AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಠೇವಣಿ ಇಡುವಾಗ ಎಂಥ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಬೇಕು: ಆತುರದ ನಿರ್ಧಾರ ಬೇಡ

ಖಾಸಗಿ  ಬ್ಯಾಂಕ್​ಗಳಲ್ಲಿ ಠೇವಣಿ ಇಡುವಾಗ ಎಚ್ಚರ ಇರಲಿ. ಶೇ 1 ಅಥವಾ 2 ರಷ್ಟು  ಬಡ್ಡಿ ಹೆಚ್ಚು ಕೊಡುತ್ತಿದ್ದರೂ ಆತುರದ ನಿರ್ಧಾರ ಮಾಡಬಾರದು. ಯೋಚಿಸಿ ಎಚ್ಚರಿಕೆಯಿಂದ ಹೆಜ್ಜೆಯಿಡಿ, ನಿಮ್ಮ ಹಣವನ್ನು ಜೋಪಾನವಾಗಿ ರಕ್ಷಿಸಿಕೊಳ್ಳಿ.

ಠೇವಣಿ ಇಡುವಾಗ ಎಂಥ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಬೇಕು: ಆತುರದ ನಿರ್ಧಾರ ಬೇಡ
ಹಿರಿಯ ಲೆಕ್ಕ ಪರಿಶೋಧಕ ವಿವೇಕ್ ಮಲ್ಯ
Lakshmi Hegde
| Edited By: |

Updated on:Nov 24, 2020 | 6:24 PM

Share

ಈಗಂತೂ ಬ್ಯಾಂಕ್​, ಕೋ-ಆಪರೇಟಿವ್​ ಸೊಸೈಟಿಗಳು, ಹಣಕಾಸು ಸಂಸ್ಥೆಗಳನ್ನು ನಂಬುವುದೇ ಕಷ್ಟ ಆಗತೊಡಗಿದೆ. ಹಾಗಂತ ಎಲ್ಲ ಬ್ಯಾಂಕ್​ಗಳೂ ಅಸಮರ್ಪಕವಾಗಿಯೇ ಕಾರ್ಯನಿರ್ವಹಿಸುತ್ತವೆ ಎಂದಲ್ಲ. ಆದರೆ ಇತ್ತೀಚೆಗಂತೂ ನಷ್ಟಕ್ಕೀಡಾದ, ಅವ್ಯವಹಾರ ನಡೆಸಿದ, ಗೋಲ್​ಮಾಲ್​ ಮಾಡಿ ಸಿಕ್ಕಿಬಿದ್ದ ಹಣಕಾಸು ಸಂಸ್ಥೆಗಳ ಸಂಖ್ಯ ಹೆಚ್ಚುತ್ತಿದೆ. ಅದರಲ್ಲೂ ವಾರದ ಹಿಂದೆ ಲಕ್ಷ್ಮೀ ವಿಲಾಸ ಬ್ಯಾಂಕ್​ ಮೇಲೆ ಆರ್​ಬಿಐ ಒಂದು ತಿಂಗಳ ನಿರ್ಬಂಧ ಹೇರಿ, ಠೇವಣಿ ದಾರರಿಗೆ ತಿಂಗಳಿಗೆ ₹ 25,000 ವಿತ್​ ಡ್ರಾ ಮಿತಿ ಹೇರಿದ ನಂತರ ಗ್ರಾಹಕರಿಗೆ ಸಹಜವಾಗಿಯೇ ಅಭದ್ರತೆ ಹೆಚ್ಚಾಗಿದೆ.

ಠೇವಣಿ ಇಡುವಾಗ ಬ್ಯಾಂಕ್​ಗಳ ಆಯ್ಕೆ ಹೇಗಿರಬೇಕು? ಹಣ ಡಿಪೋಸಿಟ್​​ ಇಡುವಾಗ ಆತುರದ ನಿರ್ಧಾರ ಮಾಡಬೇಡಿ ಎನ್ನುತ್ತಾರೆ ಹಿರಿಯ ಲೆಕ್ಕ ಪರಿಶೋಧಕ ವಿವೇಕ್​ ಮಲ್ಯ. ಟಿವಿ9 ಜೊತೆ ಫೇಸ್​ಬುಕ್​ ಲೈವ್​ ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದ ಕಾನೂನುಗಳು ಸಾಲ ಕೊಡುವವರ ವಿರುದ್ಧ ಹಾಗೂ ಸಾಲ ಪಡೆದವರ ಮೇಲಿನ ದಬ್ಬಾಳಿಕೆ ತಡೆಯುವುದಕ್ಕೋಸ್ಕರ ಇದೆ. ಆದರೆ ಠೇವಣಿ ಇಟ್ಟವರ ಭದ್ರತೆಗಾಗಿ ಯಾವುದೇ ಪ್ರಬಲ ಕಾನೂನುಗಳು ಇಲ್ಲ ಎಂದು ವಿಷಾದಿಸಿದರು.

ನಾವು ಬ್ಯಾಂಕ್​ ಮೇಲೆಯೇ ಅವಲಂಬಿತರಾಗಬೇಕಾಗುತ್ತದೆ. ನೀವು ಠೇವಣಿ ಇಟ್ಟ ಬ್ಯಾಂಕ್​ ಒಂದೊಮ್ಮೆ ಬಾಗಿಲು ಮುಚ್ಚಿದರೆ ನಿಮ್ಮ ಹಣಕ್ಕೆ ₹ 5 ಲಕ್ಷ ರೂ. ಇನ್ಶೂರೆನ್ಸ್​ ನೀಡಬೇಕು ಎಂಬ ನಿಯಮವಿದೆ. ಆದರೆ ಕಾನೂನು ಕ್ರಮಗಳೆಲ್ಲ ಮುಗಿದ ಮೇಲೆ ನಿಮ್ಮ ಹಣ ಕೈಗೆ ಸೇರುತ್ತದೆ. ನೀವು ಒಂದೇ ಬ್ಯಾಂಕ್​ನ ನಾಲ್ಕು ಬ್ರ್ಯಾಂಚ್​ಗಳಲ್ಲಿ ಠೇವಣಿ ಹಣ ಇಟ್ಟಿದ್ದರೆ ನಿಮಗೆ ಸಿಗುವ ಇನ್ಶೂರೆನ್ಸ್​ ಮಿತಿ ₹​ 5 ಲಕ್ಷ ಮಾತ್ರ. ಆದರೆ ನಾಲ್ಕು ಬೇರೆ ಬೇರೆ ಬ್ಯಾಂಕ್​ಗಳಲ್ಲೇ ಠೇವಣಿ ಇಟ್ಟು, ಆ ಬ್ಯಾಂಕ್​ಗಳಿಗೆ ತೊಂದರೆಯಾದರೆ ಪ್ರತಿ ಬ್ಯಾಂಕ್​ನಿಂದ ನಿಮ್ಮ ಠೇವಣಿಗೆ ತಲಾ ₹ 5 ಲಕ್ಷ ಇನ್ಶೂರೆನ್ಸ್​ ರಕ್ಷಣೆ ಇರುತ್ತದೆ. ನೀವು ಇರಿಸಿದ ಠೇವಣಿಯ ಮೊತ್ತ ₹ 5 ಲಕ್ಷಕ್ಕಿಂತಲೂ ಹೆಚ್ಚಾಗಿದ್ದರೂ ಠೇವಣಿಯ ಮಿತಿ ₹ 5 ಲಕ್ಷಕ್ಕೇ ಸೀಮಿತವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು ಎಂದು ಎಚ್ಚರಿಸುತ್ತಾರೆ ಅವರು.

ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಏನಾದರೂ ತೊಂದರೆಯಾದರೆ ಸರ್ಕಾರ ಮಧ್ಯ ಪ್ರವೇಶ ಮಾಡುತ್ತದೆ. ಕಾನೂನಿನ ಅನ್ವಯ ಕ್ರಮ ತೆಗೆದುಕೊಂಡು ಗ್ರಾಹಕರಿಗೆ ಮೋಸವಾಗದಂತೆ ನೋಡಿಕೊಳ್ಳುತ್ತದೆ. ಆದರೆ ಖಾಸಗಿ  ಬ್ಯಾಂಕ್​ಗಳಲ್ಲಿ ಠೇವಣಿ ಇಡುವಾಗ ಎಚ್ಚರ ಇರಲಿ. ಶೇ 1 ಅಥವಾ 2 ರಷ್ಟು  ಬಡ್ಡಿ ಹೆಚ್ಚು ಕೊಡುತ್ತಿದ್ದರೂ ಆತುರದ ನಿರ್ಧಾರ ಮಾಡಬಾರದು. ಈಗಿನ ದಿನಗಳಲ್ಲಂತೂ ಬ್ಯಾಂಕ್​ಗಳ ಆಯ್ಕೆ ಅತ್ಯಂತ ಮಹತ್ವ ಎಂದು ಹೇಳಿದರು.

ವಿಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Tue, 24 November 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ