AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಠೇವಣಿ ಇಡುವಾಗ ಎಂಥ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಬೇಕು: ಆತುರದ ನಿರ್ಧಾರ ಬೇಡ

ಖಾಸಗಿ  ಬ್ಯಾಂಕ್​ಗಳಲ್ಲಿ ಠೇವಣಿ ಇಡುವಾಗ ಎಚ್ಚರ ಇರಲಿ. ಶೇ 1 ಅಥವಾ 2 ರಷ್ಟು  ಬಡ್ಡಿ ಹೆಚ್ಚು ಕೊಡುತ್ತಿದ್ದರೂ ಆತುರದ ನಿರ್ಧಾರ ಮಾಡಬಾರದು. ಯೋಚಿಸಿ ಎಚ್ಚರಿಕೆಯಿಂದ ಹೆಜ್ಜೆಯಿಡಿ, ನಿಮ್ಮ ಹಣವನ್ನು ಜೋಪಾನವಾಗಿ ರಕ್ಷಿಸಿಕೊಳ್ಳಿ.

ಠೇವಣಿ ಇಡುವಾಗ ಎಂಥ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಬೇಕು: ಆತುರದ ನಿರ್ಧಾರ ಬೇಡ
ಹಿರಿಯ ಲೆಕ್ಕ ಪರಿಶೋಧಕ ವಿವೇಕ್ ಮಲ್ಯ
Lakshmi Hegde
| Edited By: |

Updated on:Nov 24, 2020 | 6:24 PM

Share

ಈಗಂತೂ ಬ್ಯಾಂಕ್​, ಕೋ-ಆಪರೇಟಿವ್​ ಸೊಸೈಟಿಗಳು, ಹಣಕಾಸು ಸಂಸ್ಥೆಗಳನ್ನು ನಂಬುವುದೇ ಕಷ್ಟ ಆಗತೊಡಗಿದೆ. ಹಾಗಂತ ಎಲ್ಲ ಬ್ಯಾಂಕ್​ಗಳೂ ಅಸಮರ್ಪಕವಾಗಿಯೇ ಕಾರ್ಯನಿರ್ವಹಿಸುತ್ತವೆ ಎಂದಲ್ಲ. ಆದರೆ ಇತ್ತೀಚೆಗಂತೂ ನಷ್ಟಕ್ಕೀಡಾದ, ಅವ್ಯವಹಾರ ನಡೆಸಿದ, ಗೋಲ್​ಮಾಲ್​ ಮಾಡಿ ಸಿಕ್ಕಿಬಿದ್ದ ಹಣಕಾಸು ಸಂಸ್ಥೆಗಳ ಸಂಖ್ಯ ಹೆಚ್ಚುತ್ತಿದೆ. ಅದರಲ್ಲೂ ವಾರದ ಹಿಂದೆ ಲಕ್ಷ್ಮೀ ವಿಲಾಸ ಬ್ಯಾಂಕ್​ ಮೇಲೆ ಆರ್​ಬಿಐ ಒಂದು ತಿಂಗಳ ನಿರ್ಬಂಧ ಹೇರಿ, ಠೇವಣಿ ದಾರರಿಗೆ ತಿಂಗಳಿಗೆ ₹ 25,000 ವಿತ್​ ಡ್ರಾ ಮಿತಿ ಹೇರಿದ ನಂತರ ಗ್ರಾಹಕರಿಗೆ ಸಹಜವಾಗಿಯೇ ಅಭದ್ರತೆ ಹೆಚ್ಚಾಗಿದೆ.

ಠೇವಣಿ ಇಡುವಾಗ ಬ್ಯಾಂಕ್​ಗಳ ಆಯ್ಕೆ ಹೇಗಿರಬೇಕು? ಹಣ ಡಿಪೋಸಿಟ್​​ ಇಡುವಾಗ ಆತುರದ ನಿರ್ಧಾರ ಮಾಡಬೇಡಿ ಎನ್ನುತ್ತಾರೆ ಹಿರಿಯ ಲೆಕ್ಕ ಪರಿಶೋಧಕ ವಿವೇಕ್​ ಮಲ್ಯ. ಟಿವಿ9 ಜೊತೆ ಫೇಸ್​ಬುಕ್​ ಲೈವ್​ ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದ ಕಾನೂನುಗಳು ಸಾಲ ಕೊಡುವವರ ವಿರುದ್ಧ ಹಾಗೂ ಸಾಲ ಪಡೆದವರ ಮೇಲಿನ ದಬ್ಬಾಳಿಕೆ ತಡೆಯುವುದಕ್ಕೋಸ್ಕರ ಇದೆ. ಆದರೆ ಠೇವಣಿ ಇಟ್ಟವರ ಭದ್ರತೆಗಾಗಿ ಯಾವುದೇ ಪ್ರಬಲ ಕಾನೂನುಗಳು ಇಲ್ಲ ಎಂದು ವಿಷಾದಿಸಿದರು.

ನಾವು ಬ್ಯಾಂಕ್​ ಮೇಲೆಯೇ ಅವಲಂಬಿತರಾಗಬೇಕಾಗುತ್ತದೆ. ನೀವು ಠೇವಣಿ ಇಟ್ಟ ಬ್ಯಾಂಕ್​ ಒಂದೊಮ್ಮೆ ಬಾಗಿಲು ಮುಚ್ಚಿದರೆ ನಿಮ್ಮ ಹಣಕ್ಕೆ ₹ 5 ಲಕ್ಷ ರೂ. ಇನ್ಶೂರೆನ್ಸ್​ ನೀಡಬೇಕು ಎಂಬ ನಿಯಮವಿದೆ. ಆದರೆ ಕಾನೂನು ಕ್ರಮಗಳೆಲ್ಲ ಮುಗಿದ ಮೇಲೆ ನಿಮ್ಮ ಹಣ ಕೈಗೆ ಸೇರುತ್ತದೆ. ನೀವು ಒಂದೇ ಬ್ಯಾಂಕ್​ನ ನಾಲ್ಕು ಬ್ರ್ಯಾಂಚ್​ಗಳಲ್ಲಿ ಠೇವಣಿ ಹಣ ಇಟ್ಟಿದ್ದರೆ ನಿಮಗೆ ಸಿಗುವ ಇನ್ಶೂರೆನ್ಸ್​ ಮಿತಿ ₹​ 5 ಲಕ್ಷ ಮಾತ್ರ. ಆದರೆ ನಾಲ್ಕು ಬೇರೆ ಬೇರೆ ಬ್ಯಾಂಕ್​ಗಳಲ್ಲೇ ಠೇವಣಿ ಇಟ್ಟು, ಆ ಬ್ಯಾಂಕ್​ಗಳಿಗೆ ತೊಂದರೆಯಾದರೆ ಪ್ರತಿ ಬ್ಯಾಂಕ್​ನಿಂದ ನಿಮ್ಮ ಠೇವಣಿಗೆ ತಲಾ ₹ 5 ಲಕ್ಷ ಇನ್ಶೂರೆನ್ಸ್​ ರಕ್ಷಣೆ ಇರುತ್ತದೆ. ನೀವು ಇರಿಸಿದ ಠೇವಣಿಯ ಮೊತ್ತ ₹ 5 ಲಕ್ಷಕ್ಕಿಂತಲೂ ಹೆಚ್ಚಾಗಿದ್ದರೂ ಠೇವಣಿಯ ಮಿತಿ ₹ 5 ಲಕ್ಷಕ್ಕೇ ಸೀಮಿತವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು ಎಂದು ಎಚ್ಚರಿಸುತ್ತಾರೆ ಅವರು.

ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಏನಾದರೂ ತೊಂದರೆಯಾದರೆ ಸರ್ಕಾರ ಮಧ್ಯ ಪ್ರವೇಶ ಮಾಡುತ್ತದೆ. ಕಾನೂನಿನ ಅನ್ವಯ ಕ್ರಮ ತೆಗೆದುಕೊಂಡು ಗ್ರಾಹಕರಿಗೆ ಮೋಸವಾಗದಂತೆ ನೋಡಿಕೊಳ್ಳುತ್ತದೆ. ಆದರೆ ಖಾಸಗಿ  ಬ್ಯಾಂಕ್​ಗಳಲ್ಲಿ ಠೇವಣಿ ಇಡುವಾಗ ಎಚ್ಚರ ಇರಲಿ. ಶೇ 1 ಅಥವಾ 2 ರಷ್ಟು  ಬಡ್ಡಿ ಹೆಚ್ಚು ಕೊಡುತ್ತಿದ್ದರೂ ಆತುರದ ನಿರ್ಧಾರ ಮಾಡಬಾರದು. ಈಗಿನ ದಿನಗಳಲ್ಲಂತೂ ಬ್ಯಾಂಕ್​ಗಳ ಆಯ್ಕೆ ಅತ್ಯಂತ ಮಹತ್ವ ಎಂದು ಹೇಳಿದರು.

ವಿಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Tue, 24 November 20

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು