
ಹಾಸನ: ನಗರದಲ್ಲಿ ಮೃತ ಸೋಂಕಿತರ ಶವಸಂಸ್ಕಾರಕ್ಕೂ ಸಂಕಷ್ಟ ಎದುರಾಗಿದೆ. ನಿತ್ಯ ಮೃತಪಡುತ್ತಿರುವ ಸೋಂಕಿತರ ಹತ್ತಾರು ಶವಸಂಸ್ಕಾರದಿಂದ ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸ್ಥಳೀಯರು ಪ್ರತಿಭಟನೆಗೆ ಮುಂದಾದರು. ಕೂಡಲೇ ಚಿತಾಗಾರವನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.
ಕೊರೊನಾದಿಂದ ಜಿಲ್ಲೆಯಲ್ಲಿ ನಿತ್ಯ ಐವರು ಮೃತಪಡುತ್ತಿದ್ದಾರೆ. ಜೊತೆಗೆ, ಇತರೆ ಕಾರಣದಿಂದ ಮೃತಪಟ್ಟವರನ್ನು ಸುಡಬೇಕಾದ ಪರಿಸ್ಥಿತಿಯಿದೆ. ಏಕಕಾಲದಲ್ಲಿ ಹತ್ತಾರು ಶವಸಂಸ್ಕಾರ ನಡೆಸುತ್ತಿರುವುದರಿಂದ ಜನರಿಗೆ ಸಮಸ್ಯೆಯಾಗಿದೆ. ಕೂಡಲೇ ಸ್ಮಶಾನ ಸ್ಥಳಾಂತರ ಮಾಡುವಂತೆ ಸ್ಮಶಾನ ಬಳಿಯ KHB ಬಡಾವಣೆ ನಿವಾಸಿಗಳಿಂದ ಪ್ರತಿಭಟನೆ ನಡೆದಿದೆ.