ […]

ದೊಡ್ಡಗದ್ದವಳ್ಳಿ ಕಾಳಿ ವಿಗ್ರಹ ಹಾನಿ ಪ್ರಕರಣ: ವಿವರಣೆ ಕೇಳಿದ ಪ್ರಧಾನಿ ಕಚೇರಿ
ಆಯೇಷಾ ಬಾನು
|

Updated on: Nov 22, 2020 | 2:58 PM

Share

ಹಾಸನ: ದೊಡ್ಡಗದ್ದವಳ್ಳಿ ಲಕ್ಷ್ಮೀ ದೇಗುಲದ ಕಾಳಿ ವಿಗ್ರಹ ಹಾನಿ ಪ್ರಕರಣಕ್ಕೆ ಸಂಬಂಧಿಸಿ ಘಟನೆ ಬಗ್ಗೆ ಮಾಹಿತಿ ನೀಡುವಂತೆ ಪ್ರಧಾನಮಂತ್ರಿ ಕಾರ್ಯಾಲಯ ರಾಜ್ಯ ಪುರಾತತ್ವ ಇಲಾಖೆಗೆ ತಿಳಿಸಿದೆ ಎಂದು ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಹಾಸನ ತಾಲೂಕಿನ ಐತಿಹಾಸಿಕ ಪುರಾತನ, ಶಕ್ತಿ ದೇವತೆಯ ದೇಗುಲದಲ್ಲಿ ಕಾಳಿ ವಿಗ್ರಹ ಹಾನಿಯಾಗಿದೆ. ಈಗ ಈ ಪ್ರಕರಣ ಪಿಎಂಒ ಕಚೇರಿ ತಲುಪಿದೆ. ಈ ಬಗ್ಗೆ ಭಾರತ ಪುನರುತ್ಥಾನ ಟ್ರಸ್ಟ್​ ಪಿಎಂಒಗೆ ದೂರು ನೀಡಿತ್ತು. ಹೀಗಾಗಿ ಪ್ರದಾನಿ ಕಛೇರಿ ಮಾಹಿತಿ ಕೇಳಿದೆ. ಹೀಗಾಗಿ ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.

ಕಾಳಿದೇವಿ ವಿಗ್ರಹ ನೆಲಕ್ಕುರುಳಿ ಮೂರು ಭಾಗವಾಯ್ತು! ಒಂದಲ್ಲ.. ಎರಡಲ್ಲ.. ಬರೋಬ್ಬರಿ 906 ವರ್ಷಗಳ ಇತಿಹಾಸವಿರೋ ಪುರಾತನ ದೇಗುಲವಿದು. ಚಥುಷ್ಕೂಟ ಶೈಲಿಯಲ್ಲಿ ನಿರ್ಮಾಣವಾದ ದಕ್ಷಿಣಭಾರತದ ಮೊದಲ ಲಕ್ಷ್ಮೀ ದೇಗುಲ. ಬೆಳಗ್ಗೆ ಪೂಜೆಗೆಂದು ಅರ್ಚಕರು ಬಂದಾಗ ಕಾಳಿದೇವಿ ವಿಗ್ರಹವೇ ನೆಲಕ್ಕುರುಳಿ ಮೂರು ಭಾಗಗಳಾಗಿ ಒಡೆದು ಹೋಗಿತ್ತು. ತಾಯಿ ಮೂರ್ತಿ ಭಿನ್ನವಾಗಿರೋದ್ರ ಹಿಂದೆ ನಿಧಿಗಳ್ಳರು ಅಥವಾ ವಿಗ್ರಹವನ್ನೇ ಕದಿಯಲು ಬಂದವರ ಕೈವಾಡವಿರೋ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ಸ್ಥಳೀಯರು ಈ ವಿಗ್ರಹ ಮೊದ್ಲೇ ಅಲುಗಾಡ್ತಿತ್ತು ಅಂತಿದ್ದಾರೆ. ಹೀಗಾಗಿ ಎಲ್ಲಾ ಌಂಗಲ್​ನಲ್ಲೂ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಇನ್ನು ಈ ಕಾಳಿ ದೇಗುಲಕ್ಕೆ ಸಾಕಷ್ಟು ಇತಿಹಾಸವಿದ್ದು, ಹಲವು ವಿಶೇಷತೆಗಳಿವೆ. ದೇವಾಲಯದಲ್ಲಿ ನಾಲ್ಕು ಗರ್ಭಗುಡಿಗಳಿದ್ದು, ಕಾಳಿ ವಿಗ್ರಹದ ಮುಂದೆ ಕಾಲಭೈರವನ ವಿಗ್ರಹವೂ ಇದೆ. ಹಾಗೇ ಲಕ್ಷೀ ವಿಗ್ರಹದ ಮುಂದೆ ಶಿವನ ಲಿಂಗವಿದೆ. ಈರೀತಿ ಚತುಷ್ಕುಟ ದೇವಾಲಯ ದೇಶದಲ್ಲಿಯೇ ಬೇರೆಡೆ ಎಲ್ಲೂ ಇಲ್ಲ ಅನ್ನೋ ಮಾತಿದೆ. ಇಂತಹ ದೇವಾಲಯದಲ್ಲಿ ನಡೆದಿರುವ ಘಟನೆ ಭಕ್ತರನ್ನ ಮಾತ್ರವಲ್ದೇ ಧಾರ್ಮಿಕ ಚಿಂತಕರಿಗೂ ನೋವುಂಟು ಮಾಡಿದೆ.

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ