AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prashanth Sambargi: ಪ್ರಶಾಂತ್​ ಸಂಬರಗಿಯನ್ನು ಜೈಲಿಗೆ ಕಳುಹಿಸಿ: ಬಿಗ್ ಬಾಸ್​ ಎದುರು ಹೊಸ ಬೇಡಿಕೆ ಇಟ್ಟ ನಿಧಿ ಸುಬ್ಬಯ್ಯ

ಪ್ರಶಾಂತ್​ ಅವರನ್ನು ಈ ಜೈಲಿಗೆ ಹಾಕಿ ಎನ್ನುವ ಬೇಡಿಕೆ ನಿಧಿ ಅವರದ್ದು. ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

Prashanth Sambargi: ಪ್ರಶಾಂತ್​ ಸಂಬರಗಿಯನ್ನು ಜೈಲಿಗೆ ಕಳುಹಿಸಿ: ಬಿಗ್ ಬಾಸ್​ ಎದುರು ಹೊಸ ಬೇಡಿಕೆ ಇಟ್ಟ ನಿಧಿ ಸುಬ್ಬಯ್ಯ
ರಾಜೇಶ್ ದುಗ್ಗುಮನೆ
|

Updated on: Mar 04, 2021 | 12:45 PM

Share

ಬಿಹ್​ ಬಾಸ್​ ಮನೆ ಒಳಗೆ ತೆರಳಿರುವ 17 ಸ್ಪರ್ಧಿಗಳ ಅಸಲಿ ಮುಖ ಈಗ ಬಯಲಾಗುತ್ತಿದೆ. ಕೆಲವರು ತುಂಬಾನೇ ಸಾಫ್ಟ್​ ತರ ಕಂಡರೂ ಮನೆ ಒಳಗೆ ಸಖತ್​ ರಫ್​-ಆ್ಯಂಡ್​ ಟಫ್​. ಮನೆ ಹೊರಗೆ ತುಂಬಾನೇ ಅಬ್ಬರ ಮಾಡಿದವರು ಮನೆ ಒಳಗೆ ತುಂಬಾನೇ ಸೈಲೆಂಟ್​. ಆದರೆ, ಮನೆ ಒಳಗೂ ಹೊರಗೂ ಒಂದೇ ತರ ಇದ್ದವರು ಪ್ರಶಾಂತ್​ ಸಂಬರಗಿ. ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗಿದ್ದ ಅವರು, ಈಗ ಮನೆ ಒಳಗೂ ಜಗಳಕ್ಕೆ ಕಾರಣರಾಗುತ್ತಿದ್ದಾರೆ. ಅವರನ್ನು ಮನೆ ಒಳಗೆ ಇರುವ ಜೈಲಿಗೆ ಕಳುಹಿಸುವಂತೆ ನಿಧಿ ಸುಬ್ಬಯ್ಯ ಆಗ್ರಹಿಸಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಜೈಲು ಇರುವ ವಿಚಾರ ಗೊತ್ತೇ ಇದೆ. ಏನಾದರೂ ತಪ್ಪು ಮಾಡಿದರೆ ಅಥವಾ ಬಿಗ್​ ಬಾಸ್​ ನಿಯಮಗಳನ್ನು ಪಾಲನೆ ಮಾಡದೆ ಇದ್ದರೆ ಈ ಜೈಲಿನೊಳಗೆ ಹಾಕಲಾಗುತ್ತದೆ. ಬಿಗ್​ ಬಾಸ್​ ಮನೆಯೇ ಒಂದು ಜೈಲಿನ ರೀತಿ ಇದ್ದರೆ, ಅದಕ್ಕೂ ಒಂದು ಹೆಜ್ಜೆ ಮುಂದೆ ಎಂಬಂತಿದೆ ಈ ಜೈಲು. ಪ್ರಶಾಂತ್​ ಅವರನ್ನು ಈ ಜೈಲಿಗೆ ಹಾಕಿ ಎನ್ನುವ ಬೇಡಿಕೆ ನಿಧಿ ಅವರದ್ದು. ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಿಧಿ ಹಾಗೂ ಅರವಿಂದ್​ ನಿನ್ನೆ ಕ್ಯಾಮೆರಾ ಎದುರು ಬಂದಿದ್ದರು. ಈ ವೇಳೆ, ನನಗೆ ಸ್ವಿಮ್ಮಿಂಗ್​ ಫೂಲ್​ನ ಟಾಸ್ಕ್​ ಮಾಡಿ ನೆಗಡಿ ಆಗಿದೆ. ಕಾಫಿ ಕುಡಿಯೋಣ ಎಂದರೆ ಕಾಫಿ ಪೌಡರ್​ ಇಲ್ಲ. ಪ್ರಶಾಂತ್​ ಅವರು ಕಾಫಿ ಪೌಡರ್​ ಖಾಲಿ ಮಾಡಿದ್ದಾರೆ. ಅಗತ್ಯ ಬಿದ್ದರೆ ಅವರನ್ನು ಜೈಲಿಗೆ ಹಾಕಿ. ನಮಗೆ ಕಾಫಿ ಪೌಡರ್​ ಕಳುಹಿಸಿ ಎಂದಿದ್ದಾರೆ.

ಒಂದೊಮ್ಮೆ ನಿಧಿ ಇಟ್ಟ ಬೇಡಿಕೆ ಪ್ರಶಾಂತ್​ ಅವರಿಗೆ ಗೊತ್ತಾದರೆ ಬಿಗ್ ಬಾಸ್​ ಮನೆಯಲ್ಲಿ ದೊಡ್ಡ ಜಗಳ ನಡೆಯೋದು ಗ್ಯಾರಂಟಿ. ನಿನ್ನೆ ನಡೆದ ಸಣ್ಣ ವಿಚಾರಕ್ಕೆ ಬ್ರೋ ಗೌಡ ಜತೆ ಪ್ರಶಾಂತ್​ ಕಾಲ್ಕೆರುದುಕೊಂಡು ಜಗಳಕ್ಕೆ ಹೋಗಿದ್ದರು. ಹೀಗಿರುವಾಗ ನಿಧಿ ತಮ್ಮನ್ನು ಜೈಲಿಗೆ ಕಳುಹಿಸುವಂತೆ ಕೋರಿದ್ದು ಗೊತ್ತಾದರೆ ಪ್ರಶಾಂತ್​ ಮತ್ತೆ ಕೂಗಾಡುವುದರಲ್ಲಿ  ಅನುಮಾನವಿಲ್ಲ.

ಇದನ್ನೂ ಓದಿ: BBK8: ಬಿಗ್​ ಬಾಸ್​ ಮೊದಲ ವಾರದಲ್ಲಿ ಹೊರ ಹೋಗೋದು ಶುಭಾ ಪೂಂಜಾ? ಮೂರನೇ ದಿನ ಹೊಸ ಟ್ವಿಸ್ಟ್​

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ