YN ಹೊಸಕೋಟೆ: ಮದ್ಯ ಮಾರಾಟ ಪ್ರಶ್ನಿಸಿದ್ದಕ್ಕೆ ಆಂಧ್ರ PSI ಮೇಲೆ ಹಲ್ಲೆ

ತುಮಕೂರು: ಆಂಧ್ರದ ಕಂಬದೂರು ಪಿಎಸ್‌ಐ ಹಾಗೂ ಸಿಬ್ಬಂದಿ ಮೇಲೆ ಜಾಲೋಡು ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆಂಧ್ರದ ಕಂಬದೂರು ಪಿಎಸ್​ಐ ಗೌಸ್ಪೀರ್ ಹಾಗೂ ಸಿಬ್ಬಂದಿ ಮೇಲೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಜಾಲೋಡು ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆಂಧ್ರಪ್ರದೇಶದ ಗ್ರಾಮಗಳಾದ ಓಬ್ಬಗಾನಪಲ್ಲಿ, ಮೂರಾಯನಪಲ್ಲಿ ಗ್ರಾಮಗಳಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಕೇಳಲು ಬಂದಿದ್ದಾಗ ನಾವು ಕರ್ನಾಟಕದಿಂದ ಮದ್ಯ ತಂದಿದ್ದೇವೆ ಎಂದು ಪಿಎಸ್‌ಐ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ […]

YN ಹೊಸಕೋಟೆ: ಮದ್ಯ ಮಾರಾಟ ಪ್ರಶ್ನಿಸಿದ್ದಕ್ಕೆ ಆಂಧ್ರ PSI ಮೇಲೆ ಹಲ್ಲೆ
Edited By:

Updated on: Aug 31, 2020 | 10:45 AM

ತುಮಕೂರು: ಆಂಧ್ರದ ಕಂಬದೂರು ಪಿಎಸ್‌ಐ ಹಾಗೂ ಸಿಬ್ಬಂದಿ ಮೇಲೆ ಜಾಲೋಡು ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆಂಧ್ರದ ಕಂಬದೂರು ಪಿಎಸ್​ಐ ಗೌಸ್ಪೀರ್ ಹಾಗೂ ಸಿಬ್ಬಂದಿ ಮೇಲೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಜಾಲೋಡು ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆಂಧ್ರಪ್ರದೇಶದ ಗ್ರಾಮಗಳಾದ ಓಬ್ಬಗಾನಪಲ್ಲಿ, ಮೂರಾಯನಪಲ್ಲಿ ಗ್ರಾಮಗಳಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು.

ಈ ಬಗ್ಗೆ ಕೇಳಲು ಬಂದಿದ್ದಾಗ ನಾವು ಕರ್ನಾಟಕದಿಂದ ಮದ್ಯ ತಂದಿದ್ದೇವೆ ಎಂದು ಪಿಎಸ್‌ಐ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ವಾಹನ ಭಾಗಶಃ ಜಖಂಗೊಂಡಿದೆ. ವೈ.ಎನ್. ಹೊಸಕೋಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Published On - 10:44 am, Mon, 31 August 20