AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MES, ಶಿವಸೇನೆ ಪುಂಡಾಟ.. ಡಿಸಿ ಮಾತಿಗೆ ಅಡ್ಡಿಪಡಿಸಿ ಹಿಂದಿಯಲ್ಲಿ ಮಾತನಾಡುವಂತೆ ಆಗ್ರಹ, 6 ಮಂದಿ ಪೊಲೀಸ್​ ವಶಕ್ಕೆ

ಕೈಯಲ್ಲಿ ಧ್ವಜಸ್ತಂಭ ಹಿಡಿದು ಮಹಾನಗರ ಪಾಲಿಕೆ ಕಚೇರಿಯತ್ತ ಧಾವಿಸುತ್ತಿದ್ದ ಎಂಇಎಸ್ ನಾಯಕಿಯರಾದ ರೇಣು ಕಿಲ್ಲೇಕರ್, ಸರಿತಾ ಪಾಟೀಲ್ ಸೇರಿ 6 ಜನರನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

MES, ಶಿವಸೇನೆ ಪುಂಡಾಟ.. ಡಿಸಿ ಮಾತಿಗೆ ಅಡ್ಡಿಪಡಿಸಿ ಹಿಂದಿಯಲ್ಲಿ ಮಾತನಾಡುವಂತೆ ಆಗ್ರಹ, 6 ಮಂದಿ ಪೊಲೀಸ್​ ವಶಕ್ಕೆ
MES, ಶಿವಸೇನೆ ಪ್ರತಿಭಟನೆ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Mar 08, 2021 | 5:16 PM

Share

ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ ನಾಡದ್ರೋಹಿ MES, ಶಿವಸೇನೆ ಕ್ಯಾತೆ ತೆಗೆದಿದೆ. ಬೆಳಗಾವಿ ಪಾಲಿಕೆ ಮುಂಭಾಗದ ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ MES ಜಿಲ್ಲಾಧ್ಯಕ್ಷ ದೀಪಕ್ ದಳವಿ ನೇತೃತ್ವದಲ್ಲಿ ರ್ಯಾಲಿ ಹಮ್ಮಿಕೊಂಡಿದ್ದು ಬೆಳಗಾವಿ ಮಹಾನಗರ ಪಾಲಿಕೆ ಎದುರು ಭಗವಾ ಧ್ವಜ ನೆಡಲು ತೆರಳುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೈಯಲ್ಲಿ ಧ್ವಜಸ್ತಂಭ ಹಿಡಿದು ಮಹಾನಗರ ಪಾಲಿಕೆ ಕಚೇರಿಯತ್ತ ಧಾವಿಸುತ್ತಿದ್ದ ಎಂಇಎಸ್ ನಾಯಕಿಯರಾದ ರೇಣು ಕಿಲ್ಲೇಕರ್, ಸರಿತಾ ಪಾಟೀಲ್ ಸೇರಿ 6 ಜನರನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಒಂದೆಡೆ ಸರ್ದಾರ್ ಮೈದಾನದ ಎದುರು MES, ಶಿವಸೇನೆ ಪುಂಡರ ಪ್ರತಿಭಟನೆ ನಡೆಯುತ್ತಿದ್ದು ಮತ್ತೊಂದೆಡೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಭಗವಾ ಧ್ವಜ ನೆಡಲು ಯತ್ನ ನಡೆಯುತ್ತಿದೆ. ಈ ವೇಳೆ ಮಹಿಳಾ ನಾಯಕಿಯರನ್ನು ಮುಂದೆ ಬಿಟ್ಟು ಭಗವಾ ಧ್ವಜ ನೆಡಲು ಎಂಇಎಸ್, ಶಿವಸೇನೆ ಮುಂದಾಗಿದೆ. ಮಾರ್ಕೆಟ್ ಠಾಣೆ ಎಸಿಪಿ ಸದಾಶಿವ ಕಟ್ಟಿಮನಿ ಜೊತೆ ಮಹಿಳೆಯರು ವಾಗ್ವಾದ ನಡೆಸಿದ್ದು 6 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದವರನ್ನು ಮಾಳಮಾರುತಿ ಠಾಣೆಗೆ ಕರೆದೊಯ್ಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಮಹಾನಗರ ಪಾಲಿಕೆ ಎದುರು ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಡಿಸಿ ಮಾತಿಗೆ ಅಡ್ಡಿಪಡಿಸಿ ಹಿಂದಿಯಲ್ಲಿ ಮಾತನಾಡುವಂತೆ ಆಗ್ರಹ ಇನ್ನು ಮನವಿ ಸ್ವೀಕರಿಸಲು ಬಂದ ಡಿಸಿ ಎಂ.ಜಿ.ಹಿರೇಮಠ ಎದುರೇ MES, ಶಿವಸೇನೆ ಉದ್ಧಟತನ ಪ್ರದರ್ಶಿಸಿದೆ. ಮನವಿ ಸ್ವೀಕರಿಸಲು ಬಂದಾಗ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಕನ್ನಡದಲ್ಲಿ ಮಾತು ಶುರು ಮಾಡಿದ್ರು. ಈ ವೇಳೆ MES, ಶಿವಸೇನೆ ಅವರ ಮಾತಿಗೆ ಅಡ್ಡಿ ಪಡಿಸಿ ಪುಂಡಾಟ ಮೆರೆದಿದ್ದಾರೆ. ಮರಾಠಿ ಇಲ್ಲವೇ ಹಿಂದಿಯಲ್ಲಿ ಡಿಸಿ ಮಾತನಾಡಲಿ ಎಂದು ಉದ್ಧಟತನ ತೋರಿದ್ದಾರೆ. ನಾಡದ್ರೋಹಿಗಳ ಒತ್ತಾಯಕ್ಕೆ ಮಣಿದು ಹಿಂದಿಯಲ್ಲಿ ಮಾತನಾಡಿದ ಡಿಸಿ ಎಂ.ಜಿ.ಹಿರೇಮಠ ಬೆಳಗಾವಿಯಲ್ಲಿ ಕನ್ನಡ ಮರಾಠಿಗರು ಸಹೋದರರಂತೆ ಸಹಬಾಳ್ವೆ ಮಾಡುತ್ತಿದ್ದಾರೆ.

ಪಾಲಿಕೆ ಮುಂದಿನ‌ ಧ್ವಜದ ವಿಚಾರ ಕನ್ನಡ ಸಂಘಟನೆಗಳ ಜೊತೆಗೆ ಚರ್ಚಿಸಿ ತೀರ್ಮಾನ ಮಾಡುವೆ ಎಂದ ಡಿಸಿ ಭರವಸೆ ನೀಡಿದ್ದಾರೆ. ಆದ್ರೆ ಡಿಸಿ ಭರವಸೆಗೆ ಒಪ್ಪದೇ ಕನ್ನಡ ಧ್ವಜ ತೆರವುಗೊಳಿಸುವಂತೆ ನಾಡದ್ರೋಹಿಗಳು ಆಗ್ರಹಿಸಿದ್ದಾರೆ. ಡಿಸಿ ಮನವಿ ಸ್ವೀಕರಿಸಿ ಹೋದರೂ ರಸ್ತೆ ಮೇಲೆ ಕುಳಿತು MES, ಶಿವಸೇನೆ ಪ್ರತಿಭಟನೆ ನಡೆಸಿದ್ದು ಪೊಲೀಸರು ಹರಸಾಹಸದಿಂದ ಪ್ರತಿಭಟನಾ ನಿರತ MES ಪುಂಡರನ್ನು ಚದುರಿಸಿದೆ.

MES and Shiv sena Protest

ಎಂಇಎಸ್ ನಾಯಕಿಯರಾದ ರೇಣು ಕಿಲ್ಲೇಕರ್, ಸರಿತಾ ಪಾಟೀಲ್ ಸೇರಿ 6 ಜನ ವಶಕ್ಕೆ

ಇದನ್ನೂ ಓದಿ: Shiv Sena ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರಿಂದ ಕನ್ನಡ ವಿರೋಧಿ ಘೋಷಣೆ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!