ನಟ ಚೇತನ್​ ಬಹುಶಃ ಪ್ರಧಾನಿ ಮೋದಿ ಬಗ್ಗೆ ಮಾತ್ನಾಡಿರಬೇಕು: ಸುದೀಪ್​ ಹೀಗ್ಯಾಕಂದ್ರು?

ತುಮಕೂರು: ನಟ ಚೇತನ್ ಟ್ವಿಟ್ ಬಗ್ಗೆ ಪ್ರತಿಕ್ರಿಯಿಸಿರೋ ನಟ ಕಿಚ್ಚ ಸುದೀಪ್​ ಬಹುಶಃ ಅವರು (ಚೇತನ್) ಪ್ರಧಾನಿ ಮೋದಿ ಬಗ್ಗೆ ಮಾತಾಡಿರಬೇಕು ಎಂದು ಲೇವಡಿ ಮಾಡಿದ್ದಾರೆ. ರಮ್ಮಿ ಆಡೋರು, ಗುಟ್ಕಾ ತಿನ್ನೋರ ಬಗ್ಗೆ ಯಾರೂ ಹೇಳಲ್ಲ ಎಂದು ಟ್ವಿಟ್ ಮಾಡಿದ್ದ ನಟ ಚೇತನ್ ಅವರ ಮಾತಿಗೆ ಸುದೀಪ್​ ಹೀಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ‘ಜೂಜು-ಮದ್ಯ-ಗುಟ್ಕಾ ಜಾಹೀರಾತು ನೀಡುವ Starಗಳದ್ದೂ ದುಷ್ಕೃತ್ಯ ಅಲ್ಲವೇ?’ ನಾಳೆ‌ ನನ್ನ‌ ಹುಟ್ಟುಹಬ್ಬ ಇರೋ ಪ್ರಯುಕ್ತ ಮಠಕ್ಕೆ ಬಂದಿದ್ದೇನೆ. ನನ್ನ ಕೈಯಲ್ಲಿ ಆದ […]

ನಟ ಚೇತನ್​ ಬಹುಶಃ ಪ್ರಧಾನಿ ಮೋದಿ ಬಗ್ಗೆ ಮಾತ್ನಾಡಿರಬೇಕು: ಸುದೀಪ್​ ಹೀಗ್ಯಾಕಂದ್ರು?

Updated on: Sep 01, 2020 | 2:55 PM

ತುಮಕೂರು: ನಟ ಚೇತನ್ ಟ್ವಿಟ್ ಬಗ್ಗೆ ಪ್ರತಿಕ್ರಿಯಿಸಿರೋ ನಟ ಕಿಚ್ಚ ಸುದೀಪ್​ ಬಹುಶಃ ಅವರು (ಚೇತನ್) ಪ್ರಧಾನಿ ಮೋದಿ ಬಗ್ಗೆ ಮಾತಾಡಿರಬೇಕು ಎಂದು ಲೇವಡಿ ಮಾಡಿದ್ದಾರೆ.

ರಮ್ಮಿ ಆಡೋರು, ಗುಟ್ಕಾ ತಿನ್ನೋರ ಬಗ್ಗೆ ಯಾರೂ ಹೇಳಲ್ಲ ಎಂದು ಟ್ವಿಟ್ ಮಾಡಿದ್ದ ನಟ ಚೇತನ್ ಅವರ ಮಾತಿಗೆ ಸುದೀಪ್​ ಹೀಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ‘ಜೂಜು-ಮದ್ಯ-ಗುಟ್ಕಾ ಜಾಹೀರಾತು ನೀಡುವ Starಗಳದ್ದೂ ದುಷ್ಕೃತ್ಯ ಅಲ್ಲವೇ?’

ನಾಳೆ‌ ನನ್ನ‌ ಹುಟ್ಟುಹಬ್ಬ ಇರೋ ಪ್ರಯುಕ್ತ ಮಠಕ್ಕೆ ಬಂದಿದ್ದೇನೆ. ನನ್ನ ಕೈಯಲ್ಲಿ ಆದ ಕೊಡುಗೆ ನೀಡಬೇಕು ಅನ್ನೋ ಆಸೆಯಿಂದ ಮಠಕ್ಕೆ ಬಂದಿದ್ದೇನೆ. ಈ ಬಾರಿ ಸರಳವಗಾಗಿ ನನ್ನ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದೇನೆ. ಅಭಿಮಾನಿಗಳು ಯಾರೂ ಮನೆ ಬಳಿ ಬರೋದು ಬೇಡ. ಅಲ್ಲಿ ಸೇರಿದ್ರೇ ಎಲ್ರೂ ಹತ್ತಿರನೇ ನಿಲ್ಲುತ್ತಾರೆ. ವಾಪಸ್ ಮನೆಗಳಿಗೆ ಸುರಕ್ಷಿತವಾಗಿ ಹೋಗ್ತಾರೆ ಅನ್ನೋ ನಂಬಿಕೇನು ನನಗಿಲ್ಲಾ ಎಂದು ತಮ್ಮ ಹುಟ್ಟುಹಬ್ಬದ ಬಗ್ಗೆ ಸುದೀಪ್​ ಹೇಳಿದ್ದಾರೆ.

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಮಾಫಿಯಾ ನಂಟು ವಿಚಾರವಾಗಿ ಮಾತನಾಡಿದ ಸುದೀಪ್​ ಅದರ ಕುರಿತಾಗಿ ನಾನು ಮಠದಲ್ಲಿ ಮಾತಾಡೋದಿಲ್ಲ. ಇಂದ್ರಜಿತ್ ನನಗೆ ತುಂಬಾ ವರ್ಷದ ಪರಿಚಯ. ಸಿನಿಮಾ ರಂಗಕ್ಕೆ ಬರೋ ಮೊದಲಿನಿಂದಲೂ ಒಟ್ಟಿಗೆದ್ದೇವೆ. ಅವರೊಟ್ಟಿಗೆ ಕಾಣಿಸಿಕೊಂಡ ಮಾತ್ರಕ್ಕೇ ಏನು ಆಗಿಲ್ಲ. ಅವರ ಒಳ್ಳೆ ಕೆಲ್ಸ, ಕೆಟ್ಟ ಕೆಲ್ಸ ಎಲ್ಲದ್ರಲ್ಲೂ ನಾನು ಭಾಗಿ ಆಗಿದ್ದೀನಿ ಅಂತಾನಾ ಎಂದು ಸುದೀಪ್​ ಪ್ರತಿಕ್ರಿಯಿಸಿದ್ದಾರೆ.

Published On - 2:40 pm, Tue, 1 September 20

Loading...
Unable to load recommendations.
Follow Us