AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡಗದ್ದವಳ್ಳಿ ಕಾಳಿ ವಿಗ್ರಹ ಹಾನಿ ಪ್ರಕರಣ: ವಿವರಣೆ ಕೇಳಿದ ಪ್ರಧಾನಿ ಕಚೇರಿ

ಹಾಸನ: ದೊಡ್ಡಗದ್ದವಳ್ಳಿ ಲಕ್ಷ್ಮೀ ದೇಗುಲದ ಕಾಳಿ ವಿಗ್ರಹ ಹಾನಿ ಪ್ರಕರಣಕ್ಕೆ ಸಂಬಂಧಿಸಿ ಘಟನೆ ಬಗ್ಗೆ ಮಾಹಿತಿ ನೀಡುವಂತೆ ಪ್ರಧಾನಮಂತ್ರಿ ಕಾರ್ಯಾಲಯ ರಾಜ್ಯ ಪುರಾತತ್ವ ಇಲಾಖೆಗೆ ತಿಳಿಸಿದೆ ಎಂದು ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಹಾಸನ ತಾಲೂಕಿನ ಐತಿಹಾಸಿಕ ಪುರಾತನ, ಶಕ್ತಿ ದೇವತೆಯ ದೇಗುಲದಲ್ಲಿ ಕಾಳಿ ವಿಗ್ರಹ ಹಾನಿಯಾಗಿದೆ. ಈಗ ಈ ಪ್ರಕರಣ ಪಿಎಂಒ ಕಚೇರಿ ತಲುಪಿದೆ. ಈ ಬಗ್ಗೆ ಭಾರತ ಪುನರುತ್ಥಾನ ಟ್ರಸ್ಟ್​ ಪಿಎಂಒಗೆ ದೂರು ನೀಡಿತ್ತು. ಹೀಗಾಗಿ ಪ್ರದಾನಿ ಕಛೇರಿ ಮಾಹಿತಿ ಕೇಳಿದೆ. ಹೀಗಾಗಿ […]

ದೊಡ್ಡಗದ್ದವಳ್ಳಿ ಕಾಳಿ ವಿಗ್ರಹ ಹಾನಿ ಪ್ರಕರಣ: ವಿವರಣೆ ಕೇಳಿದ ಪ್ರಧಾನಿ ಕಚೇರಿ
ಆಯೇಷಾ ಬಾನು
|

Updated on: Nov 22, 2020 | 2:58 PM

Share

ಹಾಸನ: ದೊಡ್ಡಗದ್ದವಳ್ಳಿ ಲಕ್ಷ್ಮೀ ದೇಗುಲದ ಕಾಳಿ ವಿಗ್ರಹ ಹಾನಿ ಪ್ರಕರಣಕ್ಕೆ ಸಂಬಂಧಿಸಿ ಘಟನೆ ಬಗ್ಗೆ ಮಾಹಿತಿ ನೀಡುವಂತೆ ಪ್ರಧಾನಮಂತ್ರಿ ಕಾರ್ಯಾಲಯ ರಾಜ್ಯ ಪುರಾತತ್ವ ಇಲಾಖೆಗೆ ತಿಳಿಸಿದೆ ಎಂದು ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಹಾಸನ ತಾಲೂಕಿನ ಐತಿಹಾಸಿಕ ಪುರಾತನ, ಶಕ್ತಿ ದೇವತೆಯ ದೇಗುಲದಲ್ಲಿ ಕಾಳಿ ವಿಗ್ರಹ ಹಾನಿಯಾಗಿದೆ. ಈಗ ಈ ಪ್ರಕರಣ ಪಿಎಂಒ ಕಚೇರಿ ತಲುಪಿದೆ. ಈ ಬಗ್ಗೆ ಭಾರತ ಪುನರುತ್ಥಾನ ಟ್ರಸ್ಟ್​ ಪಿಎಂಒಗೆ ದೂರು ನೀಡಿತ್ತು. ಹೀಗಾಗಿ ಪ್ರದಾನಿ ಕಛೇರಿ ಮಾಹಿತಿ ಕೇಳಿದೆ. ಹೀಗಾಗಿ ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.

ಕಾಳಿದೇವಿ ವಿಗ್ರಹ ನೆಲಕ್ಕುರುಳಿ ಮೂರು ಭಾಗವಾಯ್ತು! ಒಂದಲ್ಲ.. ಎರಡಲ್ಲ.. ಬರೋಬ್ಬರಿ 906 ವರ್ಷಗಳ ಇತಿಹಾಸವಿರೋ ಪುರಾತನ ದೇಗುಲವಿದು. ಚಥುಷ್ಕೂಟ ಶೈಲಿಯಲ್ಲಿ ನಿರ್ಮಾಣವಾದ ದಕ್ಷಿಣಭಾರತದ ಮೊದಲ ಲಕ್ಷ್ಮೀ ದೇಗುಲ. ಬೆಳಗ್ಗೆ ಪೂಜೆಗೆಂದು ಅರ್ಚಕರು ಬಂದಾಗ ಕಾಳಿದೇವಿ ವಿಗ್ರಹವೇ ನೆಲಕ್ಕುರುಳಿ ಮೂರು ಭಾಗಗಳಾಗಿ ಒಡೆದು ಹೋಗಿತ್ತು. ತಾಯಿ ಮೂರ್ತಿ ಭಿನ್ನವಾಗಿರೋದ್ರ ಹಿಂದೆ ನಿಧಿಗಳ್ಳರು ಅಥವಾ ವಿಗ್ರಹವನ್ನೇ ಕದಿಯಲು ಬಂದವರ ಕೈವಾಡವಿರೋ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ಸ್ಥಳೀಯರು ಈ ವಿಗ್ರಹ ಮೊದ್ಲೇ ಅಲುಗಾಡ್ತಿತ್ತು ಅಂತಿದ್ದಾರೆ. ಹೀಗಾಗಿ ಎಲ್ಲಾ ಌಂಗಲ್​ನಲ್ಲೂ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಇನ್ನು ಈ ಕಾಳಿ ದೇಗುಲಕ್ಕೆ ಸಾಕಷ್ಟು ಇತಿಹಾಸವಿದ್ದು, ಹಲವು ವಿಶೇಷತೆಗಳಿವೆ. ದೇವಾಲಯದಲ್ಲಿ ನಾಲ್ಕು ಗರ್ಭಗುಡಿಗಳಿದ್ದು, ಕಾಳಿ ವಿಗ್ರಹದ ಮುಂದೆ ಕಾಲಭೈರವನ ವಿಗ್ರಹವೂ ಇದೆ. ಹಾಗೇ ಲಕ್ಷೀ ವಿಗ್ರಹದ ಮುಂದೆ ಶಿವನ ಲಿಂಗವಿದೆ. ಈರೀತಿ ಚತುಷ್ಕುಟ ದೇವಾಲಯ ದೇಶದಲ್ಲಿಯೇ ಬೇರೆಡೆ ಎಲ್ಲೂ ಇಲ್ಲ ಅನ್ನೋ ಮಾತಿದೆ. ಇಂತಹ ದೇವಾಲಯದಲ್ಲಿ ನಡೆದಿರುವ ಘಟನೆ ಭಕ್ತರನ್ನ ಮಾತ್ರವಲ್ದೇ ಧಾರ್ಮಿಕ ಚಿಂತಕರಿಗೂ ನೋವುಂಟು ಮಾಡಿದೆ.

Follow Us
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ": ಪ್ರಹ್ಲಾದ್ ಜೋಶಿ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಆರ್​​ಸಿಬಿ ಸೋಲಿಗೆ ಕಾರಣರಾದ ಕನ್ನಡಿಗ ಕೆಎಲ್ ರಾಹುಲ್
ಆರ್​​ಸಿಬಿ ಸೋಲಿಗೆ ಕಾರಣರಾದ ಕನ್ನಡಿಗ ಕೆಎಲ್ ರಾಹುಲ್