Sign In

By signing in or creating an account, you agree with Associated Broadcasting Company's Terms & Conditions and Privacy Policy.

2ಎಕರೆ 31ಗುಂಟೆಗಾಗಿ.. ಕ್ರೂಸರ್​ನಿಂದ ಗುದ್ದಿಸಿ, ಮಚ್ಚಿನಿಂದ ಕೊಚ್ಚಿ ಮಾವನ ಕೊಲೆಗೈದ ಅಳಿಯ

ಯಾದಗಿರಿ: 2 ಎಕರೆ 31 ಗುಂಟೆ ಜಮೀನಿಗಾಗಿ ವ್ಯಕ್ತಿಯೊಬ್ಬನನ್ನು ಆತನ ಅಳಿಯನೇ ಕೊಲೆಗೈದಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ತಡರಾತ್ರಿ ರಂಗಯ್ಯ(55) ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಂಗಯ್ಯನ ಅಳಿಯ ಶರಣಗೌಡ ಮತ್ತು ಆತನ ಸೋದರ ವಿಠ್ಠಲ್​ ಈ ಕೃತ್ಯ ಎಸಗಿದ ಆರೋಪಿಗಳು. ಮಾವ ರಂಗಯ್ಯನ ಆಸ್ತಿ ಲಪಟಾಯಿಸಲು ಶರಣಗೌಡ ಮೊದಲು ಆತನಿಗೆ ಕ್ರೂಸರ್​ನಿಂದ ಡಿಕ್ಕಿ ಹೊಡೆಸಿ ಬಳಿಕ ಮಚ್ಚಿನಿಂದ ಕೊಚ್ಚಿ ಕೊಚ್ಚಿ ಕೊಲೆಗೈದಿದ್ದಾನೆ. ನಂತರ, ಇವರಿಬ್ಬರೂ ಪೊಲೀಸರಿಗೆ ಶರಣಾಗಿದ್ದಾರೆ. ಹತ್ಯೆಯಾದ […]

2ಎಕರೆ 31ಗುಂಟೆಗಾಗಿ.. ಕ್ರೂಸರ್​ನಿಂದ ಗುದ್ದಿಸಿ, ಮಚ್ಚಿನಿಂದ ಕೊಚ್ಚಿ ಮಾವನ ಕೊಲೆಗೈದ ಅಳಿಯ
ಪ್ರಾತಿನಿಧಿಕ ಚಿತ್ರ
Follow us
KUSHAL V
|

Updated on:Nov 26, 2020 | 1:35 PM

ಯಾದಗಿರಿ: 2 ಎಕರೆ 31 ಗುಂಟೆ ಜಮೀನಿಗಾಗಿ ವ್ಯಕ್ತಿಯೊಬ್ಬನನ್ನು ಆತನ ಅಳಿಯನೇ ಕೊಲೆಗೈದಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ತಡರಾತ್ರಿ ರಂಗಯ್ಯ(55) ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ರಂಗಯ್ಯನ ಅಳಿಯ ಶರಣಗೌಡ ಮತ್ತು ಆತನ ಸೋದರ ವಿಠ್ಠಲ್​ ಈ ಕೃತ್ಯ ಎಸಗಿದ ಆರೋಪಿಗಳು. ಮಾವ ರಂಗಯ್ಯನ ಆಸ್ತಿ ಲಪಟಾಯಿಸಲು ಶರಣಗೌಡ ಮೊದಲು ಆತನಿಗೆ ಕ್ರೂಸರ್​ನಿಂದ ಡಿಕ್ಕಿ ಹೊಡೆಸಿ ಬಳಿಕ ಮಚ್ಚಿನಿಂದ ಕೊಚ್ಚಿ ಕೊಚ್ಚಿ ಕೊಲೆಗೈದಿದ್ದಾನೆ. ನಂತರ, ಇವರಿಬ್ಬರೂ ಪೊಲೀಸರಿಗೆ ಶರಣಾಗಿದ್ದಾರೆ.

ಹತ್ಯೆಯಾದ ರಂಗಯ್ಯ ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದ ನಿವಾಸಿ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 1:31 pm, Thu, 26 November 20