AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಂಡಿದ್ದು ನಾಟಿ ಮೊಟ್ಟೆ.. ಬೆಳೆದದ್ದು ಬ್ರಾಯ್ಲರ್ ಕೋಳಿ! ಕ್ಷಮೆಯಾಚಿಸಿದ ಪಶು ವೈದ್ಯಕೀಯ ಪ್ರಾಧ್ಯಾಪಕ

ಒಂದು ನಾಟಿ ಮೊಟ್ಟೆ ಕಥೆ.. ಪಶುವೈದ್ಯಕೀಯ ಕಾಲೇಜಿನ ಎಡವಟ್ಟಿನಿಂದ ನಾಟಿ ಮೊಟ್ಟೆ ಬ್ರಾಯ್ಲರ್ ಕೋಳಿಯಾಗಿ ಬೆಳೆದಿದೆ. ಇದರಿಂದ ರೈತನಿಗೆ ಮೋಸವಾಗಿದ್ದು ಸಾವಿರಾರು ರೂಪಾಯಿ ಲಾಸ್ ಆಗಿದ್ದರಿಂದ ರೈತ ಕಂಗಾಲಾಗಿದ್ದಾನೆ.

ಕೊಂಡಿದ್ದು ನಾಟಿ ಮೊಟ್ಟೆ.. ಬೆಳೆದದ್ದು ಬ್ರಾಯ್ಲರ್ ಕೋಳಿ! ಕ್ಷಮೆಯಾಚಿಸಿದ ಪಶು ವೈದ್ಯಕೀಯ ಪ್ರಾಧ್ಯಾಪಕ
ಕೊಂಡು ಹೋಗಿದ್ದು ನಾಟಿ ಮೊಟ್ಟೆ.. ಬೆಳೆದದ್ದು ಬ್ರಾಯ್ಲರ್ ಕೋಳಿ
ಆಯೇಷಾ ಬಾನು
ಆಯೇಷಾ ಬಾನು| Edited By: ಸಾಧು ಶ್ರೀನಾಥ್​|

Updated on:Nov 25, 2020 | 10:00 AM

Share

ಹಾಸನ: ಪಶು ವೈದ್ಯಕೀಯ ಕಾಲೇಜಿನ ಯಡವಟ್ಟಿನಿಂದ ನಾಟಿ ಕೋಳಿ ಮರಿ ಫಾರಂ ಕೋಳಿ ಮರಿಯಾಗಿ ಬದಲಾದ ಪ್ರಸಂಗ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಚನ್ನರಾಯಪಟ್ಟಣದ ಧರಣೀಶ್ ಎಂಬ ರೈತ 1 ಸಾವಿರ ನಾಟಿ ಮೊಟ್ಟೆಗಳನ್ನು ಖರೀದಿಸಿದ್ದ. ಬಳಿಕ ರೈತರಿಂದ ಖರೀದಿಸಿ ತಂದ ಮೊಟ್ಟೆಯನ್ನು ಮರಿ ಮಾಡಿ ರೈತರಿಗೆ ನೀಡೊ ಕುಕ್ಕುಟೋದ್ಯಮ ವಿಭಾಗಕ್ಕೆ ಖರೀದಿಸಿದ್ದ ಮೊಟ್ಟೆಗಳನ್ನು ನೀಡಿದ್ದ. ಬಳಿಕ ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರೊಫೆಸರ್ ಡಾ.ರುದ್ರಪ್ಪ ಮಾರ್ಗದರ್ಶನದಲ್ಲಿ ರೈತ ಧರಣೀಶ್ ತನ್ನ ಕೋಳಿ ಮರಿ ಪಡೆದು ಸಾಕಲು ಮುಂದಾಗಿದ್ದಾನೆ. ಈ ವೇಳೆ 400 ಕೋಳಿಗಳು ಮೃತಪಟ್ಟಿವೆ.

ಉಳಿದ 600 ಕೋಳಿಗಳು ಬ್ರಾಯ್ಲರ್ ಕೋಳಿಗಳಾಗಿವೆ. ಧರಣೀಶ್ ಕೊಂಡು ಹೋಗಿದ್ದು ನಾಟಿ ಮೊಟ್ಟೆ ಆದ್ರೆ ಬೆಳೆದದ್ದು ಬ್ರಾಯ್ಲರ್ ಕೋಳಿ. ಹೀಗಾಗಿ ಪಶು ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರ ಎಡವಟ್ಟಿನಿಂದ ರೈತನಿಗೆ ನಷ್ಟವಾಗಿದೆ. ಒಂದು ಮೊಟ್ಟೆಗೆ 32 ರೂಪಾಯಿ ನೀಡಿ ಖರೀದಿಸಲಾಗಿತ್ತು. ಶೆಡ್​ ನಿರ್ಮಾಣ, ಆಹಾರ ಖರೀದಿ, ನಿರ್ವಹಣೆಗೆ ಭಾರಿ ಖರ್ಚು ಆಗಿತ್ತು. ಆದರೆ ಪಶು ವೈದ್ಯಕೀಯ ಪ್ರಾಧ್ಯಾಪಕರ ಎಡವಟ್ಟಿನಿಂದ ರೈತರಿಗೆ ತೊಂದರೆಯಾಗಿದೆ. ಸಾವಿರಾರು ರೂಪಾಯಿ ಲಾಸ್ ಆಗಿದ್ದರಿಂದ ರೈತ ಕಂಗಾಲಾಗಿದ್ದಾನೆ.

ರೈತನಿಗೆ ಆದ ನಷ್ಟ ಭರಿಸುತ್ತೇವೆ: ರೈತನ ಆರೋಪಕ್ಕೆ ಸ್ಪಷ್ಟನೆ ನೀಡಿದ ಪಶು ವೈದ್ಯಕೀಯ ಪ್ರಾಧ್ಯಾಪಕ ಡಾ.ರುದ್ರಪ್ಪ, ರೈತನಿಗೆ ಆದ ನಷ್ಟ ಭರಿಸುತ್ತೇವೆ ಎಂದು ಹೇಳಿದ್ದಾರೆ. ಇದುವರೆಗೆ ಪಶು ವೈದ್ಯ ಕಾಲೇಜಿನಿಂದ 25 ರೈತರಿಗೆ ನಾಟಿ ಮೊಟ್ಟೆ ಮಾರಾಟ ಮಾಡಿದ್ರೂ ಮೋಸ ಆಗಿಲ್ಲ. ಬ್ರಾಯ್ಲರ್ ಮೊಟ್ಟೆಗಳನ್ನ ಟೀ ಡಿಕಾಕ್ಷನ್​ನಲ್ಲಿ ನೆನೆಸಿದ್ದರಿಂದ ಎಡವಟ್ಟಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡುತ್ತೇನೆ ಎಂದಿದ್ದಾರೆ.

Published On - 9:32 am, Wed, 25 November 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ