AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಅಪಸ್ವರ: ಆನ್​ಲೈನ್​ನಲ್ಲಿ ಸಂಗೀತ ಅಭ್ಯಾಸ ಆಗ್ತಿದ್ಯಾ ಕ್ಲಿಷ್ಟಕರ?

ಸಂಗೀತ, ನೃತ್ಯ ಮೊದಲಾದವುಗಳು ಮಾನವನ ಮನಸ್ಸಿಗೆ ಚೈತನ್ಯವನ್ನು ನೀಡುತ್ತದೆ. ಅದೆಷ್ಟೋ ರೋಗಗಳಿಂದ ಚೇತರಿಸಿಕೊಳ್ಳಲು ಸಂಗೀತ ನೆರವಾಗಿದೆ.

ಕೊರೊನಾ ಅಪಸ್ವರ: ಆನ್​ಲೈನ್​ನಲ್ಲಿ ಸಂಗೀತ ಅಭ್ಯಾಸ ಆಗ್ತಿದ್ಯಾ ಕ್ಲಿಷ್ಟಕರ?
ಆನ್​ಲೈನ್​ ಸಂಗೀತದ ಕ್ಲಾಸ್​
shruti hegde
| Edited By: |

Updated on:Nov 24, 2020 | 5:12 PM

Share

ಕಲೆ ಮತ್ತು ಸಂಸ್ಕೃತಿಗೆ ಹೆಸರಾಗಿರುವ ದೇಶ ಅಂದರೆ ನಮ್ಮ ಭಾರತ. ಸಂಗೀತ, ನೃತ್ಯ ಮೊದಲಾದವುಗಳು ಮಾನವನ ಮನಸ್ಸಿಗೆ ಚೈತನ್ಯವನ್ನು ನೀಡುತ್ತದೆ. ಅದೆಷ್ಟೋ ರೋಗಗಳಿಂದ ಚೇತರಿಸಿಕೊಳ್ಳಲು ಸಂಗೀತ ನೆರವಾಗಿದೆ. ಕೊರೊನಾ ಹಾವಳಿ ಜಾಸ್ತಿಯಾಗುತ್ತಿದ್ದಂತೆ ಲಾಕ್​ಡೌನ್ ಜಾರಿಗೊಳಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕಾಯಿತು. ಇದರಿಂದ ಸಂಗೀತದ ವಿದ್ಯಾರ್ಥಿಗಳ ಕಲಿಕೆ ಅರ್ಧದಲ್ಲೇ ನಿಂತು ಹೋಯ್ತು. ಗುರು ಶಿಷ್ಯರು ಏಕಾಗ್ರತೆಯಿಂದ ಕೂತು ತಾಳ, ಲಯ, ಶೃತಿಯೊಡನೆ ಧ್ವನಿ ಹೊರಡಿಸುವ ಬದಲು ಮೊಬೈಲ್ ಎದುರು ಕೂರಬೇಕಾಗಿರುವುದು ವಿಷಾದನೀಯ.

ಆನ್​ಲೈನ್ ಸಂಗೀತ ಶಿಕ್ಷಣ ಪದ್ಧತಿ : 1. ಗುರು ಶಿಷ್ಯ ಪರಂಪರೆ: ಸಂಗೀತದಲ್ಲಿ ಶಿಷ್ಯರು ಗುರುವಿನ ಎದುರು  ಕೂತು ಅವರು ಹೇಳಿಕೊಟ್ಟಂತೆ  ಅಭ್ಯಾಸಮಾಡುವ ಪದ್ಧತಿ ಇದೆ. ಗುರು ಹೇಳಿಕೊಟ್ಟಂತೆ ತಾಳ, ಲಯ, ಶೃತಿಬದ್ಧವಾಗಿ ಶಿಷ್ಯರು ಸಂಗೀತ ಅಭ್ಯಾಸ ಮಾಡಬೇಕು. ಆದರೆ, ಕೊರೊನಾದಿಂದಾಗಿ ಈ ರೀತಿಯ ಮಾರ್ಗದರ್ಶನಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ.

2. ಆನ್​ಲೈನ್ ಸಂಗೀತ ಶಾಲೆ: ಆನ್​ಲೈನ್​ ಮೂಲಕ ಸಂಗೀತ ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಪರಿಸ್ಥಿತಿ ಎದುರಾಗಿದೆ. ಸಂಗೀತವು ಪದೇ ಪದೇ ಹಾಡುತ್ತಾ, ಅಭ್ಯಾಸ ಮಾಡುತ್ತಾ ಗ್ರಹಿಸುವಂಥ ವಿದ್ಯೆ. ಹಾಗೂ ಪದಗಳ ಉಚ್ಛಾರಣೆಯ ಜೊತೆಗೆ, ಧ್ವನಿಯ ಧಾಟಿಯ ಏರಿಳಿತ ಸರಿಯಾಗಿರಬೇಕು. ಹಾಗಾಗಿ, ಆನ್​ಲೈನ್ ಸಂಗೀತ ಶಿಕ್ಷಣದಿಂದ ಸಂಗೀತಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ.

3. ಮಕ್ಕಳಲ್ಲಿ ಏಕಾಗ್ರತೆ ಕೊರತೆ: ನಿಷ್ಠೆಯಿಂದ ಗುರು ಹೇಳಿಕೊಡುವ ಶಿಕ್ಷಣವನ್ನು ಶಿಷ್ಯ ಪಾಲಿಸಬೇಕು. ಧ್ವನಿಗೆ ದನಿಗೂಡಿಸಿ ಹಾಡುತ್ತಾ ಸಂಗೀತಾಭ್ಯಾಸ ಮಾಡುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಮೂಡುತ್ತದೆ. ಆನ್ ಲೈನ್​ ವ್ಯವಸ್ಥೆಯಲ್ಲಿ ಮಕ್ಕಳು ಏಕಾಗ್ರತೆಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ.

4. ತಪ್ಪುಗಳನ್ನು ತಿದ್ದಿ ಹೇಳಿಕೊಡುವುದು ಕಷ್ಟ: ಪ್ರಾರಂಭಿಕ ಹಂತದ ಮಕ್ಕಳಲ್ಲಿ ಸರಿ ತಪ್ಪುಗಳನ್ನು ಆನ್​ಲೈನ್​ ಮೂಲಕ ಅರ್ಥ ಮಾಡಿಸುವುದು ಕಷ್ಟ. ಚಿಕ್ಕ ಮಕ್ಕಳು, ಶಿಕ್ಷಕರು ಹೇಳಿಕೊಡುವ ಸಂಗೀತ ಸ್ವರಗಳ ಧಾಟಿಗೆ ತಮ್ಮ ಧ್ವನಿಯನ್ನು ಶೃತಿಗೆ ಸರಿಯಾಗಿ ಹಾಡುವುದು ಆನ್​ಲೈನ್​ ಶಿಕ್ಷಣ ಪದ್ಧತಿಯಿಂದ ಕಷ್ಟವಾಗುತ್ತಿದೆ.

5. ಆನ್​ಲೈನ್​ ಶಿಕ್ಷಣ ಅನಿವಾರ್ಯ: ಮೊದಲಿಂದಲೂ ಗುರು ಶಿಷ್ಯ ಪರಂಪರೆಯ ಮೂಲಕ ಸಂಗೀತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಆನ್​ಲೈನ್​ ಶಿಕ್ಷಣ ಅನಿವಾರ್ಯವಾಗಿದೆ. ಜೊತೆಗೆ, ಸಂಗೀತದ ಹಿಡಿತವಿದ್ದ ಮಕ್ಕಳಿಗೆ ಆನ್​ಲೈನ್​ ವ್ಯವಸ್ಥೆಯಲ್ಲಿ ಅಭ್ಯಾಸಮಾಡುವುದು ನಿರಂತರತೆಯನ್ನು ಕೊಡುತ್ತದೆ. ಆದ್ದರಿಂದ, ವಿದ್ಯಾರ್ಥಿಗಳು ಈ ಪರಿಸ್ಥಿತಿಗೆ ಅನಿವಾರ್ಯ ಹೊಂದಿಕೊಳ್ಳಲೇ ಬೇಕಾಗಿದೆ.

ಕೊರೊನಾ ಕಾರಣದಿಂದಾಗಿ ಗುರು ಶಿಷ್ಯ ಪರಂಪರೆಯ ಕೊರತೆ ಉಂಟಾಗಿದೆ. ಆನ್​ಲೈನ್​ ಶಿಕ್ಷಣ ಪದ್ಧತಿಯಿಂದ ಸಂಗೀತಾಭ್ಯಾಸ ಕಷ್ಟಕರ. ಏಕೆಂದರೆ, ತಪ್ಪು-ಸರಿಗಳನ್ನು ಮಕ್ಕಳಿಗೆ ತಿದ್ದಿ ಹೇಳಿಕೊಡಲು ತೊಂದರೆಯಾಗುತ್ತಿದೆ. ಮೊದಲಿನಿಂದ ಸಂಗೀತಾಭ್ಯಾಸದಲ್ಲಿ ತೊಡಗಿದ್ದ ವಿದ್ಯಾರ್ಥಿಗಳಲ್ಲಿ ಆನ್​ಲೈನ್​ ಶಿಕ್ಷಣ ಪದ್ಧತಿ ಕಲಿಕೆಯಲ್ಲಿ ನಿರಂತರತೆಯನ್ನು ತಂದುಕೊಟ್ಟರೂ, ಪ್ರಾರಂಭಿಕ ಹಂತದ ವಿದ್ಯಾರ್ಥಿಗಳಿಗೆ ಆನ್​ಲೈನ್​ ವ್ಯವಸ್ಥೆ ಕಷ್ಟ. ಕೊರೊನಾ ಮಹಾಮಾರಿ ಬೇಗ ದೇಶದಿಂದ, ಇಡೀ ಪ್ರಪಂಚದಿಂದ ಹೊರಟು ಹೋಗಲಿ. ಮೊದಲಿನಂತೆಯೇ ಸಂಗೀತಾಭ್ಯಾಸವು ಪ್ರಾರಂಭವಾಗಲೀ ಎಂದು ಸಂಗೀತಗಾರ್ತಿ ಪ್ರತಿಮಾ ಸತೀಶ್ ಭಟ್ ಮಾಳ್​ಕೊಪ್ಪ ಅಭಿಪ್ರಾಯಪಟ್ಟಿದ್ದಾರೆ. ಶ್ರುತಿ ಹೆಗಡೆ. ಶಿರಸಿ

Published On - 5:11 pm, Tue, 24 November 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ